ಕ್ರಿಕೆಟ್ಶಾರ್ಜಾದ ಜೆ.ಎಂ.ಆರ್.ಸ್ಪೋರ್ಟಿಂಗ್ ಟ್ರೋಫಿ ಜಗರ್ ನಾಟ್ ಮಡಿಲಿಗೆ

ಶಾರ್ಜಾದ ಜೆ.ಎಂ.ಆರ್.ಸ್ಪೋರ್ಟಿಂಗ್ ಟ್ರೋಫಿ ಜಗರ್ ನಾಟ್ ಮಡಿಲಿಗೆ

-

- Advertisment -spot_img

*ಶಾರ್ಜಾದ ಜೆ.ಎಂ.ಆರ್.ಸ್ಪೋರ್ಟಿಂಗ್ ಟ್ರೋಫಿ ಜಗರ್ ನಾಟ್ ಮಡಿಲಿಗೆ*


ಅರಬ್ ಸಂಯುಕ್ತ ರಾಷ್ಟ್ರದ ಶಾರ್ಜಾದಲ್ಲಿ ಜೆ.ಎಂ.ಆರ್ ಸ್ಪೋರ್ಟಿಂಗ್ ಕಮಿಟಿ ಆಯೋಜಿಸಿದ 20 ಓವರಗಳ ಲೆದರಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಯು.ಎ.ಯಿ ಜಗ್ಗರನಾಟ್ ಕ್ಲಾಸಿಕ್ ಏಸಸ್ ತಂಡವು ಈ ಭಾರಿಯ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಶಾರ್ಜಾದ ಜೆ.ಎಂ.ಆರ್ ಸ್ಪೋರ್ಟಿಂಗ್ ಮೈದಾನದಲ್ಲಿ ಜರಗಿದ ಸೀಸನ್ 8ರ ಈ ಪಂದ್ಯಾಕೂಟದಲ್ಲಿ ಲೆದರ್ ಬಾಲ್ ಕ್ರಿಕೆಟನಲ್ಲಿ ಪ್ರಸಿದ್ಧಿ ಪಡೆದಿರುವ ಯು.ಎ.ಇ ನ ಪ್ರಮುಖ ನಾಲ್ಕು ತಂಡಗಳಾದ ಜಗ್ಗರನಾಟ್ ಕ್ಲಾಸಿಕ್ ಏಸಸ್, ಗೋಜಲ್ ಯುನೈಟೆಡ ಯು.ಎ ಯಿ,ನೆಟ್ವರ್ಕ್ ಹಾಗೂ ದಿ ರಾಯಲ್ ಮೇವರಿಕ್ಸ್ ತಂಡಗಳು ಭಾಗವಹಿಸಿದ್ದವು.

ಫೈನಲ್ ಪಂದ್ಯವು ಗೋಜಲ್ ಯುನೈಟೆಡ್ ಯು.ಎ.ಯಿ ಹಾಗೂ ಜಗ್ಗರನಾಟ್ ಕ್ಲಾಸಿಕ್ ಏಸಸ್ ತಂಡಗಳ ನಡುವೆ ಜರಗಿತು.ಮೊದಲು ಬ್ಯಾಟ್ ಮಾಡಿದ ಗೋಜಲ್ ಯುನೈಟೆಡ್ ತಂಡವು 20 ಓವರಗಳಲ್ಲಿ 9 ವಿಕೆಟ್ ನಷ್ಟಕ್ಕೆ 206 ರನ್ನುಗಳ ಬೃಹತ್ ಮೊತ್ತವನ್ನು ಪೇರಿಸಿತು.ಈ ಕಠಿಣ ಗುರಿಯನ್ನು ಬೆಂಬತ್ತಿದ್ದ ಜಗರನಾಟ್ ತಂಡವು ಕೇವಲ 15.5 ಓವರಗಳಲ್ಲಿ 5 ವಿಕೆಟುಗಳನ್ನು ಕಳೆದುಕೊಂಡು ಸಲೀಸಾಗಿ 207ರನ್ನು ಗಳಿಸಿ 5 ವಿಕೆಟುಗಳಿಂದ ಗೋಜಲ್ ಯುನೈಟೆಡ್ ತಂಡವನ್ನು ಭರ್ಜರಿಯಾಗಿ ಮಣಿಸಿ ವಿಜಯಪತಾಕೆ ಹಾರಿಸಿತು. ಜಗರನಾಟ್ ತಂಡದ ಬೀಸುದಾಂಡಿಗ ಗಯಾನಾ ಚಿಂತಕ್ ಕೇವಲ 40 ಚೆಂಡುಗಳಲ್ಲಿ 7 ಗಗನಚುಂಬಿ ಸಿಕ್ಸರ್ ಹಾಗೂ 10 ಮನಮೋಹಕ ಬೌಂಡರಿಯೊಂದಿಗೆ ಸಿಡಿಲಬ್ಬರದ 96ರನ್ನು ಸಿಡಿಸಿ ತಂಡದ ವಿಜಯಕ್ಕೆ ಆಸರೆಯಾದರು. ಬೌಲಿಂಗನಲ್ಲೂ ಮಿಂಚಿದ ಚಿಂತಕ್ 3ಓವರಗಳಲ್ಲಿ ಒಂದು ಅಮೂಲ್ಯ ವಿಕೆಟನ್ನು ಕೂಡಾ ಪಡೆಯುವುದರ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಅಭಿನಂದಿತರಾದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಜಗರನಾಟ್ ತಂಡವು ಮಿರಮಿರನೆ ಮಿಂಚುವ ಜೆ.ಎಂ.ಆರ್ ಸ್ಪೋರ್ಟಿಂಗ್ ಟ್ರೋಫಿ ಸಹಿತ 1500 ಎ.ಇ.ಡಿ ನಗದು ಹಾಗೂ ಪಾರಿತೋಷಕಗಳನ್ನು ಶಾರ್ಜಾದ ಜೆ.ಎಂ.ಆರ್ ಸ್ಪೋರ್ಟಿಂಗ್ ಕಮಿಟಿಯ ಮುಖ್ಯಸ್ಥರಾದ ಶ್ರೀಯುತ ತಲಹ್ ರವರಿಂದ ತಂಡದ ನಾಯಕ ಜೊನಾಥನ್ ಡೇನಿಯಲ್ ಸ್ವೀಕರಿಸಿದರು. ಗೋಜಲ್ ಯುನೈಟೆಡ್ ತಂಡದ ನಾಯಕ ಶ್ರೀಯುತ ರನ್ಝಾನ್ ಸೋಲೆಹ್ ರನ್ನರ್ ಅಪ್ ಪ್ರಶಸ್ತಿ ನಗದು ಪಾರಿತೋಷಕಗಳನ್ನು ದುಬೈ ಟೆಕ್ನೋಟೈಟಾನ್ಸ್ ತಂಡದ ನಾಯಕ ಹಾಗೂ ಸ್ಪೋರ್ಟ್ಸ್ ಕನ್ನಡ ಚಾನೆಲಿನ ಮಧ್ಯಪ್ರಾಚ್ಯ ದೇಶಗಳ ಪ್ರತಿನಿಧಿ ಶ್ರೀಯುತ ವಿಠಲ್ ರಿಶಾನ್ ನಾಯಕರಿಂದ ಪಡೆದರು.

ಜನಮನ ಸೆಳೆದ ಈ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅರಬ್ ಸಂಯುಕ್ತ ರಾಷ್ಟ್ರದ ಪ್ರಮುಖ ಗಣ್ಯರು,ಕ್ರೀಡಾಪಟುಗಳು ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಂಡಿದ್ದರು.

ಈ ಅಪೂರ್ವ ಪಂದ್ಯಾವಳಿಯ
ವಿಜೇತರಿಗೆ,ಪಾಲ್ಗೊಂಡ ಕ್ರೀಡಾಪಟುಗಳಿಗೆ,ವೀಕ್ಷಿಸಿದ ಎಲ್ಲಾ ಕ್ರೀಡಾಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡ ಚಾನೆಲಿನ ಸ್ಥಾಪಕ ಶ್ರೀರಾಮಕೃಷ್ಣ ಆಚಾರ್ಯರು ಶುಭಾಶಯ ಕೋರಿದ್ದಾರೆ.

ಮನುಕುಲಕ್ಕೆ ಕ್ರೀಡೆಗಳು ಸದಾ ಬೆಳಕಾಗಿರಲಿ.

ಬರಹ: ಪಿ.ಲಾತವ್ಯ ಆಚಾರ್ಯ ಉಡುಪಿ.

LEAVE A REPLY

Please enter your comment!
Please enter your name here

1 × 1 =

Latest news

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...
- Advertisement -spot_imgspot_img

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್

ಚಿತ್ರದುರ್ಗದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2026: ₹2 ಲಕ್ಷ ಪ್ರಥಮ ಬಹುಮಾನ, ಸರಣಿ ಶ್ರೇಷ್ಠ ವಿಜೇತರಿಗೆ ಹೋಂಡಾ ಶೈನ್ ಬೈಕ್ ಚಿತ್ರದುರ್ಗ:  ವಿಶ್ವಕರ್ಮ ಸಮುದಾಯದ ಯುವಕರ ಕ್ರೀಡಾ ಪ್ರತಿಭೆಯನ್ನು...

Must read

- Advertisement -spot_imgspot_img

You might also likeRELATED
Recommended to you