ಕ್ರಿಕೆಟ್ಸೌಹಾರ್ದ ಲೆಜೆಂಡ್ ಕಪ್–2025 : ಕುಂದಾಪುರದಲ್ಲಿ 45+ ರಾಜ್ಯ ಮಟ್ಟದ ಕ್ರಿಕೆಟ್...

ಸೌಹಾರ್ದ ಲೆಜೆಂಡ್ ಕಪ್–2025 : ಕುಂದಾಪುರದಲ್ಲಿ 45+ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ; ಆನಂದ್ 11, ಬೆಂಗಳೂರು ಚಾಂಪಿಯನ್,ಫಿಶರ್ ಮೆನ್, ಮಲ್ಪೆ ರನ್ನರ್ಸ್ ಪ್ರಶಸ್ತಿ 

-

- Advertisment -spot_img

ಸೌಹಾರ್ದ ಲೆಜೆಂಡ್ ಕಪ್–2025 : ಕುಂದಾಪುರದಲ್ಲಿ 45+ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ; ಆನಂದ್ 11, ಬೆಂಗಳೂರು ಚಾಂಪಿಯನ್,ಫಿಶರ್ ಮೆನ್, ಮಲ್ಪೆ ರನ್ನರ್ಸ್ ಪ್ರಶಸ್ತಿ 

ಕುಂದಾಪುರ: ಕೆ.ಪಿ. ಸತೀಶ್ ಅವರ ನೇತೃತ್ವದಲ್ಲಿ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಸೌಹಾರ್ದ ಲೆಜೆಂಡ್ ಕಪ್ – 2025 45 ವರ್ಷ ಮೇಲ್ಪಟ್ಟ ಲೆಜೆಂಡ್‌ಗಳ ರಾಜ್ಯಮಟ್ಟದ ಹಗಲಿನ ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್ ಭಾನುವಾರ ಕ್ರೀಡಾ ಸಂಭ್ರಮದ ನಡುವೆ ಜರುಗಿತು. ವಿವಿಧ ಜಿಲ್ಲೆಗಳಿಂದ ಬಂದ ಹಿರಿಯ ಕ್ರಿಕೆಟಿಗರು ತಮ್ಮ ಅನುಭವ, ಸಾಮರ್ಥ್ಯ ಮತ್ತು ಕ್ರೀಡಾಸ್ಫೂರ್ತಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಆನಂದ್ 11, ಬೆಂಗಳೂರು ತಂಡವು ವಿಜಯ ಸಾಧಿಸಿತು. ತಂಡದ ಅಜ್ಮಲ್ ಕೋಲಾರ, ಶ್ರೀಕಾಂತ್, ಕಾರ್ತಿಕ್ ಬೂನ್ ನ್ಯಾಶ್, ಹರೀಶ್ ಬಾಬು, ಭಾಸ್ಕರ್ ಶೆಟ್ಟಿ, ಅಣ್ಣಯ್ಯಪ್ಪ ಮತ್ತು ಶೇಖ್ ಅಲಿ ತಮ್ಮ ಅದ್ಭುತ ಆಟದಿಂದ ತಂಡಕ್ಕೆ ಬಲ ತುಂಬಿದರು.

ಫಿಶರ್ ಮೆನ್, ಮಲ್ಪೆ ತಂಡವು ರನ್ನರ್ಸ್ ಪಟ್ಟಕ್ಕೇರಿತು. ಸತೀಶ್ ಜಿ, ಪುರುಷೋತ್ತಮ್ ಅರಸೀಕೆರೆ, ಶಂಕರ್ ಶಂಕಿ, ಮಹೇಂದ್ರ ಸಿಂಗ್ ಮಗ್ಗಿ, ಸಾಗರ್ ವಿಶ್ವ, ರಾಜಾ ಮಲ್ಪೆ, ಪ್ರಶಾಂತ್ ಶೆಟ್ಟಿ ಕರಾವಳಿ ಮತ್ತು ವಾದಿರಾಜ್ ಮಲ್ಪೆ ತಮ್ಮ ಶ್ರೇಷ್ಠ ಪ್ರದರ್ಶನದಿಂದ ಗಮನ ಸೆಳೆದರು.

ಟೂರ್ನಮೆಂಟ್‌ನಲ್ಲಿ ಆನಂದ್ 11, ಬೆಂಗಳೂರು ತಂಡವು ಅದ್ಭುತ ಪ್ರದರ್ಶನ ನೀಡುತ್ತಾ ಚಾಂಪಿಯನ್ ಪಟ್ಟ ಹಚ್ಚಿಕೊಂಡಿದ್ದು, ಟ್ರೋಫಿಯ ಜೊತೆಗೆ ₹1,01,111 ಬಹುಮಾನವನ್ನು ಪಡೆದಿದೆ. ಫಿಶರ್ ಮೆನ್, ಮಲ್ಪೆ ತಂಡವು ರನ್ನರ್ಸ್ ಪಟ್ಟಕ್ಕೇರಿದ್ದು, ಟ್ರೋಫಿಯೊಂದಿಗೆ ₹50,555 ಬಹುಮಾನವನ್ನು ಪಡೆದಿದೆ. 

ವೈಯಕ್ತಿಕ ಪ್ರಶಸ್ತಿಗಳು ಹೀಗಿವೆ:

ಮ್ಯಾನ್ ಆಫ್ ದ ಮ್ಯಾಚ್: ಶೇಖ್ ಅಲಿ

ಬೆಸ್ಟ್ ಬ್ಯಾಟ್ಸ್‌ಮನ್: ಅಜ್ಮಲ್, ಕೋಲಾರ

ಬೆಸ್ಟ್ ಬೌಲರ್: ಪುರುಷೋತ್ತಮ್ ಅರಸೀಕೆರೆ

ಬೆಸ್ಟ್ ವಿಕೆಟ್ ಕೀಪರ್: ಶಂಕರ್ ಶಂಕಿ

ಬೆಸ್ಟ್ ಫೀಲ್ಡರ್: ಪ್ರಕಾಶ್ ಮುನ್ನ ದೊಡ್ಡಣಗುಡ್ಡೆ (ಬಿಜಿ ಸ್ಪಾರ್ಕ್)

ಮ್ಯಾನ್ ಆಫ್ ದ ಸೀರೀಸ್: ಮಹೇಂದ್ರ ಸಿಂಗ್ ಮಗ್ಗಿ

ಹಿರಿಯ ಕ್ರಿಕೆಟಿಗರ ಕ್ರೀಡಾಭಿಮಾನ, ಫಿಟ್ನೆಸ್ ಹಾಗೂ ಅಚ್ಚಳಿಯದ ಕ್ರೀಡಾಸ್ಪೂರ್ತಿಯನ್ನು ಮತ್ತೊಮ್ಮೆ ಹೊಳೆಯಿಸಿದ ಈ ಟೂರ್ನಮೆಂಟ್‌ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಆಯೋಜಕರ ಪರಿಶ್ರಮ ಮತ್ತು ಆಟಗಾರರ ಉತ್ಸಾಹದಿಂದ ಕುಂದಾಪುರದಲ್ಲಿ ಕ್ರೀಡಾ ಹಬ್ಬದಂತ ವಾತಾವರಣ ನಿರ್ಮಾಣವಾಯಿತು.

LEAVE A REPLY

Please enter your comment!
Please enter your name here

fifteen − 13 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you