ಕ್ರಿಕೆಟ್10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

-

- Advertisment -spot_img

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ ಮನೆಯ ಉಸಿರಿನಲ್ಲಿ ಬೆರೆತು ಹೋಗಿರುವ ದಾದಾ ಸೌರವ್ ಗಂಗೂಲಿ.. ಅವರು ಭಾರತೀಯ ಕ್ರಿಕೆಟ್’ನ ನಿಜನಾಯಕ, ಜನನಾಯಕ.. 

22 ವರ್ಷಗಳ ಹಿಂದೆ ಸೌರವ್ ಗಂಗೂಲಿ ಇನ್ನೇನು ವಿಶ್ವಕಪ್ ಗೆದ್ದೇ ಬಿಟ್ಟಿದ್ದರು.. ಒಂದೇ ಒಂದು ‘ಕೆಟ್ಟ ದಿನ’ ದಾದಾ ಕನಸಿಗೆ ಕೊಳ್ಳಿ ಇಟ್ಟಿತ್ತು. ಈಗ ಅದೇ ದಾದಾ ನಾಡಿನಿಂದ ಬಂದ ಹೆಣ್ಣು ಮಗಳು ಬಂಗಾಳದ ಬಂಗಾರದ ಹುಡುಗಿಯಾಗಿ ಕಂಗೊಳಿಸುತ್ತಿದ್ದಾಳೆ. ಬಂಗಾಳದ ಪಾಲಿಗೆ ಅವಳೇ ಮೊದಲ ವಿಶ್ವಕಪ್ ವಿನ್ನರ್. 

ಅಂದ ಹಾಗೆ, 2003ರಲ್ಲಿ ಸೌರವ್ ಗಂಗೂಲಿ ದಕ್ಷಿಣ ಆಫ್ರಿಕಾದ ಜೊಹಾನ್ಸ್’ಬರ್ಗ್’ನಲ್ಲಿ ವಿಶ್ವಕಪ್ ಫೈನಲ್ ಆಡುವ ಹೊತ್ತಿಗೆ ಈ ಹುಡುಗಿ ಹುಟ್ಟಿಯೇ ಇರಲಿಲ್ಲ. ಆಕೆಯ ಹೆಸರು ರಿಚಾ ಘೋಷ್.. 

ಕಟ್ಟು ಮಸ್ತಿನ ಶಕ್ತಿಶಾಲಿ ಹುಡುಗಿ.. ಸಿಡಿಲ ಸಿಕ್ಸರ್’ಗಳಿಗೆ ಹೆಸರುವಾಸಿ.. ಭಾರತ ಮಹಿಳಾ ತಂಡ ವಿಶ್ವಕಪ್ ಗೆದ್ದಿದೆ ಎಂದರೆ ಅದರಲ್ಲಿ ಈಕೆಯ ಪಾತ್ರ ನಿರ್ಣಾಯಕ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್’ನಲ್ಲಿ ವಿಶ್ವದಾಖಲೆಯ 338 ರನ್ ಚೇಸಿಂಗ್ ವೇಳೆ ಕೊನೇ ಕ್ಷಣದಲ್ಲಿ ಬಂದು 26 ಎಸೆತಗಳಲ್ಲಿ ಬಾರಿಸಿದ 26 ರನ್.. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್’ನಲ್ಲಿ 24 ಚೆಂಡುಗಳ ಮುಂದೆ ಸಿಡಿಸಿದ 34 ರನ್.. ಅದೇ ದಕ್ಷಿಣ ಆಫ್ರಿಕಾ ವಿರುದ್ಧದ ಲೀಗ್ ಪಂದ್ಯದಲ್ಲಿ 77 ಎಸೆತಗಳಲ್ಲಿ ಬಾರಿಸಿದ 94 ರನ್ ಭಾರತದ ಯಶಸ್ಸಿಗೆ ಕಾರಣವಾದ ಇನ್ನಿಂಗ್ಸ್’ಗಳು.. 

ಭಾರತದ ಪೂರ್ವಭಾಗದ ಒಬ್ಬ ವಿಕೆಟ್ ಕೀಪರ್ ದೇಶಕ್ಕೆ ಎರಡು ವಿಶ್ವಕಪ್’ಗಳನ್ನು ಗೆಲ್ಲಿಸಿದರೆ, ಅದೇ ಭಾಗದ ಹುಡುಗಿ ಮಹಿಳಾ ತಂಡದ ಐತಿಹಾಸಿಕ ವಿಶ್ವಕಪ್ ಗೆಲುವಿನ ರೂವಾರಿಗಳಲ್ಲಿ ಒಬ್ಬಳಾಗಿ ನಿಂತಿದ್ದಾಳೆ. 

ರಿಚಾ ಘೋಷ್ ಬಂಗಾಳದ ಸಿಲಿಗುರಿಯ ಧೂಳಿನಿಂದ ಎದ್ದು ಬಂದವಳು.. ಊರಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ನೂರಾರು ಹುಡುಗರ ಮಧ್ಯೆ ಒಬ್ಬಳೇ ಒಬ್ಬಳು ಹೆಣ್ಣು ಮಗಳು.. 

ರಿಚಾ ಘೋಷ್ ಆಟದಲ್ಲಿ ಭಯವೆಂಬುದೇ ಇಲ್ಲ.. ಅವಳು fearless. ಇದು ಹುಡುಗರ ಜೊತೆ ಆಡುತ್ತಾ ಆಡುತ್ತಾ ಬಂದ ಬಳುವಳಿ.. 

ಲೆದರ್ ಬಾಲ್ ಕ್ರಿಕೆಟ್ ಆಡಲು ಶುರು ಮಾಡಿದ ನಂತರ ಸಿಲಿಗುರಿಯ ತಂಡದಲ್ಲಿ 10 ಮಂದಿ ಹುಡುಗರಾದರೆ ಹನ್ನೊಂದನೆಯವಳು ಈ ರಿಚಾ ಘೋಷ್.

ಹೆಣ್ಣು ಹುಡುಗಿ ಎಂದು ಎದುರಾಳಿ ತಂಡದ ಬೌಲರ್’ಗಳು ಕರುಣೆ ತೋರಿಸುತ್ತಿರಲಿಲ್ಲ. ತನಗಿಂತ ಶಕ್ತಿವಂತರ ವಿರುದ್ಧ ಆಡಿ, ತನಗಿಂತ ಬಲಿಷ್ಠರನ್ನೇ ಎದುರಿಸಿ ಬಂದ ಕಾರಣಕ್ಕೆ ಈಗ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಯಾವ ಭಯವೂ ಇಲ್ಲದೆ ಸಿಡಿಲ ಹೊಡೆತಗಳನ್ನು ಬಾರಿಸುತ್ತಿದ್ದಾಳೆ.. 

ಅಪ್ಪ ಮಾನವೇಂದ್ರ ಘೋಷ್ ಟೆನಿಸ್ ಬಾಲ್’ನಲ್ಲಿ ಅದ್ಭುತ ಕ್ರಿಕೆಟರ್.. ಪವರ್ ಹಿಟ್ಟರ್.. ಬಿಗ್ ಹಿಟ್ಟಿಂಗ್ ರಿಚಾಗೆ ತಂದೆಯಿಂದ ಸಿದ್ಧಿಸಿದ ಕಲೆ. 

ಪಶ್ಚಿಮ ಬಂಗಾಳದ ತುತ್ತತುದಿಯ, ಹಿಮಾಲಯದ ಪದತಲದ ಸಿಲಿಗುರಿಯವಳು ರಿಚಾ ಘೋಷ್. ಸಿಲಿಗುರಿಯಲ್ಲಿ ಹುಡುಗರೊಂದಿಗೆ ಆಡುತ್ತಾ ಬೆಳೆದವಳು ವಿಶ್ವಕಪ್ ಗೆದ್ದು ಊರಿಗೆ ಮರಳಿದಾಕ್ಷಣ ಇಡೀ ಊರಿಗೆ ಊರೇ ಮನೆ ಮಗಳನ್ನು ಸ್ವಾಗತಿಸಿದ ಕ್ಷಣ.. ಆ ದೃಶ್ಯ, ತೆರೆದ ಜೀಪ್’ನಲ್ಲಿ ಆ ಮೆರವಣಿಗೆ.. ಎಲ್ಲವೂ ಅದ್ಭುತ..

LEAVE A REPLY

Please enter your comment!
Please enter your name here

12 − five =

Latest news

ಭಾರತದ ‘ಬಿಗ್ ಗೇಮ್ ಪ್ಲೇಯರ್’ ಯುವರಾಜ್ ಸಿಂಗ್

ಭಾರತದ ‘ಬಿಗ್ ಗೇಮ್ ಪ್ಲೇಯರ್’ ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್, ದೊಡ್ಡ ವೇದಿಕೆಗಳಲ್ಲಿ ತಂಡಕ್ಕೆ ಜಯ ತಂದುಕೊಡುವ ಶಕ್ತಿಶಾಲಿ ಪ್ರದರ್ಶನಗಳಿಂದ...

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು ಯಲಹಂಕ ತಾಲ್ಲೂಕಿನ ಕುದುರೆಗೆರೆ ಪ್ರದೇಶದಲ್ಲಿ ಕೆ.ಎಂ.ಶ್ರೀನಿವಾಸ್ ರವರ ಸ್ಮರಣಾರ್ಥ ಹಾಗೂ ಕೆ.ಎಂ. ಸುಬ್ರಮಣಿ ರವರ...

ಶಿವ ಬಿಗ್ ಬ್ಯಾಷ್ 2025: ಕೋಟ ಸಾಲಿಗ್ರಾಮದಲ್ಲಿ ಡಿಸೆಂಬರ್ 13-14ರಂದು

ಶಿವ ಬಿಗ್ ಬ್ಯಾಷ್ 2025: ಕೋಟ ಸಾಲಿಗ್ರಾಮದಲ್ಲಿ ಡಿಸೆಂಬರ್ 13-14ರಂದು ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ, ಕೋಟ ಸಾಲಿಗ್ರಾಮದ ಆಯೋಜನೆಯಲ್ಲಿ ನಡೆಯುವ ಪ್ರತಿಷ್ಠಿತ ಶಿವ ಬಿಗ್...

ಕೆಚ್ಚಿನ.. ಕಿಚ್ಚಿನ ಯುವರಾಜನ ಕಥೆ..!

ಕೆಚ್ಚಿನ.. ಕಿಚ್ಚಿನ ಯುವರಾಜನ ಕಥೆ..! ಪಂಜಾಬ್’ನ ಲೂಧಿಯಾನದ ಕೆನೆಚ್ ಎಂಬ ಹಳ್ಳಿ. ಅಲ್ಲೊಬ್ಬರು ಒಂದೊಮ್ಮೆ ಭಾರತ ಪರ ಆಡಿದ್ದ ಮಾಜಿ ಕ್ರಿಕೆಟಿಗ.. ಅವರಿಗೊಬ್ಬ ಮಗ.. ತನ್ನ ಕ್ರಿಕೆಟ್...
- Advertisement -spot_imgspot_img

ಅರಬ್ಬರ ನಾಡಿನಲ್ಲಿ ಕುಂದಗನ್ನಡಿಗರ ಸಮಾಗಮ

ಅರಬ್ಬರ ನಾಡಿನಲ್ಲಿ ಕುಂದಗನ್ನಡಿಗರ ಸಮಾಗಮ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಯುಎಇ ನಲ್ಲಿ ನೆಲೆಸಿರುವ ಕುಂದಗನ್ನಡಿಗರಿಗಾಗಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ದೆಗಳು...

ಕಂದಾಯೋತ್ಸವ 2025 : ಕಂದಾಯ ಇಲಾಖೆಯ ಸಾಂಸ್ಕೃತಿಕ – ಕ್ರೀಡಾ ಸಂಭ್ರಮ

ಕಂದಾಯೋತ್ಸವ 2025 : ಕಂದಾಯ ಇಲಾಖೆಯ ಸಾಂಸ್ಕೃತಿಕ – ಕ್ರೀಡಾ ಸಂಭ್ರಮ ಶಿವಮೊಗ್ಗ ಜಿಲ್ಲೆಯ ಕಂದಾಯ ಇಲಾಖೆಯ ವತಿಯಿಂದ **ಕಂದಾಯೋತ್ಸವ – 2025** ನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ....

Must read

- Advertisement -spot_imgspot_img

You might also likeRELATED
Recommended to you