
ಲಾರ್ಡ್ಸ್ ನಲ್ಲಿ ಟೀಮ್ ಇಂಡಿಯಾ ಸಂಕಷ್ಟದಲ್ಲಿ!
ಲಂಡನ್ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಸಚಿನ್ ಅಂಡರ್ಸನ್ ಟ್ರೋಫಿಯ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೆಚ್ಚಿ ಬೀಳುವ ಸ್ಥಿತಿಗೆ ತಲುಪಿದೆ. ಗೆಲ್ಲಬೇಕಾದ ಗುರಿಯತ್ತ ಸಾಗುತ್ತಿದ್ದ ಭಾರತಕ್ಕೆ ಇಂಗ್ಲೆಂಡ್ ವೇಗಿ ಬ್ರೈಡನ್ ಕಾರ್ಸ್ ಭಾರೀ ಆಘಾತವನ್ನು ನೀಡಿದರು.
ಪ್ರಾರಂಭಿಕ ಘಟ್ಟದಲ್ಲೇ ಕಾರ್ಸ್ ತಮ್ಮ ವೇಗದ ಬೌಲಿಂಗ್ನಿಂದ ಭಾರತ ತಂಡವನ್ನು ಹಿಂಜರಿಯುವಂತೆ ಮಾಡಿದ್ದು, ನಾಲ್ಕು ವಿಕೆಟ್ ಕಳೆದುಕೊಂಡಿರುವ ಭಾರತ ತಂಡ ಸೋಲಿನ ಭೀತಿಯಲ್ಲಿದೆ.


ಭಾರತ ಗೆಲುವಿಗೆ ಇನ್ನೂ 135 ರನ್ಗಳ ದೂರದಲ್ಲಿದೆ. 193 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುತ್ತಿರುವ ಭಾರತ, ನಾಲ್ಕನೇ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ಗಳಿಗೆ 58 ರನ್ಗಳಿಂದ ಸಂಕಷ್ಟದಲ್ಲಿದೆ. ಕೈಯಲ್ಲಿ ಆರು ವಿಕೆಟ್ಗಳು ಬಾಕಿ ಇರುವಾಗ, ಭಾರತ ಗೆಲ್ಲಲು ಇನ್ನೂ 135 ರನ್ಗಳ ಅಗತ್ಯವಿದೆ. ಮತ್ತೊಂದೆಡೆ, ಇಂಗ್ಲೆಂಡ್ಗೆ ಕೊನೆಯ ದಿನದಂದು ಗೆಲ್ಲಲು ಆರು ವಿಕೆಟ್ಗಳ ಅಗತ್ಯವಿದೆ.
ಕೆ.ಎಲ್. ರಾಹುಲ್ 33 ರನ್ ಗಳೊಂದಿಗೆ ಮೈದಾನದಲ್ಲಿದ್ದಾರೆ. ಪಂತ್, ನಿತೀಶ್ ಕುಮಾರ್ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಅನುಭವಿ ಬ್ಯಾಟ್ಸ್ ಮನ್ ಗಳು ಮಾತ್ರ ಬಾಕಿ ಉಳಿದಿದ್ದಾರೆ. ಈ ಕಾರಣದಿಂದಾಗಿ, ಎರಡೂ ತಂಡಗಳು ಈಗ ಗೆಲ್ಲುವ ಅವಕಾಶವನ್ನು ಹೊಂದಿರುವುದರಿಂದ ಕೊನೆಯ ದಿನದ ಆಟ ರೋಮಾಂಚಕಾರಿಯಾಗಬಹುದು ಎಂದು ನಿರೀಕ್ಷಿಸಬಹುದು.





