ಸೌಹಾರ್ದ ಲೆಜೆಂಡ್ ಕಪ್–2025 : ಕುಂದಾಪುರದಲ್ಲಿ 45+ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ; ಆನಂದ್ 11, ಬೆಂಗಳೂರು ಚಾಂಪಿಯನ್,ಫಿಶರ್ ಮೆನ್, ಮಲ್ಪೆ ರನ್ನರ್ಸ್ ಪ್ರಶಸ್ತಿ 

ಸೌಹಾರ್ದ ಲೆಜೆಂಡ್ ಕಪ್–2025 : ಕುಂದಾಪುರದಲ್ಲಿ 45+ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ; ಆನಂದ್ 11, ಬೆಂಗಳೂರು ಚಾಂಪಿಯನ್,ಫಿಶರ್ ಮೆನ್, ಮಲ್ಪೆ ರನ್ನರ್ಸ್ ಪ್ರಶಸ್ತಿ 

ಸೌಹಾರ್ದ ಲೆಜೆಂಡ್ ಕಪ್–2025 : ಕುಂದಾಪುರದಲ್ಲಿ 45+ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ; ಆನಂದ್ 11, ಬೆಂಗಳೂರು ಚಾಂಪಿಯನ್,ಫಿಶರ್ ಮೆನ್, ಮಲ್ಪೆ ರನ್ನರ್ಸ್ ಪ್ರಶಸ್ತಿ 

ಕುಂದಾಪುರ: ಕೆ.ಪಿ. ಸತೀಶ್ ಅವರ ನೇತೃತ್ವದಲ್ಲಿ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಸೌಹಾರ್ದ ಲೆಜೆಂಡ್ ಕಪ್ – 2025 45 ವರ್ಷ ಮೇಲ್ಪಟ್ಟ ಲೆಜೆಂಡ್‌ಗಳ ರಾಜ್ಯಮಟ್ಟದ ಹಗಲಿನ ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್ ಭಾನುವಾರ ಕ್ರೀಡಾ ಸಂಭ್ರಮದ ನಡುವೆ ಜರುಗಿತು. ವಿವಿಧ ಜಿಲ್ಲೆಗಳಿಂದ ಬಂದ ಹಿರಿಯ ಕ್ರಿಕೆಟಿಗರು ತಮ್ಮ ಅನುಭವ, ಸಾಮರ್ಥ್ಯ ಮತ್ತು ಕ್ರೀಡಾಸ್ಫೂರ್ತಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಆನಂದ್ 11, ಬೆಂಗಳೂರು ತಂಡವು ವಿಜಯ ಸಾಧಿಸಿತು. ತಂಡದ ಅಜ್ಮಲ್ ಕೋಲಾರ, ಶ್ರೀಕಾಂತ್, ಕಾರ್ತಿಕ್ ಬೂನ್ ನ್ಯಾಶ್, ಹರೀಶ್ ಬಾಬು, ಭಾಸ್ಕರ್ ಶೆಟ್ಟಿ, ಅಣ್ಣಯ್ಯಪ್ಪ ಮತ್ತು ಶೇಖ್ ಅಲಿ ತಮ್ಮ ಅದ್ಭುತ ಆಟದಿಂದ ತಂಡಕ್ಕೆ ಬಲ ತುಂಬಿದರು.

ಫಿಶರ್ ಮೆನ್, ಮಲ್ಪೆ ತಂಡವು ರನ್ನರ್ಸ್ ಪಟ್ಟಕ್ಕೇರಿತು. ಸತೀಶ್ ಜಿ, ಪುರುಷೋತ್ತಮ್ ಅರಸೀಕೆರೆ, ಶಂಕರ್ ಶಂಕಿ, ಮಹೇಂದ್ರ ಸಿಂಗ್ ಮಗ್ಗಿ, ಸಾಗರ್ ವಿಶ್ವ, ರಾಜಾ ಮಲ್ಪೆ, ಪ್ರಶಾಂತ್ ಶೆಟ್ಟಿ ಕರಾವಳಿ ಮತ್ತು ವಾದಿರಾಜ್ ಮಲ್ಪೆ ತಮ್ಮ ಶ್ರೇಷ್ಠ ಪ್ರದರ್ಶನದಿಂದ ಗಮನ ಸೆಳೆದರು.

ಟೂರ್ನಮೆಂಟ್‌ನಲ್ಲಿ ಆನಂದ್ 11, ಬೆಂಗಳೂರು ತಂಡವು ಅದ್ಭುತ ಪ್ರದರ್ಶನ ನೀಡುತ್ತಾ ಚಾಂಪಿಯನ್ ಪಟ್ಟ ಹಚ್ಚಿಕೊಂಡಿದ್ದು, ಟ್ರೋಫಿಯ ಜೊತೆಗೆ ₹1,01,111 ಬಹುಮಾನವನ್ನು ಪಡೆದಿದೆ. ಫಿಶರ್ ಮೆನ್, ಮಲ್ಪೆ ತಂಡವು ರನ್ನರ್ಸ್ ಪಟ್ಟಕ್ಕೇರಿದ್ದು, ಟ್ರೋಫಿಯೊಂದಿಗೆ ₹50,555 ಬಹುಮಾನವನ್ನು ಪಡೆದಿದೆ. 

ವೈಯಕ್ತಿಕ ಪ್ರಶಸ್ತಿಗಳು ಹೀಗಿವೆ:

ಮ್ಯಾನ್ ಆಫ್ ದ ಮ್ಯಾಚ್: ಶೇಖ್ ಅಲಿ

ಬೆಸ್ಟ್ ಬ್ಯಾಟ್ಸ್‌ಮನ್: ಅಜ್ಮಲ್, ಕೋಲಾರ

ಬೆಸ್ಟ್ ಬೌಲರ್: ಪುರುಷೋತ್ತಮ್ ಅರಸೀಕೆರೆ

ಬೆಸ್ಟ್ ವಿಕೆಟ್ ಕೀಪರ್: ಶಂಕರ್ ಶಂಕಿ

ಬೆಸ್ಟ್ ಫೀಲ್ಡರ್: ಪ್ರಕಾಶ್ ಮುನ್ನ ದೊಡ್ಡಣಗುಡ್ಡೆ (ಬಿಜಿ ಸ್ಪಾರ್ಕ್)

ಮ್ಯಾನ್ ಆಫ್ ದ ಸೀರೀಸ್: ಮಹೇಂದ್ರ ಸಿಂಗ್ ಮಗ್ಗಿ

ಹಿರಿಯ ಕ್ರಿಕೆಟಿಗರ ಕ್ರೀಡಾಭಿಮಾನ, ಫಿಟ್ನೆಸ್ ಹಾಗೂ ಅಚ್ಚಳಿಯದ ಕ್ರೀಡಾಸ್ಪೂರ್ತಿಯನ್ನು ಮತ್ತೊಮ್ಮೆ ಹೊಳೆಯಿಸಿದ ಈ ಟೂರ್ನಮೆಂಟ್‌ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಆಯೋಜಕರ ಪರಿಶ್ರಮ ಮತ್ತು ಆಟಗಾರರ ಉತ್ಸಾಹದಿಂದ ಕುಂದಾಪುರದಲ್ಲಿ ಕ್ರೀಡಾ ಹಬ್ಬದಂತ ವಾತಾವರಣ ನಿರ್ಮಾಣವಾಯಿತು.

Leave a Reply

Your email address will not be published. Required fields are marked *