
ಕೆ.ಪಿ.ಸತೀಶ್ ಸಾರಥ್ಯದ ಸೌಹಾರ್ದ ಲೆಜೆಂಡ್ಸ್ ಕಪ್ ಗೆ ಚಾಲನೆ
ಕುಂದಾಪುರ- ದಿ.ಪ್ರತಾಪ್ಚಂದ್ರ ಹೆಗ್ಡೆ ಚಕ್ರವರ್ತಿ ಕುಂದಾಪುರ,ದಿ.ಅಶೋಕ್ ಬೈಲಕೆರೆ ಸನ್ನಿ ಕ್ರಿಕೆಟರ್ಸ್ ಉಡುಪಿ ಇವರ ಸವಿ ನೆನಪಿಗಾಗಿ,ಕುಂದಾಪುರ ಗಾಂಧಿ ಮೈದಾನದಲ್ಲಿ ಕೆ.ಪಿ ಸತೀಶ್ ಇವರ ಸಾರಥ್ಯದಲ್ಲಿ ಸೌಹಾರ್ದ ಲೆಜೆಂಡ್ಸ್ ಟ್ರೋಫಿ-2025 ಉದ್ಘಾಟನಾ ಸಮಾರಂಭ ಜರುಗಿತು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ,ಶ್ರೀ.ರಮೇಶ್ ಶೇರಿಗಾರ್ ಬೈಲಕೆರೆ, ಶ್ರೀ.ಹರೀಶ್ ಶೇರಿಗಾರ್ ಬೈಲಕೆರೆ ಮತ್ತು ಕುಟುಂಬಸ್ಥರು, ಶ್ರೀಮತಿ ವೇದಾವತಿ ಹೆಗ್ಡೆ ಮತ್ತು ಕುಟುಂಬಸ್ಥರು, ಶ್ರೀ.ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ, ಶ್ರೀ.ಸುರೇಶ್ ಶೆಟ್ಟಿ ಎರ್ಮಾಳ್,ಯುವ ಜನ ಸಬಲೀಕರಣ ಇಲಾಖೆ ನಿರ್ದೇಶಕರಾದ ಕುಸುಮಾಕರ್ ಶೆಟ್ಟಿ, ಆಯೋಜಕರಾದ ಕೆ.ಪಿ.ಸತೀಶ್,ಪ್ರದೀಪ್ ವಾಜ್ ಚಕ್ರವರ್ತಿ ಕುಂದಾಪುರ, ಸತೀಶ್ ಕೋಟ್ಯಾನ್ ಚಕ್ರವರ್ತಿ ಕುಂದಾಪುರ, ನಾರಾಯಣ ಶೆಟ್ಟಿ ಟೊರ್ಪೆಡೋಸ್, ರಾಘವೇಂದ್ರ ಚರಣ್ ನಾವಡ ಚಕ್ರವರ್ತಿ, ಸಂತೋಷ್ ಹೆಮ್ಮಾಡಿ, ಮನೋಜ್ ನಾಯರ್ ಚಕ್ರವರ್ತಿ, ಕುಂದಾಪುರ,ರಂಜಿತ್ ಶೆಟ್ಟಿ ಚಕ್ರವರ್ತಿ ಕುಂದಾಪುರ, ರಾಮಕೃಷ್ಣ ಆಚಾರ್ ಸ್ಪೋರ್ಟ್ಸ್ ಕನ್ನಡ, ನಾಗೇಶ್ ನಾವಡ, ಚಾಲೆಂಜ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.

ಶಿವನಾರಾಯಣ ಐತಾಳ್ ಕೋಟ ಕಾರ್ಯಕ್ರಮ ನಿರೂಪಿಸಿದರು.




