Categories
ಕ್ರಿಕೆಟ್

ಬೈಂದೂರಿನಲ್ಲಿ ವಿಕ್ರಮ್ ಕ್ರಿಕೆಟ್ ಕ್ಲಬ್ ವೃತ್ತಿಪರ ಕ್ರಿಕೆಟ್ ಕೋಚಿಂಗ್ ಕ್ಯಾಂಪ್

ಆಗಸ್ಟ್ 07, 2023:  ವಿಕ್ರಮ್ ಕ್ರಿಕೆಟ್ ಕ್ಲಬ್ ಕರ್ನಾಟಕದ ಅತ್ಯಂತ ಹಳೆಯ ಮತ್ತು ಅತ್ಯುತ್ತಮ ಕ್ರಿಕೆಟ್ ತಂಡಗಳಲ್ಲಿ ಒಂದಾಗಿದೆ.  ವಿಕ್ರಮ್ ಕ್ರಿಕೆಟ್ ಕ್ಲಬ್  ತನ್ನ ವೃತ್ತಿಪರ ಕ್ರಿಕೆಟ್ ಶಿಬಿರವನ್ನು  ಬೈಂದೂರಿನಲ್ಲಿ ಪ್ರಾರಂಭಿಸಲು ಸಿದ್ಧವಾಗಿದೆ.
10 ರಿಂದ 23 ವರ್ಷ ವಯಸ್ಸಿನ ಬಾಲಕ ಮತ್ತು ಬಾಲಕಿಯರಿಗೆ ಕ್ರಿಕೆಟ್ ತರಬೇತಿ  ಪ್ರಾರಂಭವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ಪ್ರತಿಭೆಗಳಲ್ಲಿ ತೀವ್ರ ಏರಿಕೆ ಕಾಣುತ್ತಿರುವ ಬೈಂದೂರಿನಲ್ಲಿ ಶಿಬಿರವನ್ನು ಸ್ಥಾಪಿಸಲು ವಿಕ್ರಮ್ ಕ್ರಿಕೆಟ್ ಕ್ಲಬ್ ಉತ್ಸುಕರಾಗಿದ್ದಾರೆ.  ಈ ಕ್ರಿಕೆಟ್  ಕ್ಯಾಂಪ್ ಪರಿಣಿತ ಕೋಚಿಂಗ್ ವಿಧಾನಗಳು ಮತ್ತು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಈ ಪ್ರದೇಶದಲ್ಲಿ ಕ್ರಿಕೆಟಿಗರನ್ನು ಬೆಳೆಯಲು ಸಹಾಯ ಮಾಡುತ್ತದೆ. ಬೈಂದೂರಿನಾದ್ಯಂತದ ಪ್ರತಿಭೆಗಳನ್ನು ಪೋಷಿಸುವುದು. ಭವಿಷ್ಯದ ಕ್ರಿಕೆಟಿಗರನ್ನು ಅಭಿವೃದ್ಧಿಪಡಿಸುವುದು ವಿಕ್ರಮ್ ಕ್ರಿಕೆಟ್ ಕ್ಲಬ್ ಅಕಾಡೆಮಿಯ ಪ್ರಾಥಮಿಕ ಉದ್ದೇಶ.
ಈ ಪ್ರದೇಶದಲ್ಲಿ ಆಟದ ಬಗ್ಗೆ ಆಳವಾದ ಉತ್ಸಾಹ ಹೊಂದಿರುವ ಸಾಕಷ್ಟು ಮಕ್ಕಳು ಮತ್ತು ಯುವಕರಿದ್ದಾರೆ ಮತ್ತು ಅವರು ಬೈಂದೂರಿನ ವಿಕ್ರಮ್ ಕ್ರಿಕೆಟ್ ಕ್ಲಬ್ ನ  ತರಬೇತಿ ವಿಧಾನಗಳು ಮತ್ತು ಸೌಲಭ್ಯಗಳಿಗೆ ಒಡ್ಡಿಕೊಳ್ಳುವುದರಿಂದ ಪ್ರಯೋಜನ ಪಡೆಯುತ್ತಾರೆ. ಒಟ್ಟಾಗಿ, ಬೈಂದೂರಿನಿಂದ ಕ್ರಿಕೆಟ್ ಪ್ರತಿಭೆಯನ್ನು ಹೊರತೆಗೆಯಲು ವಿಕ್ರಮ್ ಕ್ರಿಕೆಟ್ ಕ್ಲಬ್  ಆಶಿಸುತ್ತದೆ.
ವಿಕ್ರಮ್ ಕ್ರಿಕೆಟ್ ಕ್ಲಬ್ ಕ್ರಿಕೆಟ್ ತರಬೇತಿ ಶಿಬಿರವು ಅತ್ಯಾಧುನಿಕ ಮೂಲಸೌಕರ್ಯ ಮತ್ತು ಪರಿಣಿತ ತರಬೇತಿಯೊಂದಿಗೆ ಹುಡುಗರು ಮತ್ತು ಹುಡುಗಿಯರಿಗೆ ತರಬೇತಿ ಕೇಂದ್ರವಾಗಿದೆ.  ನೆಟ್ ಸೌಲಭ್ಯಗಳು, ಅಭ್ಯಾಸ ಪಂದ್ಯಗಳು, ಒನ್ ಆನ್ ಒನ್ ಕೋಚಿಂಗ್, ಲೀಗ್ ಪಂದ್ಯಗಳು, ಕ್ರಿಕೆಟ್ ಟೂರ್ನಮೆಂಟ್ ಗಳು  ಹೀಗೆ ವಿವಿಧ ರೀತಿಯಲ್ಲಿ ಅನುಭವಿ ತರಬೇತುದಾರರು ಶಿಬಿರದಲ್ಲಿ ಪಾಲ್ಗೊಂಡು ಮಕ್ಕಳನ್ನು ಪರಿಣಿತರಾಗಿ ಮಾಡಲಿದ್ದಾರೆ. ಇದಲ್ಲದೆ, ಈ ಶಿಬಿರವು ಬೌಲಿಂಗ್ ಕೋಚಿಂಗ್, ಬ್ಯಾಟಿಂಗ್ ಕೋಚಿಂಗ್, ಒನ್ ಆನ್ ಒನ್ ಕೋಚಿಂಗ್ ಮತ್ತು ವರ್ಚುವಲ್ ತರಬೇತಿಯನ್ನು ನೀಡುತ್ತದೆ. ಶಿಬಿರದ ತರಬೇತಿ ಕಾರ್ಯಕ್ರಮಗಳು ಫೀಲ್ಡಿಂಗ್, ಬ್ಯಾಟಿಂಗ್ ಮತ್ತು ಬೌಲಿಂಗ್ ಸೇರಿದಂತೆ ಆಟದ ಎಲ್ಲಾ ಅಂಶಗಳ ಮೇಲೆ ಕೇಂದ್ರೀಕರಿಸುತ್ತವೆ.
ಹೆಚ್ಚಿನ ವಿವರಗಳಿಗಾಗಿ  ಮತ್ತು ನೋಂದಣಿಗಾಗಿ ಮೊಹಮ್ಮದ್ ಅರ್ಮಾನ್, ದಿನೇಶ್ ಕೆ  ಅಥವಾ ರಾಜೇಶ್ ಆಚಾರ್ ಇವರುಗಳನ್ನು ಸಂಪರ್ಕಿಸಬಹುದು.
ದೂರವಾಣಿ:  8792444376, 6363852771, 9916440337
Categories
ಕ್ರಿಕೆಟ್

ಉದ್ಯಾನ ನಗರಿ ಬೆಂಗಳೂರಿನಲ್ಲಿ ಮೋದಿ ಕ್ರಿಕೆಟ್ ಕಪ್ 2023

ಬೆಂಗಳೂರು- ಮೋದಿ ಕ್ರಿಕೆಟ್ ಕಪ್ 2023 ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯು ಸೆಪ್ಟೆಂಬರ್ 16 ರಿಂದ 17 ರವರೆಗೆ ಬೆಂಗಳೂರಿನ ಜಯನಗರದಲ್ಲಿರುವ ಚಂದ್ರಗುಪ್ತ ಮೌರ್ಯ (ಶಾಲಿನಿ)  ಮೈದಾನದಲ್ಲಿ ನಡೆಯಲಿದೆ.
ಈ ಕ್ರಿಕೆಟ್ ಪಂದ್ಯಾವಳಿಯನ್ನು ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುವ  ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ  ತೇಜಸ್ವಿ ಸೂರ್ಯರವರು ಆಯೋಜಿಸಿದ್ದಾರೆ.
ಇದು ಉಚಿತ ಪ್ರವೇಶ ಶುಲ್ಕ  ಹೊಂದಿರುವ  ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯಾಗಿದ್ದು,ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಅವರ ಸಾರಥ್ಯದಲ್ಲಿ ನಡೆಯಲಿದೆ. ದಕ್ಷಿಣ ಬೆಂಗಳೂರಿನಾದ್ಯಂತ ಒಟ್ಟು 64 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಪ್ರತಿ ತಂಡದಲ್ಲೂ ಕರ್ನಾಟಕದ 3 ಐಕಾನ್ ಆಟಗಾರರು ಪ್ರತಿನಿಧಿಸಲಿದ್ದಾರೆ. ಪಂದ್ಯಾವಳಿಯು ನಾಲ್ಕು ಬೇರೆ ಬೇರೆ ಮೈದಾನಗಳಲ್ಲಿ ನಡೆಯಲಿದೆ.
ಪಂದ್ಯಾವಳಿಯ ವಿಜೇತರು ಟ್ರೋಫಿ ಮತ್ತು 1,00,000 ನಗದು ಬಹುಮಾನವನ್ನು ಪಡೆಯುತ್ತಾರೆ. ರನ್ನರ್ಸ್ ಅಪ್ ತಂಡವು 50,000 ನಗದು ಬಹುಮಾನ ಮತ್ತು ಟ್ರೋಫಿಯನ್ನು ಪಡೆಯುತ್ತದೆ. ಮ್ಯಾನ್ ಆಫ್ ದಿ ಸೀರೀಸ್ ಆಟಗಾರ,  ಅತ್ಯುತ್ತಮ ಬ್ಯಾಟ್ಸ್‌ಮನ್, ಉತ್ತಮ ಬೌಲರ್ ಮತ್ತು  ಮ್ಯಾನ್ ಆಫ್ ದಿ ಮ್ಯಾಚ್ ಆಕರ್ಷಕ ಟ್ರೋಫಿಯನ್ನು ಪಡೆಯುತ್ತಾರೆ. ನಾಕೌಟ್ ಪಂದ್ಯಾವಳಿಯಲ್ಲಿ ವಿಜೇತರ ಟ್ರೋಫಿಗಾಗಿ ಒಟ್ಟು 64 ತಂಡಗಳು ಸೆಣಸಲಿವೆ. ಬಸವನಗುಡಿ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಚಿಕ್ಕಪೇಟೆ, ಗೋವಿಂದರಾಜ ನಗರ, ಜಯನಗರ, ಪದ್ಮನಾಭನಗರ, ವಿಜಯನಗರ ಅಸೆಂಬ್ಲಿ ಕಾನ್ಸ್ಟಿಟ್ಯೂಷನ್ ಗೆ ಸೇರಿದ  ಆಟಗಾರರ ತಂಡಗಳು ಭಾಗವಹಿಸಲಿವೆ.  ಚಂದ್ರಗುಪ್ತ ಮೌರ್ಯ (ಶಾಲಿನಿ)  ಮೈದಾನದಲ್ಲಿ  ನಡೆಯುವ ಪಂದ್ಯಗಳನ್ನು ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ  ವಿವೇಕ್ ಗೌಡ @ 9611260592  ಅಥವಾ   ಪವನ್ ವಸಿಷ್ಠ @ 9611018831 ಇವರನ್ನು ಸಂಪರ್ಕಿಸಬಹುದಾಗಿದೆ.
Categories
ಕ್ರಿಕೆಟ್

ಸೌದಿ ಅರೇಬಿಯಾದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ 2023- ಕೆ.ಪಿ.ಎಲ್ ಸೀಸನ್-1

ಆಸಿಫ್ ಕೋಡಿ, ಅಫ್ವಾನ್, ಇಮ್ತಿಯಾಜ್ ಮತ್ತು ಇಮ್ರಾನ್ ಇವರೆಲ್ಲರ ಒಗ್ಗೂಡುವಿಕೆಯಿಂದ ಕಿಂಗ್ಡಮ್ ಆಫ್ ಸೌದಿ ಅರೇಬಿಯಾದ ಅಲ್ ಕೋಬರ್ ದಮಾಮ್ ನ  ERCA ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ 2023  ಎಂಬ  ಕ್ರಿಕೆಟ್ ಪಂದ್ಯಾವಳಿಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಪಂದ್ಯಾವಳಿಯ ಆಯೋಜಕರ ವರದಿಗಳು ತಿಳಿಸಿವೆ.
” ಕೆಪಿಎಲ್ ಸೀಸನ್ 1″ ಎಂದು ಕರೆಯಲ್ಪಡುವ ಪಂದ್ಯಾವಳಿಯು ERCA ಗ್ರೌಂಡ್ಸ್ ನಲ್ಲಿ  ಇದೇ  ಸೆಪ್ಟೆಂಬರ್ 28 ಮತ್ತು 29ರಂದು ನಡೆಯಲಿದೆ ಎಂದು ಆಯೋಜಕರು ಹೇಳಿದ್ದಾರೆ. ಈ ಪಂದ್ಯಾವಳಿಯಲ್ಲಿ          ಕರ್ನಾಟಕದ ಆಟಗಾರರನ್ನು ಒಳಗೊಂಡ ಎಂಟು ತಂಡಗಳು ಭಾಗವಹಿಸಲಿವೆ.
ಈ ಪಂದ್ಯಾವಳಿಯಲ್ಲಿ ವಿಜೇತ ತಂಡವು 5001 ಸೌದಿ ರಿಯಾಲ್ ಮತ್ತು ವಿಜೇತ ಟ್ರೋಫಿಯನ್ನು ಪಡೆದುಕೊಳ್ಳುತ್ತದೆ, ರನ್ನರ್ ಅಪ್ ಗಳು 3001 ಸೌದಿ ರಿಯಾಲ್ ಮತ್ತು ಟ್ರೋಫಿಯನ್ನು ಜಯಿಸಲಿದೆ. ಪ್ರತಿ ಪಂದ್ಯದಲ್ಲೂ ಮ್ಯಾನ್ ಆಫ್ ದಿ ಮ್ಯಾಚ್ ಟ್ರೋಫಿ ಮತ್ತು ಆಕರ್ಷಕ  ಉಡುಗೊರೆ ಬಹುಮಾನವನ್ನು ಗೆಲ್ಲುತ್ತಾರೆ. ಅತ್ಯುತ್ತಮ ಬ್ಯಾಟ್ಸ್‌ಮನ್,  ಉತ್ತಮ ಬೌಲರ್ ,ಬೆಸ್ಟ್ ವಿಕೆಟ್ ಕೀಪರ್  ಮತ್ತು ಮ್ಯಾನ್ ಆಫ್ ದಿ ಸೀರೀಸ್ ನಂತಹ ವೈಯಕ್ತಿಕ ವಿಜೇತರಿಗೆ ಕೂಡ ಹಲವಾರು ಬಹುಮಾನಗಳನ್ನು ನೀಡಲಾಗುತ್ತಿದೆ ಎಂದು ಕ್ಲಬ್‌ನ ಮುಖ್ಯಸ್ಥರು ಸ್ಪೋರ್ಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.
Categories
ಕ್ರಿಕೆಟ್

49ರ ಹರೆಯದಲ್ಲೇ ಬದುಕಿನ ಹೋರಾಟ ನಿಲ್ಲಿಸಿದ ಜಿಂಬಾಬ್ವೆಯ ಲೆಜೆಂಡರಿ ಕ್ರಿಕೆಟಿಗ ಮಾಜಿ ನಾಯಕ ಹೀತ್ ಸ್ಟ್ರೀಕ್

ಜಿಂಬಾಬ್ವೆ ಕ್ರಿಕೆಟ್ ತಂಡದ  ಮಾಜಿ ನಾಯಕ ಮತ್ತು ದಿಗ್ಗಜ ಅನುಭವಿ ಆಟಗಾರ ಹೀತ್ ಸ್ಟ್ರೀಕ್ ತಮ್ಮ 49 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ.  ಭಾನುವಾರ  ಅವರ ಸಾವಿನ ಸುದ್ದಿಯಲ್ಲಿ ಅಭಿಮಾನಿಗಳು ಮುಳುಗಿದ್ದಾರೆ. ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಬೌಲರ್, ಆಲ್ ರೌಂಡರ್ ಆಗಿ ಕ್ರಿಕೆಟ್ ಲೋಕದಲ್ಲಿ ಹೆಸರು ಮಾಡಿದ್ದ  ಹೀತ್ ಸ್ಟ್ರೀಕ್  ಜಿಂಬಾಬ್ವೆಗಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನೇಕ ಪಂದ್ಯ-ವಿಜೇತ ಪ್ರದರ್ಶನಗಳನ್ನು ಗೆಲ್ಲಲು ಶ್ರಮಿಸಿದ್ದರು.
2000 ರಲ್ಲಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯು ಚೆಂಡು ಮತ್ತು ಬ್ಯಾಟಿಂಗ್‌ನಲ್ಲಿ ಪ್ರಬಲ ಪ್ರದರ್ಶನ ನೀಡುತ್ತಿದ್ದ  ಹೀತ್ ಸ್ಟ್ರೀಕ್ ಅವರನ್ನು  ಟೆಸ್ಟ್ ಮತ್ತು ODI ಎರಡೂ ತಂಡಗಳಿಗೂ ನಾಯಕನನ್ನಾಗಿ ಮಾಡಿತ್ತು. 2000-2004ರ ಅವಧಿಯಲ್ಲಿ  ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನ ಉತ್ತಮವಾಗಿತ್ತು. ಹೀತ್ ಸ್ಟ್ರೀಕ್ ಜಿಂಬಾಬ್ವೆಗೆ ಸುದೀರ್ಘ ಕಾಲ ನಾಯಕತ್ವ ವಹಿಸಿದ್ದರು.   ಈ ಸಮಯದಲ್ಲಿ, ಅವರು ಅನೇಕ ದೊಡ್ಡ ಪಂದ್ಯಗಳಲ್ಲಿ ತಂಡವನ್ನು ಗೆದ್ದ ಸಾಧನೆ ಮಾಡಿದ್ದರು.  ಹೀತ್ ಸ್ಟ್ರೀಕ್ ಜಿಂಬಾಬ್ವೆ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗ ಎಂದು ಕರೆಸಿಕೊಳ್ಳುತ್ತಾರೆ. ಒಂದು ಹಂತದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಒಬ್ಬಂಟಿಯಾಗಿ ಮೇಲಕ್ಕೆತ್ತುವ ಪ್ರಯತ್ನ  ಹೀತ್ ಸ್ಟ್ರೀಕ್ ನಡೆಸಿದ್ದರು. ಹೀತ್ ಸ್ಟ್ರೀಕ್ ಬೌಲಿಂಗ್ ಮೂಲಕ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಸಾಕಷ್ಟು ಕೊಡುಗೆ ನೀಡಿ ಗಮನಸೆಳೆದಿದ್ದರು.  ಹೀತ್ ಸ್ಟ್ರೀಕ್ ಜಿಂಬಾಬ್ವೆ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗ ಎಂದು ಕರೆಸಿಕೊಳ್ಳುತ್ತಾರೆ.
ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ದಾಖಲೆಗಳನ್ನು ಕೂಡ ಬರೆದುಕೊಂಡಿರುವ ಇವರು ಜಿಂಬಾಬ್ವೆ ಪರ ಹಲವು ವಿಶೇಷ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಜಿಂಬಾಬ್ವೆ ತಂಡದ ಪರವಾಗಿ 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 2005ರಲ್ಲಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಅಂತ್ಯವಾಗಿತ್ತು. ಇನ್ನು ನಿವೃತ್ತಿಯ ಬಳಿಕವೂ ಹೀತ್ ಸ್ಟ್ರೀಕ್ ಕ್ರಿಕೆಟ್ ಅಂಗಳದಲ್ಲಿ ಕೋಚ್ ಆಗಿ ಸಕ್ರಿಯವಾಗಿದ್ದರು. ಜಿಂಬಾಬ್ವೆ ಸೇರಿದಂತೆ ಸ್ಕಾಟ್ಲೆಂಡ್, ಬಾಂಗ್ಲಾದೇಶ ಹಾಗೂ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೂ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಹೀತ್ ಸ್ಟ್ರೀಕ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಕ್ಯಾನ್ಸರ್ ನ ನಾಲ್ಕನೇ ಹಂತದಲ್ಲಿರುವ ಕಾರಣ, ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೀತ್ ಸ್ಟ್ರೀಕ್ ಅವರ ಆರೋಗ್ಯವು ನಿರಂತರವಾಗಿ ಕ್ಷೀಣಿಸುತ್ತಿತ್ತು. ಹೀತ್ ಸ್ಟ್ರೀಕ್ ಸಾವಿನಿಂದ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ.
ಸುರೇಶ ಭಟ್, ಮುಲ್ಕಿ
ಸ್ಪೋರ್ಟ್ಸ್ ಕನ್ನಡ
Categories
ಕ್ರಿಕೆಟ್

ಏಷ್ಯಾ ಕಪ್-ಭಾರತ Vs ಪಾಕಿಸ್ತಾನ ಪಂದ್ಯದ ಮುನ್ನೋಟ

ಕ್ರಿಕೆಟ್ ಲೋಕದ ಬದ್ದ ವೈರಿಗಳ ಮಹಾ ಕದನ, 166 ಕೋಟಿ ಜನಕ್ಕೆ ಕಿಕ್ಕೇರಿಸುವ ಹೈ ವೋಲ್ಟೇಜ್ ಇಂಡೋ ಪಾಕ್ ಪಂದ್ಯ ಕೊನೆಗೂ ಬಂದಿದೆ. ಬಹಳಾ ದಿನಗಳ ನಂತರ ಕ್ರಿಕೆಟ್ ನ ಸ್ಟಾರ್ ಗಳಾದ ಬುಮ್ರಾ, ಬಾಬರ್, ಕೊಹ್ಲಿ, ರೌಫ್,ಶಾಹೀನ್ , ರೋಹಿತ್ ಮುಖಾಮುಖಿ ಆಗೋದನ್ನ  ಕ್ರಿಕೆಟ್ ಲೋಕ ಕಣ್ತುಂಬಿ ಕೊಳ್ಳುತ್ತೆ. ಕ್ರಿಕೆಟ್ ನ ಶಿಶು ನೇಪಾಳವನ್ನ ಈಜಿಯಾಗಿ ಸೋಲಿಸಿ ಪಾಕ್ ಬರ್ತಾ ಇದ್ದಾರೆ.  ಕಳೆದ ಬಾರಿ ಗ್ರೂಪ್ ಹಂತದಲ್ಲಿ ಹೊರ ಬಿದ್ದಿದ್ದಕ್ಕೆ ಸೇಡು ತೀರಿಸೋಕೆ ರೋಹಿತ್ ಪಡೆ ಕೂಡ ಕಾಯ್ತಾ ಇದೆ.
ಹಾಗಿದ್ರೆ ದಾಯಾದಿಗಳ ಈ ಮಹಾ ಕದನ ಹೇಗಿರುತ್ತೆ, ಎರಡು ಟೀಮ್ ಗಳು ಹೇಗಿರಲಿವೆ, ಸ್ಟ್ರಾಟರ್ಜಿ ಏನಾಗಿರಲಿವೆ, ಪಿಚ್ ಹೇಗಿರುತ್ತೆ, ಮ್ಯಾಚ್ ನಡೆಯುತ್ತಾ ಇಲ್ವಾ
ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇವತ್ತಿನ ಮ್ಯಾಚ್ ಸಾಕ್ಷಿಯಾಗಲಿದೆ.
ಭಾರತ ಪಾಕ್ ಪಂದ್ಯ ಯಾಕೆ  ಹೈ ವೋಲ್ಟೇಜ್ ಪಂದ್ಯ ಅನಿಸುತ್ತೆ ಅಂದ್ರೆ ನೀವು ಎರಡೂ ತಂಡ ಲಾಸ್ಟ್ ಟೈಮ್ ಯಾವಾಗ ODI ಆಡಿದ್ರು ನೋಡಿ.  2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಫಖರ್ ಜಮಾನ್ ಸೆಂಚುರಿ ಹೊಡೆದು ಬುಮ್ರಾ ನೋಬಾಲ್ ಹಾಕಿದ್ದು ನಮಗೆ 6 ವರ್ಷಗಳ ಹಿಂದೆ ಅನಿಸಬಹುದು. ಆದ್ರೆ ಅದಾದ್ ಮೇಲೆ ODI ನಲ್ಲಿ ಎರಡು ಟೀಮ್ ಗಳು ಮುಖಾಮುಖಿಯಾಗಿದ್ದು ಕೇವಲ ಮೂರೇ ಸಲ. ಆದ್ರೆ ಕಳೆದ ಮೂರು ಮ್ಯಾಚ್ ಭಾರತ ಗೆದ್ದಿತ್ತು ಅದು ಬೇರೆ ವಿಚಾರ. ಕೊನೆ ಮ್ಯಾಚ್ ನಡೆದಿದ್ದು 2019ರ ವಿಶ್ವಕಪ್ ನಲ್ಲಿ. ಅಲ್ಲೂ ರೋಹಿತ್ ಸೆಂಚುರಿ ಹೊಡೆದು ಭುವನೇಶ್ವರ್ ಕುಮಾರ್ ಇಂಜುರಿ ಆದಾಗ ಬಂದಂತಹ  ವಿಜಯ್ ಶಂಕರ್ ಫಸ್ಟ್ ಬಾಲ್ ವಿಕೆಟ್ ತೆಗೆದು ಭಾರತ ಗೆದ್ದಿತ್ತು. ಸೊ ಈ ರೇರಿಟಿ ಪ್ಲಸ್ ಐಕಾನಿಕ್ ಮೊಮೆಂಟ್ ಗಳಿಂದಾಗಿ . ಜೊತೆಗೆ ಎರಡು ದೇಶಗಳ ನಡುವಿನ ಹಿಸ್ಟರಿಯಿಂದಾಗಿ ಇಂಡೋ ಪ್ಯಾಕ್ ಮ್ಯಾಚ್ ಎಲ್ಲಾ ಮ್ಯಾಚ್ ಗಳಿಗಿಂತ ಇಂಪಾರ್ಟೆಂಟ್ ಮ್ಯಾಚ್ ಆಗತ್ತೆ. ಬೇರೆಲ್ಲಾ ಟೀಮ್ ಗಳು ಮುಖಾಮುಖಿಯಾದಾಗ ಕ್ರಿಕೆಟ್ ಪ್ಲೇಯರ್ಸ್ ಆಡ್ತಾ ಇರ್ತಾರೆ. ಆದ್ರೆ ಇಲ್ಲಿ ಕೇವಲ
ಕ್ರಿಕೆಟ್ ಪ್ಲೇಯರ್ಸ್ ಆಡ್ತಾ ಇರೋದಿಲ್ಲ. ಆ  ಕ್ರಿಕೆಟ್ ಪ್ಲೇಯರ್ಸ್ ಆಯಾ ದೇಶಗಳನ್ನ ಪ್ರತಿನಿಧಿಸೋ ಸೋಲ್ಜರ್ ಗಳಂತೆ ಆಡ್ತಾ ಇರ್ತಾರೆ. ಅವರು ಕ್ರಿಕೆಟೆ ಆಡ್ತಾ ಇರ್ತಾರೆ. ನೋಡುವವರ ಕಣ್ಣಿಗೆ ಅವರು ಸೋಲ್ಜರ್ಸ್ ತರಹ ಕಾಣ್ತಾ ಇರ್ತಾರೆ. ಎರಡು ರಾಷ್ಟ್ರಗಳ ನಡುವಿನ ಯುದ್ಧದಂತೆ ಜನ ಇದನ್ನ ಫೀಲ್ ಮಾಡ್ಕೋತಿರ್ತಾರೆ.
ಸದ್ಯ ಇವತ್ತು ಅಲ್ಲಿ ನಡಿತಾ ಇರೋದು ಹದಿನಾರನೇ ಆವೃತ್ತಿಯ ಏಷ್ಯಾ ಕಪ್ ನ ಮೂರನೇ ಮ್ಯಾಚ್. ಈ ಹಿಂದೆ ಏಷ್ಯಾ ಕಪ್ 14 ಬಾರಿ ಏಕದಿನ ಫಾರ್ಮ್ಯಾಟ್ ನಲ್ಲಿ, ಎರಡು ಬಾರಿ T20 ಫಾರ್ಮ್ಯಾಟ್ ನಲ್ಲಿ ನಡೆದಿತ್ತು. ಮತ್ತೆ ಈ ಬಾರಿ ಏಕದಿನ ಫಾರ್ಮ್ಯಾಟ್ ನಲ್ಲಿ ನಡಿತಾ ಇದೆ. ಗ್ರೂಪ್ Aನ ಈ ಪಂದ್ಯ ಪಾಕಿಸ್ತಾನದಿಂದ ಆತಿಥ್ಯವನ್ನ ಗುತ್ತಿಗೆ ಪಡೆದಿರುವಂತಹ ಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಮೈದಾನದಲ್ಲಿ ಮಧ್ಯಾಹ್ನ 3:00 ಗಂಟೆಗೆ ನಡಿತಾ ಇದೆ. ಪಾಕಿಸ್ತಾನಕ್ಕೆ ಇದು ಎರಡನೇ ಮ್ಯಾಚ್. ಈಗಾಗಲೇ ಹೇಳಿದ ಹಾಗೆ ಉದ್ಘಾಟನಾ ಪಂದ್ಯದಲ್ಲಿ ಕ್ರಿಕೆಟ್ ಶಿಶು ನೇಪಾಳವನ್ನ ಪಾಕ್ ಈಸಿಯಾಗಿ ಸೋಲಿಸಿ ಬರ್ತಾ ಇದೆ. ಆದರೆ ಭಾರತಕ್ಕೆ ಇದು ಫಸ್ಟ್ ಮ್ಯಾಚ್. ಈ ಹಿಂದೆ ಭಾರತ ಪಾಕ್ ಪಂದ್ಯ ಅಂದ್ರೆ ಭಾರತದ ಬ್ಯಾಟರ್ಸ್ ವರ್ಸಸ್ ಪಾಕ್ ಬೌಲರ್ಸ್ ಅಂತ ಇರ್ತಾ ಇತ್ತು. ಆದ್ರೆ ಈಗ ಹಾಗಲ್ಲ. ಭಾರತದಲ್ಲಿ ಭಯಂಕರ ವೇಗಿಗಳು ಬಂದಿದ್ದಾರೆ. ಭಾರತದಲ್ಲೂ ಒಳ್ಳೆಯ ಬ್ಯಾಟರ್ಸ್ ಗಳು ಇದ್ದಾರೆ. ಜೊತೆಗೆ ಇನ್ನೊಂದು ತಿಂಗಳಲ್ಲೇ ವರ್ಲ್ಡ್ ಕಪ್ ಕೂಡ ಇರೋದ್ರಿಂದ ಈ ಮ್ಯಾಚ್ ನ ಹೀಟ್, ಮಹತ್ವ ಇನ್ನಷ್ಟು ಜಾಸ್ತಿಯಾಗಿದೆ.
ಟೀಮ್ ಇಂಡಿಯಾ ವನ್ನ ನೋಡೋದಾದ್ರೆ ಬಹಳ ದಿನಗಳ ನಂತರ ಭಾರತ ತನ್ನ ಪೂರ್ಣ ಪ್ರಮಾಣದ ಟೀಮ್ ಅನ್ನ ಇಲ್ಲಿ ಕಣಕ್ಕೆ ಇಳಿಸ್ತಾ ಇದೆ. ಗಾಯದ ನಂತರ ಬುಮ್ರಾ , ಅಯ್ಯರ್ ಮೊದಲ ಬಾರಿಗೆ ಟೀಮ್ ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಆರಂಭಿಕನಾಗಿ ಶುಭಮನ್ ಗಿಲ್ ಇರ್ತಾರೆ. ಪಾಕಿಸ್ತಾನ ವಿರುದ್ಧ ಭಾರತ ಮೇಲುಗೈ ಸಾಧಿಸಬೇಕು ಅಂತ ಹೇಳಬೇಕಾದರೆ ಫಾಕ್ ವೇಗದ ಬೌಲರ್ ಗಳ ವಿರುದ್ಧ ಕಂಟ್ರೋಲ್ ಸಾಧಿಸಬೇಕು. ಅದರಲ್ಲೂ ಪವರ್ ಪ್ಲೇ ಅವಧಿಯಲ್ಲಿ ಭಾರತ ಪಾಕ್ ಬೌಲರ್ ಗಳನ್ನ ಹೇಗೆ ಫೇಸ್ ಮಾಡುತ್ತೆ ಅನ್ನೋದು ನಿರ್ಣಾಯಕ ವಾಗುತ್ತೆ. ಹಾಗಾಗಿ ಆರಂಭಿಕರಾಗಿ ರೋಹಿತ್ ಶರ್ಮಾ ಗೆ ಸಾಥ್ ನೀಡಲಿರೋ ಶುಭಮನ್ ಗಿಲ್ ಈ ಪಂದ್ಯದಲ್ಲಿ ಪಾಕ್ ನ ಮಾರಕ ವೇಗಿಗಳಿಗೆ ಭರ್ಜರಿ ಪ್ರತ್ಯುತ್ತರ ಕೊಡೋ ಆತ್ಮವಿಶ್ವಾಸ ದಲ್ಲಿದ್ದಾರೆ. ಉತ್ತಮ ಲಯದಲ್ಲಿರೋ  ಗಿಲ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಎಲ್ಲಾ ಸಾಮರ್ಥ್ಯವನ್ನ ಹೊಂದಿದ್ದಾರೆ. ಇವರ ಜೊತೆಗೆ ಹಿಂದೆ ಎಡಗೈ ವೇಗಿಗಳ ವಿರುದ್ಧ ಸ್ವಲ್ಪ ವೀಕ್ ನೆಸ್ ತೋರಿಸ್ತಾ ಇದ್ದ ರೋಹಿತ್ ಈ ಬಾರಿ ಪಾಕ್ ನ ಶಾಹೀನ್ ಶಾ ಅಫ್ರಿದಿ  ವಿರುದ್ಧ ಹೇಗೆ ಆಡ್ತಾರೆ ಅಂತ ನೋಡಬೇಕಾಗಿದೆ. ರೋಹಿತ್ ಫಾರ್ಮ್ ಕಳ್ಕೊಂಡ್ರೆ ಉಳಿದ ಬ್ಯಾಟರ್ಸ್ ಗಳ ಬಗ್ಗೆ ನಾವು ನೋಡದೆ ಬೇಡ. ಇನ್ನು ಪಾಕ್ ವಿರುದ್ಧ ಕೊಹ್ಲಿಯ ಪರ್ಫಾರ್ಮೆನ್ಸ್ ಬಗ್ಗೆ ಅಂತೂ ನಿಮಗೆ ಗೊತ್ತೇ ಇದೆ. ಅದರ ಬಗ್ಗೆ ಜಾಸ್ತಿ ಹೇಳೋ ಅಗತ್ಯ ಇಲ್ಲ. ವಿರಾಟ್ ಕೊಹ್ಲಿ ಪಾಕ್ ವಿರುದ್ಧ ನಿಂತಾಗ ಪ್ರತಿ ಸಾರಿ ಚಿಂಧಿ ಉಡಾಯಿಸುತ್ತಾರೆ. ಇನ್ನು ಈ ಏಷ್ಯಾ ಕಪ್ ಶ್ರೇಯಸ್ ಅಯ್ಯರ್ ಮತ್ತು ಕೆ ಎಲ್ ರಾಹುಲ್ ಅವರ ಕಮ್ ಬ್ಯಾಕ್ ಗೆ ವೇದಿಕೆ ಆಗಬೇಕಾಗಿತ್ತು. ಆದರೆ ರಾಹುಲ್ ಇನ್ನೂ ಫಿಟ್ ಆಗದೆ ಇರೋದ್ರಿಂದ ಎರಡು ಪಂದ್ಯಗಳಲ್ಲಿ ಕಾಣಿಸಿಕೊಳ್ತಾ ಇಲ್ಲ. ಆದರೇ ಶ್ರೇಯಸ್ ಶ್ರೇಯಸ್ ಅಯ್ಯರ್  ಆಡ್ತಾರೆ. ಭಾರತಕ್ಕೆ ನಂಬರ್ ಫೋರ್ ಯಾವಾಗ್ಲೂ ಕಾಡ್ತಾ ಇದೆ. ಆದ್ರೆ ಶ್ರೇಯಸ್ ಅಯ್ಯರ್ ಇರೋದ್ರಿಂದ ಆ ಚಿಂತೆ ಇಲ್ಲ.  ಯಾಕಂದ್ರೆ ನಂಬರ್ ಫೋರ್ ಜಾಗದಲ್ಲಿ ಶ್ರೇಯಸ್ ಅಯ್ಯರ್ ಕೇವಲ ಭಾರತ ಬ್ಯಾಟರ್ಸ್ ಗಳಿಗೆ ಅಷ್ಟೇ ಅಲ್ಲ,  ವಿಶ್ವಕಪ್ ಆಡೋ 10 ತಂಡಗಳಲ್ಲಿ ಬೆಸ್ಟ್ ನಂಬರ್ಸ್ ಹೊಂದಿದ್ದಾರೆ. 2019ರ ವಿಶ್ವಕಪ್ ನಂತರ ಅಯ್ಯರ್ ಈ ಸ್ಥಾನದಲ್ಲಿ 47.35ರ ಆವರೇಜ್ ನಲ್ಲಿ 94.37ರ ಸ್ಟ್ರೈಕ್ ರೇಟ್ ನಲ್ಲಿ 805 ರನ್ ಗಳಿಸಿದ್ದಾರೆ. ಬೇರೆ ಯಾರು ಈ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ರಷ್ಟು ಒಳ್ಳೆಯ ಎವರೇಜ್, ಹೆಚ್ಚು ಸೆಂಚುರಿ ಹೊಂದಿಲ್ಲ. ಇನ್ನು  ರಾಹುಲ್ ಅಬ್ಸೆಂಟ್ ಆಗಿರೋದ್ರಿಂದ ಇಶಾನ್ ಕಿಶನ್ ರವರ ಜವಾಬ್ದಾರಿ ಹೆಚ್ಚಾಗುತ್ತೆ.
ಕೆ ಎಲ್ ರಾಹುಲ್ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗೋ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಇಶಾನ್ ಕಿಶನ್ ಸ್ಥಾನ ಪಡಿಯೋದು ಖಚಿತ. ವೈಟ್ ಬಾಲ್ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿರೋ ಇಶಾನ್ ಕಿಶನ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಅನುಮಾನವೇ ಇಲ್ಲ. ಹಾಗಾಗಿ ಪಾಕಿಸ್ತಾನದ ವಿರುದ್ಧ ಹೈ ವೋಲ್ಟೇಜ್ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಾಗ ಅದನ್ನು ಎರಡು ಕೈಯಲ್ಲಿ ಬಾಚಿ ಕೊಳ್ಳುವ ಸಾಮರ್ಥ್ಯ ಈ ಯುವ ಆಟಗಾರನಿಗೆ ಇದೆ. ಅದನ್ನು ಯೂಸ್ ಮಾಡಬೇಕು ಅಷ್ಟೇ. ಭಾರತದ ಸ್ಟಾರ್ ಆಟಗಾರರ ವಿರುದ್ಧ ಪಾಕ್ ಬೌಲರ್ ಗಳು  ವಿಶೇಷ ರಣತಂತ್ರಗಳನ್ನು ಹೆಣೆಯುತ್ತಿರುವಾಗ ಅವುಗಳಿಗೆ ಟಕ್ಕರ್ ಕೊಟ್ಟು ನಿದ್ದೆಗೆಡಿಸುವ ಸಾಮರ್ಥ್ಯ ಇಶಾನ್ ಕಿಶನ್ ಅವರಿಗೆ ಇದೆ, ಎಕ್ಸ್ ಫ್ಯಾಕ್ಟರ್ ತರಹ ಇವರು ಕ್ಲಿಕ್ ಆಗಿಬಿಟ್ರೆ. ಹಾಗಾಗಿ ಈ ಪಂದ್ಯದಲ್ಲಿ ಇಶಾನ್ ಕಿಶನ್ ಮೇಲೆ ಅಭಿಮಾನಿಗಳು ಕೂಡ ಬಹಳ ಹೋಪ್ ಇಟ್ಟುಕೊಂಡಿದ್ದಾರೆ.
ಉಳಿದಂತೆ ನಂಬರ್ 6, ನಂಬರ್ 7 ನಲ್ಲಿ ಆಲ್ ರೌಂಡರ್ ಗಳಾದಂತಹ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕಣಕ್ಕಿಳಿಯುತ್ತಾರೆ. ಪಾಕಿಸ್ತಾನ ತಂಡ ಬೌಲಿಂಗ್ ನಲ್ಲಿ ಎಷ್ಟು ಸ್ಟ್ರಾಂಗ್ ಆಗಿದೆಯೋ ಬ್ಯಾಟಿಂಗ್ ವಿಭಾಗದಲ್ಲೂ ಅಷ್ಟೇ ಬ್ಯಾಲೆನ್ಸ್ಡ್ ಆಗಿದೆ. ಟೀಮ್ ನಲ್ಲಿ ಸ್ಥಿರ ಪ್ರದರ್ಶನ ಕೊಡೊ ಸಾಮರ್ಥ್ಯ  ಇರೋ ಹಲವು ಆಟಗಾರರು ಇದ್ದಾರೆ ಪಾಕಿಸ್ತಾನದಲ್ಲಿ. ಪಾಕ್ ನ ಲೆಕ್ಕಾಚಾರ ತಲೆಕೆಳಗೆ ಆಗಿಸೋ ಸಾಮರ್ಥ್ಯವಿರೋ ಬೌಲರ್ ಗಳ ಪಡೆಯೇ ಇದ್ರು ಸದ್ಯ ಸದ್ದಿಲ್ಲದೆ ಆಘಾತ ಕೊಡೊ  ಆಟಗಾರ ಅಂದ್ರೆ ಅದು ಕುಲದೀಪ್ ಯಾದವ್. ಇತ್ತೀಚಿನ ದಿನಗಳಲ್ಲಿ ತಮ್ಮ ಅಮೋಘ ಬೌಲಿಂಗ್ ಮೂಲಕ ಗ ಮನ ಸೆಳೆದಿದ್ದಾರೆ.  ಪಾಕ್ ಗೆ ದೊಡ್ಡ ಆಘಾತ ಕೊಟ್ರೆ ಆಶ್ಚರ್ಯ ಇಲ್ಲ. ಪಲ್ಲೆಕೆಲೆಯ ನಿಧಾನಗತಿಯ ಪಿಚ್ ನ ಲಾಭವನ್ನು ಬಳಸಿಕೊಂಡು ಮ್ಯಾಚ್ ಗೆಲ್ಲಿಸೋ ಸಾಮರ್ಥ್ಯವನ್ನು ಕುಲದೀಪ್ ಯಾದವ್  ಡೆಫಿನೇಟ್ಲಿ ಹೊಂದಿದ್ದಾರೆ. ಅದರಂತೆ ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಕೆ ಪ್ಲೇಯರ್ ಆಗ್ತಾರೆ.
ಎರಡು ತಂಡಗಳಿಗೂ ಚಿಂತೆ ಇರೋದು ಅದಕ್ಕೂ ಭಾರತಕ್ಕೆ ಚಿಂತೆ  ಪಾಕ್ ಮೇಲೆ ಅಲ್ಲ. ವರುಣ ದೇವನ ಮೇಲೆ, ಯಾಕಂದ್ರೆ ಭಾರತ ಪಾಕ್ ಮಧ್ಯೆ ಮ್ಯಾಚ್ ನಡೆಯೋ  ಕ್ಯಾಂಡಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. 70 ರಿಂದ 90% ನಷ್ಟು ಮಳೆ ಪಂದ್ಯಕ್ಕೆ ಅಡ್ಡಿಪಡಿಸುವ ನಿರೀಕ್ಷೆ ಇದ್ದು ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ತಣ್ಣೀರು ಎರಚುವ ಜೋರು ತುಂಬಾ ಜೋರೇ ಇದೆ. ಈ ಕ್ಷಣಕ್ಕೆ ಮಳೆ ಬಂದು ಮ್ಯಾಚ್ ಹಾಳು ಆಗೋ ಚಾನ್ಸ್ ಜಾಸ್ತಿ ಕಾಣಿಸ್ತಾ ಇದೆ.  ಈಗಾಗಲೇ ಲಂಕಾದ ಮಾಧ್ಯಮಗಳು ಈ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗೋದು ಗ್ಯಾರಂಟಿ ಅಂತ ಆಲ್ ರೆಡಿ ಅವರು ಡಿಸಿಷನ್ ತಗೊಂಡು ಆಗಿದೆ.  ಆದ್ರೆ ಒಂದು ಹೋಪ್ ಹಿಡ್ಕೋಳ್ ಬಹುದು ಅಭಿಮಾನಿಗಳು. ಏನು ಅಂದ್ರೆ ಹವಾಮಾನ ಮುನ್ಸೂಚನೆ ಯಾವಾಗಲೂ ಸರಿ ಆಗೋಲ್ಲ.  ಕೆಲವೊಂದು ಸಲ ಅದು ರಾಂಗ್ ಆಗಿ ಬಿಡುತ್ತೆ. ಮಳೆ ಬಾರದೆ ಇರಲಿ,  ಹವಾಮಾನ ಮುನ್ಸೂಚನೆ ಎಡವಟ್ಟಾಗಲಿ. ತಪ್ಪಾಗಲಿ ಅನ್ನೋ ಹೋಪ್,  ಆಸೆಯನ್ನ ಫ್ಯಾನ್ಸ್ ಸದ್ಯಕ್ಕೆ ಇಟ್ ಕೊಳ್ತಾ ಇದ್ದಾರೆ. ಪಂದ್ಯ ರದ್ದಾದರೆ ಒಂದು ಅಂಕ ಪಡೆದು ಸೂಪರ್ ಫೋರ್ ಗೆ ಪಾಕಿಸ್ತಾನ ಪ್ರವೇಶ ಪಡೆಯಲಿದೆ.
ಇನ್ನು ಕೊಹ್ಲಿ ಈ ಮ್ಯಾಚ್ ನಲ್ಲಿ  ಸೆಂಚುರಿ ಹೊಡೆದು 102 ರನ್ ಗಳಿಸಿದ್ರೆ  ODIನಲ್ಲಿ 13000 ರನ್ ಗಳಿಸಿದ ವಿಶ್ವದ ಐದನೇ ಬ್ಯಾಟರ್ ಆಗ್ತಾರೆ.  ಜೊತೆಗೆ ತೆಂಡೂಲ್ಕರ್ ಗಿಂತ ಫಾಸ್ಟ್ ಆಗಿ ರೀಚ್ ಆದ ಹಾಗೆ ಆಗುತ್ತೆ.  ರವೀಂದ್ರ ಜಡೇಜಾ ಆರು ವಿಕೆಟ್ ತೆಗೆದ್ರೆ ODIನಲ್ಲಿ 200 ವಿಕೆಟ್ ತೆಗೆದ ಹಾಗೆ ಆಗ್ತಾರೆ. ಇದರ ಜೊತೆಗೆ ಕಪಿಲ್ ದೇವ್ ನಂತರ
200 ವಿಕೆಟ್ ಹಾಗೂ 2,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಆಗ್ತಾರೆ.
ಸೋ ಇದು ಭಾರತ ಪಾಕಿಸ್ತಾನ ಮ್ಯಾಚ್ ಪ್ರಿವ್ಯೂ…
– ಸುರೇಶ್ ಭಟ್ ಮುಲ್ಕಿ
ಸ್ಪೋರ್ಟ್ಸ್ ಕನ್ನಡ ವಕ್ತಾರರು
Categories
ಕ್ರಿಕೆಟ್

ಯುಪಿ ಟಿ20 ಲೀಗ್‌ನಲ್ಲಿ ಸೂಪರ್ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಮೂಲಕ ಹೀರೋ ಆದ ರಿಂಕು ಸಿಂಗ್

ರಿಂಕು ಸಿಂಗ್ ಐರ್ಲೆಂಡ್ ವಿರುದ್ಧದ T20I ಸರಣಿಯಲ್ಲಿ ತಮ್ಮ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದರು.
ಇಂಡಿಯನ್ ಪ್ರೀಮಿಯರ್ ಲೀಗ್ 2023 ಸ್ಪರ್ಧೆಯ ಉದ್ದಕ್ಕೂ ಕೆಲವು ಅದ್ಭುತ ಪ್ರದರ್ಶನಗಳನ್ನು ಕಂಡಿತು. ಅದರಲ್ಲಿ ಅನೇಕ ಸೂಪರ್‌ಸ್ಟಾರ್‌ಗಳು ಬಂದು ತಮ್ಮಲ್ಲಿರುವ ಕೌಶಲ್ಯಗಳನ್ನು ತೋರಿಸುತ್ತಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್‌ನ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಎಲ್ಲರನ್ನೂ ಆಕರ್ಷಿಸಿದ ಅಂತಹ ಆಟಗಾರ . ಟೂರ್ನಿಯಲ್ಲಿ ಕೆಕೆಆರ್ ಪರ ಎಡಗೈ ಬ್ಯಾಟರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು . ಅವರು ವಿಶ್ವದ ಗಮನ ಸೆಳೆದ ಕೆಲವು ನಂಬಲಾಗದ ನಾಕ್‌ಗಳನ್ನು ಆಡಿದರು.
ಆ ಪ್ರದರ್ಶನವು ಅವರಿಗೆ ಭಾರತ ತಂಡಕ್ಕೆ ಅವರ ಮೊದಲ ಕರೆಯನ್ನು ತಂದುಕೊಟ್ಟಿತು  ಮತ್ತು ಐರ್ಲೆಂಡ್ ವಿರುದ್ಧದ T20I ಸರಣಿಯಲ್ಲಿ ಅವಕಾಶ ನೀಡಿದಾಗ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಫಾರ್ಮ್ ಅನ್ನು ಮುಂದುವರೆಸಿದರು. ಆದಾಗ್ಯೂ, ಎಡಗೈ ಆಟಗಾರ ನಡೆಯುತ್ತಿರುವ ಯುಪಿ ಟಿ 20 ಲೀಗ್‌ನಲ್ಲಿ ತಮ್ಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ . ರಿಂಕು ಮೀರತ್ ಮೇವರಿಕ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ, ಅಲ್ಲಿ ಅವರು ಸೂಪರ್ ಓವರ್‌ನಲ್ಲಿ ಸತತ ಮೂರು ಸಿಕ್ಸರ್‌ಗಳೊಂದಿಗೆ ಏಕಾಂಗಿಯಾಗಿ ಪಂದ್ಯವನ್ನು ಗೆದ್ದರು.
ಯುಪಿ ಟಿ20 ಲೀಗ್‌ನಲ್ಲಿ ಕಾಶಿ ರುದ್ರ ಮತ್ತು ಮೀರತ್ ಮೇವರಿಕ್ಸ್ ನಡುವೆ ರೋಚಕ ಪಂದ್ಯ ನಡೆಯಿತು .ರಿಂಕು ಸಿಂಗ್ ಸೂಪರ್ ಓವರ್‌ನಲ್ಲಿ ಮೀರತ್ ಮೇವರಿಕ್ಸ್‌ಗೆ ಜಯ ತಂದುಕೊಟ್ಟರು. ಕಾನ್ಪುರದಲ್ಲಿ ನಡೆದ ಯುಪಿ ಟಿ20 ಲೀಗ್‌ನಲ್ಲಿ ಕಾಶಿ ರುದ್ರಸ್ ವಿರುದ್ಧದ ಪಂದ್ಯ ರೋಚಕ ಟೈನಲ್ಲಿ ಕೊನೆಗೊಂಡಿತು. ಇದರಿಂದಾಗಿ ಪಂದ್ಯ ಸೂಪರ್ ಓವರ್‌ಗೆ ಹೋಯಿತು. ಕಾಶಿ ಮೊದಲು ಬ್ಯಾಟ್ ಮಾಡಿ ಸೂಪರ್ ಓವರ್‌ನಲ್ಲಿ 16 ರನ್ ಗಳಿಸಿ ಮೀರತ್‌ಗೆ ಕಠಿಣವಾಗಿಸಿದರು. ಆದರೆ ರಿಂಕು ಸಿಂಗ್ ಸತತ ಮೂರು ಸಿಕ್ಸರ್‌ಗಳೊಂದಿಗೆ ಏಕಪಕ್ಷೀಯವಾಗಿ ತನ್ನ ತಂಡಕ್ಕೆ ಗೆಲುವಿನ ಒಪ್ಪಂದವನ್ನು ಮುದ್ರೆಯೊತ್ತಿದರು. ಸ್ಪಿನ್ನರ್ ಶಿವ ಸಿಂಗ್ ಎಸೆದ ಮೊದಲ ಬಾಲ್ ಡಾಟ್ ಆಗಿತ್ತು. ಆದರೆ ನಂತರ ಅವರು ಓವರ್‌ನ ಎರಡನೇ ಎಸೆತವನ್ನು ಸಿಕ್ಸರ್-ಓವರ್ ಲಾಂಗ್-ಆಫ್‌ಗೆ ಸ್ಮ್ಯಾಶ್ ಮಾಡಿದರು. ಮೂರನೇ ಎಸೆತವು ಫುಲ್-ಟಾಸ್ ಆಗಿತ್ತು, ಅದು ಲೆಗ್ ಸೈಡ್‌ಗೆ ಸಿಕ್ಸರ್‌ಗೆ ಠೇವಣಿಯಾಯಿತು. ನಾಲ್ಕನೇ ಎಸೆತದಲ್ಲಿ ಅವರು ಮತ್ತೊಂದು ಸಿಕ್ಸರ್ ಹೊಡೆದು ಆಟ ಮುಗಿಸಿದರು.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಉಭಯ ತಂಡಗಳು 20 ಓವರ್‌ಗಳಲ್ಲಿ ಕ್ರಮವಾಗಿ 181 ರನ್‌ ಗಳಿಸಿದ್ದವು.  ಈ ಪಂದ್ಯದ ಫಲಿತಾಂಶವನ್ನು ಸೂಪರ್ ಓವರ್ ಮೂಲಕ ನಿರ್ಧರಿಸಲಾಯಿತು. ಸೂಪರ್ ಓವರ್‌ನಲ್ಲಿ, ಮೀರತ್ ಮೇವರಿಕ್ಸ್ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ   ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. UPT20 ನ ಐತಿಹಾಸಿಕ ಮೊದಲ ಆವೃತ್ತಿಯಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ ಮೀರತ್ ಮೇವರಿಕ್ಸ್  ಸೂಪರ್ ಓವರ್ ಥ್ರಿಲ್ಲರ್‌ನಲ್ಲಿ ಕಾಶಿ ರುದ್ರರನ್ನು ಸೋಲಿಸಿ ಸ್ಮರಣೀಯ ವಿಜಯವನ್ನು ಪಡೆದಿದೆ. ಸೂಪರ್ ಓವರ್‌ನಲ್ಲಿ 17 ರನ್‌ಗಳನ್ನು ಬೆನ್ನಟ್ಟಿದ ಮೀರತ್ ಮೇವರಿಕ್ಸ್‌ನ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಕಾಶಿ ರುದ್ರಸ್‌ಗೆ ಸತತ ಮೂರು ಸಿಕ್ಸರ್‌ಗಳನ್ನು ಹೊಡೆದರು. ರಿಂಕು ಸಿಂಗ್ ಅವರ ಈ ಹೊಡೆತವು ಗುಜರಾತ್ ಟೈಟಾನ್ಸ್ ವಿರುದ್ಧದ ಅವರ ಪರಾಕ್ರಮವನ್ನು ಅನೇಕ ಅಭಿಮಾನಿಗಳಿಗೆ ನೆನಪಿಸಿತು, ಅಲ್ಲಿ ಅವರು ಯಶ್ ದಯಾಲ್ ಅವರ ಐದು ಸತತ ಸಿಕ್ಸರ್‌ಗಳನ್ನು ಹೊಡೆದು KKR ಗೆ ಅವರ ಕೊನೆಯ ಐದು ಎಸೆತಗಳಲ್ಲಿ 29 ರನ್‌ಗಳ ಅಗತ್ಯವಿದ್ದಾಗ ಅದ್ಭುತ ಗೆಲುವು ಸಾಧಿಸಿದ್ದರು.
 ರಿಂಕು ಸಿಂಗ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ರಿಂಕು ಸಿಂಗ್ ಅವರ ಸ್ಫೋಟಕ ಮುಕ್ತಾಯವು ಯುಪಿಟಿ 20 ನಲ್ಲಿ ಕಾಶಿ ರುದ್ರಸ್ ವಿರುದ್ಧ ಮೀರತ್ ಮೇವರಿಕ್ಸ್‌ಗೆ ಜಯ ತಂದಿದೆ . ತಂಡಕ್ಕೆ ಸ್ಮರಣೀಯ ಜಯ ತಂದು ಗೆಲುವಿನ ಹೀರೋ ಆದ ರಿಂಕು ಸಿಂಗ್ ಇಂತಹ ಪರಿಸ್ಥಿತಿಯಲ್ಲಿ ಸತತ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್ ಬಾರಿಸಿದ  ರಿಂಕು ಸಿಂಗ್ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ನಿರಂತರವಾಗಿ ನೀಡುತ್ತಿದ್ದಾರೆ.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ.
Categories
ಕ್ರಿಕೆಟ್

ಮಂಗಳಾಪುರ ಟ್ರೋಫಿ 2023 ಜಿ.ಎಸ್.ಬಿ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಕೂಟ

ಟೀಮ್ ಮಂಗಳಾಪುರ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಮಂಗಳೂರಿನಲ್ಲಿ ಮಂಗಳಾಪುರ ಟ್ರೋಫಿ 2023 ಎಂಬ ಜಿ ಎಸ್ ಬಿ   ಕ್ರಿಕೆಟ್ ಪಂದ್ಯಾಕೂಟ ಅಕ್ಟೋಬರ್ 28 ಮತ್ತು 29ರಂದು ಮಂಗಳೂರಿನ ಊರ್ವ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. ಇದು ಜಿ ಎಸ್ ಬಿ ಗಳ ಹರಾಜು ಆಧಾರಿತ ಪಂದ್ಯಾಕೂಟವಾಗಿದ್ದು 10 ತಂಡಗಳು ಈ ಪಂದ್ಯಾಕೂಟಕ್ಕೆ ತಮ್ಮ ನೊಂದಣಿಯನ್ನು ಮಾಡಿವೆ.
ಮಂಗಳಾಪುರ ಟ್ರೋಫಿ 2023 ಗಾಗಿ ಭಾಗವಹಿಸುವ ತಂಡಗಳ ಹೆಸರುಗಳು ಈ ರೀತಿ ಇವೆ:
1.ಡೆಡ್ಲಿ ಪ್ಯಾಂಥರ್ಸ್ ®️
2.ಸಪ್ತಮಿ ವಾರಿಯರ್ಸ್
3.ಮಂಜುಳೇಶ ಕ್ರಿಕೆಟರ್ಸ್
4. ರೈಸಿಂಗ್ ಸ್ಟಾರ್ಸ್ ಮಂಗಳೂರು
5. ಜಿಎಸ್‌ಬಿ ಗರುಡಾಸ್
6. ಕಾರ್ತಿಕ್ Xl
7. ಆಶ್ರಯ ಯುನೈಟೆಡ್
8. ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್
9. ಆರ್ ಕೆ ಸ್ಟ್ರೈಕರ್ಸ್
10.TC ಸ್ಕಾರ್ಚರ್ಸ್
ಜಿ ಎಸ್ ಬಿ ಸಮುದಾಯಕ್ಕೆ  ಸೇರಿದ ಆಟಗಾರರಿಗೆ ಮಾತ್ರ ಆಡಲು ಅವಕಾಶವಿರುವ ಈ ಪಂದ್ಯಾಕೂಟದಲ್ಲಿ ಆಟಗಾರರ ನೋಂದಣಿಗಳು ಈಗ ತೆರೆದಿವೆ!
ನಾಲ್ಕನೇ  ಆವೃತ್ತಿಯ   ಕ್ರಿಕೆಟ್ ಪಂದ್ಯಾಕೂಟಕ್ಕೆ  ಪೂರ್ವ ಸಿದ್ಧತಾ ಕಾರ್ಯಕ್ರಮ ಆಯೋಜಕರು ನಡೆಸುತ್ತಿದ್ದು ಸಮುದಾಯದ ಯುವ ಸಮೂಹವನ್ನು ಒಂದುಗೂಡಿಸಿ ಸಾಗುತ್ತಿರುವ ಕಾರ್ಯ ಅದ್ಭುತವಾಗಿದೆ. ಟೂರ್ನಿ ಯಶಸ್ವಿಯಾಗಲಿ ಎಂಬ ಹಾರೈಕೆ.
ಸುರೇಶ್ ಭಟ್ ಮೂಲ್ಕಿ
ಟೀಮ್ ಸ್ಪೋರ್ಟ್ಸ್ ಕನ್ನಡ
( ನೇರ ಪ್ರಸಾರಕ್ಕಾಗಿ ನಮ್ಮ ಸ್ಪೋರ್ಟ್ಸ್ ಕನ್ನಡ  ಚಾನಲನ್ನು ಸಂಪರ್ಕಿಸಿ : 6363022576-9632178537 )
Categories
ಕ್ರಿಕೆಟ್

ಮಂಗಳೂರಿನಲ್ಲಿ ಪ್ಯಾಂಥರ್ಸ್ ಸೂಪರ್ ಲೀಗ್ ಸೀಸನ್ 2

ಡೆಡ್ಲಿ ಪ್ಯಾಂಥರ್ಸ್ ರಿಜಿಸ್ಟರ್ಡ್ ಕೊಡಿಯಾಲ್ ನೇತೃತ್ವದಲ್ಲಿ ಜಿ ಎಸ್ ಬಿ ಸಮಾಜ ಬಾಂಧವರಿಗಾಗಿ  ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ಡಿಸೆಂಬರ್ 22 ಶುಕ್ರವಾರ, 23 ಶನಿವಾರ ಮತ್ತು 24 ಆದಿತ್ಯವಾರದಂದು ಮಂಗಳೂರು ಊರ್ವ ಮೈದಾನದಲ್ಲಿ ನಡೆಯಲಿದೆ.
ಸತತ ಮೂರು ದಿನಗಳ ಕಾಲ ಹಗಲು ರಾತ್ರಿಯಲ್ಲಿ ನಡೆಯುವ 16 ತಂಡಗಳ ನಡುವಿನ ಈ ಪಂದ್ಯಾವಳಿ ಹರಾಜು ಆಧಾರಿತ ಓವರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ ಆಗಿರುತ್ತದೆ. ಅತ್ಯುತ್ತಮ ಗುಣಮಟ್ಟದಲ್ಲಿ ಆಯೋಜಿಸಲಾಗುವ ಈ ಪಂದ್ಯಾವಳಿ ಸಮಾಜದ ಕ್ರಿಕೆಟ್ ಆಟಗಾರರ ಬಾಂಧವ್ಯ ಹಾಗೂ ಕ್ರೀಡಾ ಸ್ಫೂರ್ತಿಯ ಹಲವಾರು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಲಿದೆ.
ಪ್ಯಾಂಥರ್ಸ್ ಸೂಪರ್ ಲೀಗ್ ಸೀಸನ್ 2 ರಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಯಲ್ಲಿ ಭಾಗವಹಿಸುವ  ತಂಡಗಳು ಈ ಕೆಳಗಿನಂತಿವೆ.
1. ವೀರ ವೆಂಕಟೇಶ ವಾರಿಯರ್ಸ್
2. ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್
3. ಸಪ್ತಮಿ ವಾರಿಯರ್ಸ್
4. ಮಲ್ಪೆ ಯುನೈಟೆಡ್
5. ಆರ್ ಕೆ ಸ್ಟ್ರೈಕರ್ಸ್
6. ರೈಸಿಂಗ್ ಸ್ಟಾರ್ಸ್ ಮಂಗಳೂರು
7. ಟೀಮ್ ಮಂಗಳಾಪುರ
8.ಕೊಡಿಯಾಲ್ ಸೂಪರ್ ಕಿಂಗ್ಸ್
9. ಎಂಜಾಯ್ ಟೈಟಾನ್ಸ್
10.ಕಿಂಗ್ಸ್ ಇಲೆವೆನ್ ಉಳ್ಳಾಲ
11. ಟಿ ಸಿ ಸ್ಕಾರ್ಚರ್ಸ್
12.ವೀರಾಂಜನೇಯ ಕ್ರಿಕೆಟರ್ಸ್ ಕಾಪು
13.ರಾಯಲ್ ಚಾಲೆಂಜರ್ಸ್ ಬಳ್ಳಂಬೆಟ್ಟು
14. ಆಶ್ರಯ ಯುನೈಟೆಡ್
15.ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್
16.  ಗೋಲ್ಡನ್ ಗರುಡಾಸ್ ಗೋಶ್ರೀಪುರಂ
ಆಟಗಾರರ ಆಯ್ಕೆ ಪ್ರಕ್ರಿಯೆ ಬಿಡ್ಡಿಂಗ್ ಮುಖಾಂತರ ಆಯಾ ತಂಡದ ನಾಯಕರು ಹಾಗೂ ಮಾಲಕರ ಸಮ್ಮುಖದಲ್ಲಿ ನಡೆಸಲಾಗುವುದು. ಜಿ ಎಸ್ ಬಿ ಸಮಾಜಕ್ಕೆ ಸೇರಿದ ಆಟಗಾರರಿಗೆ ಮಾತ್ರ  ಆಡಲು ಅವಕಾಶವಿರುವ ಈ ಪಂದ್ಯಾಕೂಟದಲ್ಲಿ, ಓರ್ವ ಅಟಗಾರನನ್ನು ಐಕಾನ್ ಆಟಗಾರರನ್ನಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ರಾಜ್ಯದ 16 ತಂಡಗಳು ಭಾಗವಹಿಸುತ್ತಿದ್ದು, ಪ್ರಥಮ ವಿಜೇತ ತಂಡ ರೂ. 1,00,001ಮತ್ತು ಶಾಶ್ವತ ಫಲಕ, ದ್ವಿತೀಯ ಸ್ಥಾನಿ ರೂ. 50,001 ನಗದು ಮತ್ತು ಶಾಶ್ವತ ಫಲಕ ಪಡೆಯಲಿದೆ.  ತೃತೀಯ ಸ್ಥಾನ ಪಡೆದುಕೊಳ್ಳುವ ತಂಡಕ್ಕೂ ಕೂಡ ನಗದು ಹಾಗೂ ಶಾಶ್ವತ ಫಲಕ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಇವಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿ ,ಸರಣಿ ಶ್ರೇಷ್ಠ ಪ್ರಶಸ್ತಿ, ಪಂದ್ಯಾಕೂಟದ ಅತ್ಯುತ್ತಮ ದಾಂಡಿಗ ಹಾಗೂ ಅತ್ಯುತ್ತಮ ಎಸೆತಗಾರ ಪುರಸ್ಕತರಿಗೆ  ಪ್ರಶಸ್ತಿ ದೊರಕಲಿದೆ.
ನೆಮ್ಮದಿಯ ವಾತಾವರಣ ಹಾಗೂ ಶಾಂತಿ ಸಹಬಾಳ್ವೆಗೆ ಸಮಾಜ ಭಾಂಧವರನ್ನು ಒಗ್ಗೂಡಿಸಲು ಕ್ರಿಕೆಟ್ ಒಂದು ಉತ್ತಮ ಕ್ರೀಡೆ . ಈ ಮೂಲಕ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕೂಡ ಪ್ಯಾಂಥರ್ಸ್ ಸೂಪರ್ ಲೀಗ್ ಕ್ರಿಕೆಟ್ ಸಹಕಾರಿಯಾಗಲಿದೆ.
-ಸುರೇಶ್ ಭಟ್ ಮುಲ್ಕಿ
ಟೀಮ್ ಸ್ಪೋರ್ಟ್ಸ್ ಕನ್ನಡ
ಮೊ: 98454 83433
( ನೇರ ಪ್ರಸಾರಕ್ಕಾಗಿ ನಮ್ಮ ಸ್ಪೋರ್ಟ್ಸ್ ಕನ್ನಡ  ಚಾನಲನ್ನು ಸಂಪರ್ಕಿಸಿ : 6363022576-9632178537 )
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಕ್ರಿಕೆಟ್ ಭರವಸೆಯ ಬೆಳಕು

ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ವೈಷ್ಣವಿ ಕಡಿಯಾಳಿ

ವೈಷ್ಣವಿ ಆಚಾರ್ಯ ಕಡಿಯಾಳಿ ಎನ್ನುವ ಉಡುಪಿ  ಮೂಲದ ಹುಡುಗಿ  ಬೆಂಗಳೂರಿನ ಜಸ್ಟ್ ಕ್ರಿಕೆಟ್  ಅಕಾಡೆಮಿಯಲ್ಲಿ ಕ್ರಿಕೆಟ್  ತರಬೇತಿಯನ್ನು ಪಡೆಯುತ್ತಿದ್ದು ಬೌಲಿಂಗ್ ನಲ್ಲಿ ಮಿಂಚುತ್ತಿದ್ದಾರೆ.
ಬೆಂಗಳೂರು ಓಕೆಶನಲ್ಸ್  ತಂಡದ ಪರವಾಗಿ ಆಡುವ ಇವರು  ಬೌಲಿಂಗ್ ನಲ್ಲಿ ತಮ್ಮ ತಂಡಕ್ಕೆ ಪ್ರಧಾನ ಆಧಾರಸ್ತಂಭವಾಗಿದ್ದಾರೆ. ಇತ್ತೀಚೆಗೆ ಕೆ ಎಸ್ ಸಿ ಎ  ಆಯೋಜಿಸಿದ  ಜೆಎಸ್ಎಸ್  ಮೈದಾನದಲ್ಲಿ ನಡೆದ ಪಂದ್ಯಾಕೂಟದಲ್ಲಿ ಅತ್ಯುತ್ತಮವಾದ ಬೌಲಿಂಗ್ ದಾಳಿಯನ್ನು ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.
ಮಿನರ್ವ ತಂಡದ ವಿರುದ್ಧ ಮೊದಲ ಲೀಗ್ ಪಂದ್ಯದಲ್ಲಿ  ತಾನು ಎಸೆದಂತ 6 ಓವರುಗಳಲ್ಲಿ 33ಕ್ಕೆ ಐದು ವಿಕೆಟ್  ಪಡೆದುಕೊಂಡು ಅತ್ಯುತ್ತಮ ಬೌಲರ್ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ತಾನು ಆಡಿದ ಎರಡನೇ ಪಂದ್ಯದಲ್ಲಿ  3 ಓವರುಗಳಲ್ಲಿ ಒಂದು ವಿಕೆಟ್ ಪಡಕೊಂಡು ವಿಜಯದ ರೂವಾರಿಯೂ ಈಕೆ ಆಗಿದ್ದಾರೆ. ಮೂರನೇ ಪಂದ್ಯದಲ್ಲಿ ನಿಯಂತ್ರಣಕಾರಿ ಬೌಲಿಂಗ್ ನಡೆಸಿದ್ದರು. ಬೆಂಗಳೂರು ಓಕೆಶನಲ್ಸ್ ನ್ನು ಪ್ರತಿನಿಧಿಸುವ ವೈಷ್ಣವಿ  ಕಡಿಯಾಳಿಯವರ ತಂಡ  ಇದೀಗ ನಾಕೌಟ್ ಸುತ್ತಿಗೆ ಅರ್ಹತೆ ಪಡೆದಿದೆ. ತಮ್ಮ ತಂಡವನ್ನುಈ ಹಂತದ ವರೆಗೆ ಕರೆದೊಯ್ದ ಕೀರ್ತಿ ವೈಷ್ಣವಿ ಗೆ ಸಲ್ಲುತ್ತದೆ.
ಇಷ್ಟೇ ಅಲ್ಲದೆ  ಪ್ರಸ್ತುತ ಸನ್ನಿವೇಶದಲ್ಲಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಯುವ ಸೆಲೆಕ್ಷನ್ ಟ್ರಯಲ್ಸ್ ಫಾರ್ ಅಂಡರ್ 19 ಗೆ ಸಿದ್ದತೆಯನ್ನು ನಡೆಸುತ್ತಿದ್ದಾರೆ.
ಈ ಮೊದಲು ಕಟಪಾಡಿಯ ಕೆ ಆರ್ ಎಸ್ ಅಕಾಡೆಮಿ ಮತ್ತು ಉಡುಪಿ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ತರಬೇತಿಯನ್ನು ಪಡೆಯುತ್ತಿದ್ದ ವೈಷ್ಣವಿ ಕಡಿಯಾಳಿ ಅವರ ಪ್ರತಿಭೆಯನ್ನು  ಶಾಲಾ ಮತ್ತು ಸ್ಥಳೀಯ ಕ್ರೀಡಾಕೂಟಗಳಲ್ಲಿ ಗಮನಿಸಲಾಯಿತು. ಕ್ರಿಕೆಟ್ ನತ್ತ ಪ್ರೇರಣೆ ಪಡೆದು  ಕ್ರೀಡಾ ವೃತ್ತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಕೌಶಲ್ಯವನ್ನು ಸಾಬೀತು ಪಡಿಸಲು ಬೆಂಗಳೂರಿನ ಜಸ್ಟ್ ಕ್ರಿಕೆಟ್  ಅಕಾಡೆಮಿ ಸೇರಿ ವೃತ್ತಿಪರ ತರಬೇತಿಯನ್ನು  ಬೌಲಿಂಗ್ ಕೋಚ್ ಆದ ಮೊಹಮ್ಮದ್ ಆಲಿ ಮತ್ತು ನೂರುದ್ದೀನ್ ಇವರುಗಳ ಮಾರ್ಗದರ್ಶನದಡಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.  ತನ್ನ ಕನಸನ್ನು ಸಾಧಿಸಲು ತನ್ನ ತನ್ಮನಗಳನ್ನು ಸಮರ್ಪಿಸಿ ನಿಯಮಿತ  ಅಭ್ಯಾಸವನ್ನು ನಡೆಸಿ ತನ್ನ ಕನಸನ್ನು ಮುಂದುವರೆಸುತ್ತಿದ್ದಾರೆ.
ವೈಷ್ಣವಿ ಕಡಿಯಾಳಿ ಎನ್ನುವ ಪ್ರತಿಭೆ ಇದೇ ರೀತಿ ಮುಂದುವರೆದು ಶ್ಲಾಘನೀಯ ಪ್ರದರ್ಶನ ನೀಡಿ ಉಡುಪಿಯನ್ನು ಹೆಮ್ಮೆಪಡುವಂತೆ ಮಾಡಲಿ.
Categories
ಕ್ರಿಕೆಟ್

ಮಹಾರಾಜ ಟ್ರೋಫಿ ಚಾಂಪಿಯನ್ ಪಟ್ಟಕ್ಕೇರಿದ ಹುಬ್ಬಳ್ಳಿ ಟೈಗರ್ಸ್

ಮಹಾರಾಜ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರ್ ವಾರಿಯರ್ಸ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಟ ನಡೆಸಿದವು.
ಚಿನ್ನಸ್ವಾಮಿಯ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಮಹಾ ಫೈನಲ್ ನ ಸೆಣಸಾಟದಲ್ಲಿ ಮೈಸೂರ್ ವಾರಿಯರ್ಸ್  ವಿರುದ್ಧ ಹುಬ್ಬಳ್ಳಿ ಟೈಗರ್ಸ್  ತಂಡ ಗೆದ್ದು ಜಯಭೇರಿ ಬಾರಿಸಿದೆ. ದಿಟ್ಟ ಹೋರಾಟ ತೋರಿಸಿದ  ಮೈಸೂರ್ ವಾರಿಯರ್ಸ್  8 ರನ್‌ಗಳ ಅಂತರದಿಂದ ಸೋಲನ್ನೊಪ್ಪಿ ರನ್ನರ್ ಅಪ್ ಗೆ ತೃಪ್ತಿಪಡಬೇಕಾಯಿತು.
ಮೊದಲು ಬ್ಯಾಟಿಂಗ್ ಮಾಡಿದ  ಹುಬ್ಬಳ್ಳಿ  ಟೈಗರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ  204 ರನ್‌ಗಳ ಗುರಿ  ಮೈಸೂರ್ ವಾರಿಯರ್ಸ್ ಗೆ ನೀಡಿತು. ಈ ಗುರಿ ಬೆನ್ನಟ್ಟಿದ ಮೈಸೂರ್ ವಾರಿಯರ್ಸ್ ಉತ್ತಮ ಆರಂಭವನ್ನು ಪಡಕೊಂಡು ಮೊದಲ ವಿಕೆಟ್‌ಗೆ 57 ರನ್‌ಗಳ ಜೊತೆಯಾಟ ಬಂದಿತ್ತು. ಆರಂಭಿಕ ಆಟಗಾರ ಆರ್ ಸಮರ್ಥ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 63 ರನ್‌ಗಳನ್ನುಗಳಿಸಿದರು.  ನಾಯಕ ಕರುಣ್ ನಾಯರ್ ಮತ್ತೊಮ್ಮೆ  ಆರ್ಭಟ ತೋರುವ ಸೂಚನೆ ನೀಡಿದ್ದರು. ಆದರೆ 20 ಎಸೆತಗಳ ಮುಂದೆ 37 ರನ್‌ಗಳಿಸಿದ್ದ ಸಂದರ್ಭ  ಕರಿಯಪ್ಪ  ಔಟ್ ಮಾಡುವಲ್ಲಿ ಯಶಸ್ವಿಯಾದರು. ಕೆಳ ಕ್ರಮಾಂಕದ ಬ್ಯಾಟರ್ಸ್ ಗಳಿಂದ ನಿರೀಕ್ಷಿತ ಪ್ರದರ್ಶನ ಬಾರದೇ ಇದ್ದ ಕಾರಣ ವಾರಿಯರ್ಸ್  ದಾಂಡಿಗರು ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಬೇಕಾಯಿತು. ಅಂತಿಮವಾಗಿ  ಕೊನೆಯ ಓವರ್‌ವರೆಗೂ ಸಾಗಿದ  ರಣರೋಚಕ ಕದನದಲ್ಲಿ  ಮೈಸೂರ್ ವಾರಿಯರ್ಸ್  8 ರನ್‌ಗಳ  ಹಿನ್ನಡೆಯಿಂದಾಗಿ  ಮನೀಶ್ ಪಾಂಡೆ ನೇತೃತ್ವದ  ಹುಬ್ಬಳ್ಳಿ ಟೈಗರ್ಸ್  ಮಹಾರಾಜ ಟ್ರೋಫಿ 2023ರ ಚಾಂಪಿಯನ್ ಆಗಿ  ಹೊರಹೊಮ್ಮುವಂತಾಯಿತು.
ಕರುಣ್ ನಾಯರ್ ನೇತೃತ್ವದ ಮೈಸೂರ್ ವಾರಿಯರ್ಸ್ ತಂಡ ಸೆಮಿಫೈನಲ್‌ನಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು 36 ರನ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಕರುಣ್ ನಾಯರ್ ಅವರ ಸ್ಪೋಟಕ ಶತಕದಿಂದಾಗಿ ಸೆಮಿಫೈನಲ್‌ನಲ್ಲಿ ಭಾರೀ ಅಂತರದಿಂದ ಜಯಗಳಿಸಿತ್ತು. ಮತ್ತೊಂದೆಡೆ ಹುಬ್ಬಳ್ಳಿ ಟೈಗರ್ಸ್ ತಂಡ ಶಿವಮೊಗ್ಗ ತಂಡದ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು  ಫೈನಲ್‌ ಕಣಕ್ಕಿಳಿದಿದ್ದಎರಡೂ ತಂಡಗಳು ಕೂಡ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ ತಂಡಗಳಾಗಿದ್ದರಿಂದ ಕೊನೆಯ ಓವರ್‌ವರೆಗೂ ಜಿದ್ದಾಜಿದ್ದಿನ ಕದನ ನಡೆದಿತ್ತು.  ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್ ತಂಡ 8 ರನ್‌ಗಳ ಅಂತರದಿಂದ ಗೆದ್ದು ಚಾಂಪಿಯನ್ ಅನಿಸಿಕೊಂಡಿತು.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ