ಕ್ರಿಕೆಟ್ಬೆಂಗಳೂರು ಜಿಎಸ್‌ಬಿ ಕ್ರಿಕೆಟ್ ಲೋಕಕ್ಕೆ ಹೊಸ ಅಧ್ಯಾಯ — “BPPL” ಸೀಸನ್...

ಬೆಂಗಳೂರು ಜಿಎಸ್‌ಬಿ ಕ್ರಿಕೆಟ್ ಲೋಕಕ್ಕೆ ಹೊಸ ಅಧ್ಯಾಯ — “BPPL” ಸೀಸನ್ 2 ಮಹತ್ತರ ನಿರೀಕ್ಷೆಯ ನಡುವೆ ಆರಂಭಕ್ಕೆ ಸಜ್ಜು

-

- Advertisment -spot_img

ಬೆಂಗಳೂರು ಜಿಎಸ್‌ಬಿ ಕ್ರಿಕೆಟ್ ಲೋಕಕ್ಕೆ ಹೊಸ ಅಧ್ಯಾಯ — “BPPL” ಸೀಸನ್ 2 ಮಹತ್ತರ ನಿರೀಕ್ಷೆಯ ನಡುವೆ ಆರಂಭಕ್ಕೆ ಸಜ್ಜು

ಬೆಂಗಳೂರು : ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಮಹತ್ವದ ಹೊಸ ಪ್ರಯತ್ನವಾಗಿ ಗುರುತಿಸಿಕೊಂಡಿರುವ “BPPL – ಬೆಂಗಳೂರು ಪಾರ್ಥಸಾರಥಿ ಪ್ರೀಮಿಯರ್ ಲೀಗ್” ತನ್ನ ಸೀಸನ್ 2 ಮೂಲಕ ಮತ್ತೊಂದು ಭರವಸೆಯ ಅಧ್ಯಾಯದತ್ತ ಪಾದಾರ್ಪಣೆ ಮಾಡುತ್ತಿದೆ. ಪ್ರತಿಭಾವಂತ ಜಿಎಸ್‌ಬಿ ಯುವ ಆಟಗಾರರ ಕ್ರಿಕೆಟ್ ಕನಸುಗಳಿಗೆ ವಾಸ್ತವ ರೂಪ ನೀಡಲು “BPPL” ಅತ್ಯುತ್ತಮ ವೇದಿಕೆ ಆಗಿ ಹೊರಹೊಮ್ಮಿದೆಯೆಂಬುದು ಕ್ರೀಡಾಸಕ್ತರ ಏಕಮತದ ಅಭಿಪ್ರಾಯ.

ಯಶಸ್ವಿಯಾಗಿ ನೆರವೇರಿದ್ದ BPPL ಸೀಸನ್ 1 ಜಿಎಸ್‌ಬಿ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದು, ಇದೀಗ ಸೀಸನ್ 2 ಗೆ ಎಲ್ಲಾ ವಲಯಗಳಿಂದ ಭಾರೀ ಪ್ರತಿಕ್ರಿಯೆ ದೊರೆಯುತ್ತಿದೆ. ಜಿಎಸ್‌ಬಿಯ ಭವಿಷ್ಯದ ಕ್ರಿಕೆಟ್ ಅಭಿವೃದ್ಧಿಗೆ ಹೊಸ ದಾರಿ ತೋರಿಸುವ ಪ್ರಮುಖ ಹೆಜ್ಜೆಯಾಗಿ ಈ ಲೀಗ್‌ನ್ನು ಕ್ರೀಡಾ ವಲಯವು ಕಣ್ಣಾರೆ ನೋಡುತ್ತಿದೆ.

ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ BPPL ಆಟಗಾರರ ಆಯ್ಕೆ ಹರಾಜು ಮತ್ತು ಜೆರ್ಸಿ ಬಿಡುಗಡೆ ಕಾರ್ಯಕ್ರಮ ಈ ವರ್ಷದ ಸೀಸನ್‌ಗೆ ಮತ್ತಷ್ಟು ಮೆರಗು ನೀಡಿತು. ತಂಡದ ಮಾಲೀಕರು, ಆಟಗಾರರು ಮತ್ತು ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಜಿಎಸ್‌ಬಿ ಕ್ರಿಕೆಟ್ ಸಾಮರ್ಥ್ಯದ ವೈಭವ ನಿಜಕ್ಕೂ ಕಂಗೊಳಿಸಿತು.

BPPL ಸೀಸನ್ – 2 ಡಿಸೆಂಬರ್ 6 ರಿಂದ ಡಿಸೆಂಬರ್ 7 ರವರೆಗೆ ಜಿಎಸ್‌ಬಿ ಕ್ರಿಕೆಟ್ ಪ್ರೇಮಿಗಳಿಗೆ ಅದ್ಭುತ ರಸದೌತಣವನ್ನು ಉಣಬಡಿಸಲಿದೆ. ಸ್ಫರ್ಧಾತ್ಮಕ ಪಂದ್ಯಗಳು, ಹೊಸ ಪ್ರತಿಭೆಗಳ ಅಬ್ಬರ ಮತ್ತು ಉತ್ಸಾಹಭರಿತ ವಾತಾವರಣದಿಂದ ಈ ಕ್ರೀಡಾ ಕೂಟ ಜಿಎಸ್‌ಬಿ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯವನ್ನು ಬರೆಯಲಿರುವುದು ನಿಶ್ಚಿತ.

BPPL ಸೀಸನ್ 2 — ಇದು ಜಿಎಸ್‌ಬಿಯ ಕ್ರಿಕೆಟ್ ಸಮರ.

LEAVE A REPLY

Please enter your comment!
Please enter your name here

five × four =

Latest news

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಯುವ...

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!   2026ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ರಾಯಲ್...

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ!

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇತಿಹಾಸದಲ್ಲಿ ಕೆಲವು ಆಟಗಾರರು ಕೇವಲ ಕ್ರಿಕೆಟಿಗರಾಗಿ ಮಾತ್ರ ಉಳಿಯುವುದಿಲ್ಲ; ಅವರು ಭಾವನೆಗಳಾಗುತ್ತಾರೆ....

RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ… ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ?

  RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ... ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ? ಈ ಋತುವಿನ ಐಪಿಎಲ್‌ನ ಮೊದಲ ಅರ್ಹತಾ ಸುತ್ತಿನಲ್ಲಿ ಬೆಂಗಳೂರು ಮತ್ತು ಗುಜರಾತ್...
- Advertisement -spot_imgspot_img

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಪ್ರತಿಭಾವಂತ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಅವರು ಭಾನುವಾರ ಲೀಗ್ ಪಂದ್ಯವೊಂದರ...

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್ ಅರಸೀಕೆರೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಕ್ರೀಡಾ ರಸದೌತಣ ನೀಡಲು “ಅರಸೀಕೆರೆ ಚಾಂಪಿಯನ್ಸ್...

Must read

- Advertisement -spot_imgspot_img

You might also likeRELATED
Recommended to you