18.1 C
London
Tuesday, April 30, 2024
Homeಕ್ರಿಕೆಟ್ದುಬೈ ನಲ್ಲಿ ವರ್ಣರಂಜಿತ ಕ್ರಿಕೆಟ್ ಹಬ್ಬ ಯುನೈಟೆಡ್ ಪ್ರೀಮಿಯರ್ ಲೀಗ್-2021

ದುಬೈ ನಲ್ಲಿ ವರ್ಣರಂಜಿತ ಕ್ರಿಕೆಟ್ ಹಬ್ಬ ಯುನೈಟೆಡ್ ಪ್ರೀಮಿಯರ್ ಲೀಗ್-2021

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ದುಬೈ ನ ಪ್ರತಿಷ್ಠಿತ ಸಂಸ್ಥೆ River Valley ಮುಖ್ಯಸ್ಥರಾದ ಮಿ.ರಫೀಕ್ ಇವರ ಪ್ರಮುಖ ಪ್ರಾಯೋಜಕತ್ವದಲ್ಲಿ,
ಸಲ್ಮಾನ್,ರೆಹಮತ್ ಹೊನ್ನಾಳ,M.H.T ಹಾಗೂ ಈಶಾಮ್ ಇವರೆಲ್ಲರ ಮುಂದಾಳತ್ವದಲ್ಲಿ ಜೂನ್ 17 ರಂದು ದುಬೈ ಸ್ಕೌಟ್ ಮಿಷನ್ ಮೈದಾನದಲ್ಲಿ ಅದ್ಧೂರಿಯ ಯುನೈಟೆಡ್ ಪ್ರೀಮಿಯರ್ ಲೀಗ್-2021 40 ಗಜಗಳ ಹೊನಲು ಬೆಳಕಿನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ಮೂಡಿಬರಲಿದ್ದು,5 ಓವರ್ ನ 12 ರೋಚಕ ಹಣಾಹಣಿಗಳು ನಡೆಯಲಿದೆ.ನಿಗದಿತ 9 ತಂಡಗಳಿಗಷ್ಟೇ ಭಾಗವಹಿಸಲು ಅವಕಾಶವಿದ್ದು,ಪ್ರವೇಶ ದರ 400 A.E.D ಹಾಗೂ ವಿಜೇತ ತಂಡ 1ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದೆ.
ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್‌ ಪೂಮಾ ಶೂ,ಬೆಸ್ಟ್ ಬೌಲರ್ ನೈಕ್ ಶೂ,ಬೆಸ್ಟ್ ಕೀಪರ್ ಸ್ಮಾರ್ಟ್ ಟಿ.ವಿ,ಹ್ಯಾಟ್ರಿಕ್ ವಿಕೆಟ್ ಪಡೆವ ಬೌಲರ್ ಬುರ್ಜ್ ಖಲೀಫಾ ಟಿಕೆಟ್,ಬೆಸ್ಟ್ ಫೀಲ್ಡರ್ ದುಬಾರಿ ಸುಗಂಧ ದ್ರವ್ಯ,ಫೈನಲ್ ನ ಪಂದ್ಯಶ್ರೇಷ್ಟ ಚಿನ್ನದ ನಾಣ್ಯ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ಎಲ್.ಇ.ಡಿ ಟಿ.ವಿ ಹಾಗೂ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
*ಟೊರ್ಪೆಡೋಸ್ ಕುಂದಾಪುರ ಹಾಗೂ ಸನ್ ರೈಸ್ ಹೊನ್ನಾಳ ಪ್ರದರ್ಶನ ಪಂದ್ಯ*
ಜೂನ್ 17 ರಾತ್ರಿ 8 ಗಂಟೆಗೆ ಪಂದ್ಯಾಟ ಪ್ರಾರಂಭವಾಗಲಿದ್ದು,10 ಗಂಟೆಗೆ ವರ್ಣರಂಜಿತ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 10.30 ಗಂಟೆಗೆ ಸರಿಯಾಗಿ ಉಡುಪಿ ಜಿಲ್ಲೆಯ 2 ಪ್ರಸಿದ್ಧ ಸಂಸ್ಥೆಗಳಾದ ಟೊರ್ಪೆಡೋಸ್ ಕುಂದಾಪುರ ಹರಿಪ್ರಸನ್ನ ಪುಟ್ಟ ಸಾರಥ್ಯದಲ್ಲಿ ಹಾಗೂ ಸನ್ ರೈಸ್  ಹೊನ್ನಾಳ ರೆಹಮತ್ ಹೊನ್ನಾಳ ಸಾರಥ್ಯದಲ್ಲಿ ಪ್ರದರ್ಶನ ಪಂದ್ಯ ನಡೆಯಲಿದೆ.ಬೆಳಿಗ್ಗೆ 5 ಗಂಟೆಗೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಆಸಕ್ತ ತಂಡಗಳು ಜೂನ್ 2 ರ ಒಳಗೆ ನೋಂದಣಿ ಮಾಡಿಕೊಳ್ಳಬಹುದು.ಹೆಚ್ಚಿನ ವಿವರಗಳಿಗಾಗಿ ರೆಹಮತ್ ಹೊನ್ನಾಳ 971588569104 ಮೊಬೈಲ್ ನಂಬರ್ ಸಂಪರ್ಕಿಸಬಹುದು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

8 − seven =