ಕ್ರಿಕೆಟ್ಲಾರ್ಡ್ಸ್‌ನಲ್ಲಿ ಭಾರತೀಯ ಬೌಲರ್‌ಗಳ ಅಬ್ಬರ: ವಿಜಯಕ್ಕೆ 193 ರನ್ ಅಗತ್ಯ! 

ಲಾರ್ಡ್ಸ್‌ನಲ್ಲಿ ಭಾರತೀಯ ಬೌಲರ್‌ಗಳ ಅಬ್ಬರ: ವಿಜಯಕ್ಕೆ 193 ರನ್ ಅಗತ್ಯ! 

-

- Advertisment -spot_img

ಲಾರ್ಡ್ಸ್‌ನಲ್ಲಿ ಭಾರತೀಯ ಬೌಲರ್‌ಗಳ ಅಬ್ಬರ: ವಿಜಯಕ್ಕೆ 193 ರನ್ ಅಗತ್ಯ! 

ಲಂಡನ್‌, ಲಾರ್ಡ್ಸ್‌ ಮೈದಾನ –
ಸಚಿನ್ ಆಂಡರ್ಸನ್ ಟ್ರೋಫಿಯ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಬೌಲಿಂಗ್ ಶಕ್ತಿ ಪ್ರದರ್ಶಿಸಿ ಇಂಗ್ಲೆಂಡ್ ಅನ್ನು ಕೇವಲ 192 ರನ್‌ಗಳಿಗೆ ಆಲೌಟ್ ಮಾಡಿದೆ. ಭರವಸೆಯ ಸ್ಪಿನ್ ಬೌಲರ್‌ ವಾಷಿಂಗ್‌ಟನ್ ಸುಂದರ್ ಅವರು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು, ಇದರಿಂದ ಇಂಗ್ಲೆಂಡ್‌ ಕಂಗಾಲಾಯಿತು ಮತ್ತು ಭಾರತದ ಗೆಲುವಿನ ಆಸೆ ಜೀವಂತವಿದೆ.

ವಾಷಿಂಗ್‌ಟನ್ ಸುಂದರ್ – ಪಂದ್ಯದ ಗೇಮ್ ಚೇಂಜರ್!

ಇಂಗ್ಲಿಷ್ ಮಧ್ಯಮ ಕ್ರಮಾಂಕವನ್ನು ಕುಸಿತಗೊಳಿಸಿದ ಸುಂದರ್, ಟೆಸ್ಟ್ ಮೈದಾನದಲ್ಲಿ ಮೂರನೇ ಬಾರಿ ತನ್ನ ಜಾಣ್ಮೆಯ ಸ್ಪಿನ್ ಮೋಡಿ ತೋರಿದರು. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರು ತಮ್ಮ ಸುಧಾರಿತ ಬೌಲಿಂಗ್ ಮೂಲಕ ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕವನ್ನು ಸಂಪೂರ್ಣವಾಗಿ ತತ್ತರಿಸಿದರು. ಅವರು 4 ವಿಕೆಟ್‌ಗಳನ್ನು ಪಡೆದರು ಮಾತ್ರವಲ್ಲದೆ, ಪಂದ್ಯದ ತೀವ್ರತೆಯನ್ನು ಭಾರತದ ಕಡೆಗೆ ತಿರುಗಿಸಿದರು ಅವರ ಜೊತೆಗೆ ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಕೂಡ ಅದ್ಭುತವಾಗಿ ಬೌಲಿಂಗ್ ಮಾಡಿದರು. ಭಾರತದ ಬೌಲರ್ ಗಳು ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಪ್ರಬಲವಾಗಿಸಿದ್ದಾರೆ. ಅವರ ಸಂಘಟಿತ ದಾಳಿಯಿಂದ ಇಂಗ್ಲೆಂಡ್ ಇನ್ನಿಂಗ್ಸ್ ಕುಸಿದು ಬಿದ್ದಿತು.

ಭಾರತದ ಇನ್ನಿಂಗ್ಸ್ ಆರಂಭದಲ್ಲೇ ಆಘಾತ ಎದುರಿಸಿತು. ಎರಡನೇ ಇನ್ನಿಂಗ್ಸ್ ಆರಂಭದಲ್ಲೇ ಭಾರತಕ್ಕೆ ಹಿಂದೇಟು ಎದುರಾಗಿದೆ. ಜೋಫ್ರಾ ಆರ್ಚರ್ ಮತ್ತೊಮ್ಮೆ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಿದರು. ಭಾರತದ ಸ್ಟಾರ್ ಓಪನರ್ ಈ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ಲೂ ನಿರ್ಗಮಿಸಿದರು, ಈ ಬಾರಿ ಶೂನ್ಯಕ್ಕೆ! ಅಡಿಗೆ ಬಿದ್ದ ಮೊದಲ ವಿಕೆಟ್ ಬಳಿಕ, ಟೀಮ್ ಇಂಡಿಯಾ ನಾಯಕರು ಮತ್ತು ಪ್ರಮುಖ ಬ್ಯಾಟ್ಸ್‌ಮನ್‌ಗಳು ತಾಳ್ಮೆ ಹಾಗೂ ಜವಾಬ್ದಾರಿಯುತ ಆಟದ ಮೂಲಕ ಗುರಿ ಮುಟ್ಟುವ ಪ್ರಯತ್ನದಲ್ಲಿದ್ದಾರೆ.

ಟೆಸ್ಟ್ ಪಂದ್ಯವು ಈಗ ರೋಚಕ ತಿರುವು ಪಡೆದುಕೊಂಡಿದೆ. 193 ರನ್ ಗುರಿಯನ್ನು ಹೊತ್ತ ಭಾರತೀಯ ತಂಡ ಮುಂದಿನ ದಿನದಾಟದಲ್ಲಿ ಎಡವಿದರೆ ಗಂಭೀರ ಪರಿಣಾಮಗಳು ಎದುರಾಗಬಹುದು. ಆದರೆ ಟೀಮ್ ಇಂಡಿಯಾದಲ್ಲಿ ಶ್ರೇಷ್ಠ ಬ್ಯಾಟಿಂಗ್ ಕ್ರಮವಿದೆ – ಗಿಲ್, ರಾಹುಲ್, ಪಂಥ್, ಜಡೆಜಾ ಇವರೆಲ್ಲ ಆಟವನ್ನ ತಾಳ್ಮೆಯಿಂದ ಆಡಿ ಗೆಲುವಿನತ್ತ ತಂಡವನ್ನು ನಡೆಸಲು ಕಣಕ್ಕಿಳಿದಿದ್ದಾರೆ.

ಈ ಟೆಸ್ಟ್ ಪಂದ್ಯ ತನ್ನ ಅತ್ಯಂತ ರೋಚಕ ಹಂತವನ್ನು ತಲುಪಿದೆ. ಭಾರತೀಯ ಬೌಲರ್‌ಗಳ ಅದ್ಭುತ ಪ್ರದರ್ಶನ ತಂಡವನ್ನು ಪ್ರಬಲ ಸ್ಥಿತಿಗೆ ಕೊಂಡೊಯ್ದಿದ್ದು, ಇದೀಗ ಗಮನ ಸಂಪೂರ್ಣವಾಗಿ ಬ್ಯಾಟಿಂಗ್ ವಿಭಾಗದ ಮೇಲಿದೆ. ಭಾರತ ಈ ಗುರಿಯನ್ನು ಪೂರೈಸುವಲ್ಲಿ ಯಶಸ್ವಿಯಾಗಬಹುದೇ ಅಥವಾ ಇಂಗ್ಲೆಂಡ್ ಮತ್ತೆ ಪಂದ್ಯಕ್ಕೆ ಹಿಂತಿರುಗುತ್ತದೆಯೇ ಎಂಬುದನ್ನು ಮುಂದಿನ ದಿನದಾಟ ತೀರ್ಮಾನಿಸಲಿದೆ.

ಈ ಪಂದ್ಯದಲ್ಲಿ ಭಾರತಕ್ಕೆ ಈಗಿರುವ ಸನ್ನಿವೇಶ ಬಹುಮೂಲ್ಯವಾಗಿದೆ. ಇಂಗ್ಲೆಂಡ್‌ನ ಮೇಲೆ ಒತ್ತಡವಿದೆ ಆದರೆ ಆರಂಭಿಕ ವಿಕೆಟ್ ತಕ್ಷಣಕ್ಕೆ ಬಿದ್ದಿರುವುದು ಭಾರತೀಯ ಶಿಬಿರದಲ್ಲಿ ಆತಂಕವನ್ನು ಉಂಟುಮಾಡಿದೆ. ಮುಂದಿನ ದಿನದಾಟ ನಿರ್ಣಾಯಕವಾಗಿದ್ದು, ಭಾರತ ಗೆಲುವಿಗೆ ಮುನ್ನುಗ್ಗಬಹುದಾ ಅಥವಾ ಇಂಗ್ಲೆಂಡ್ ವಿರುದ್ಧ ಹೋರಾಟ ತೀವ್ರವಾಗುತ್ತದೆಯಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ!

LEAVE A REPLY

Please enter your comment!
Please enter your name here

sixteen + thirteen =

Latest news

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026 ಉಡುಪಿ: ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಮತ್ತು ಸನ್‌ರೈಸ್ ಕ್ರಿಕೆಟ್ ಅಕಾಡೆಮಿ, ರಂಗನಪಾಲ್ಕೆ ಇವರ...

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026 ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮ...

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS ಕಪ್ 2026

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS CUP 2026 CHIVAS ಎಫ್‌ಸಿ ವತಿಯಿಂದ ಅಂಡರ್-21 ಫ್ಲಡ್‌ಲೈಟ್ ಟರ್ಫ್ ಲೀಗ್ ಟೂರ್ನಮೆಂಟ್ “CHIVAS ಕಪ್ 2026”...
- Advertisement -spot_imgspot_img

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

Must read

- Advertisement -spot_imgspot_img

You might also likeRELATED
Recommended to you