SportsKannada | ಸ್ಪೋರ್ಟ್ಸ್ ಕನ್ನಡ

ಬೆಂಗಳೂರು-ಅವಿನಾಶ್ ಸ್ಪೋಟಕ ಇನ್ನಿಂಗ್ಸ್-ಮಟ್ಕಲ್ ತುಮಕೂರು ಫೈನಲ್ ಎಂಟ್ರಿ

ಸೃಷ್ಟಿ ಲೋಕೇಶ್ ಸಾರಥ್ಯದಲ್ಲಿ ಬೆಂಗಳೂರು ಮಾದಾವಾರ ನೈಸ್ ಗ್ರಾಂಡ್‌ ನಲ್ಲಿ ನಡೆಯುತ್ತಿರುವ, ಐತಿಹಾಸಿಕ ಕೆ.ಟಿ‌.ಪಿ‌‌‌.ಎಲ್-2022 ಪಂದ್ಯಾಟದಲ್ಲಿ ಎ‌.ಎನ್.ಕೃಷ್ಣ ಕುಮಾರ್ ಮಾಲೀಕತ್ವದ ಮಟ್ಕಲ್ ತುಮಕೂರು ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದ ಮಟ್ಕಲ್ ತುಮಕೂರು ಫೀಲ್ಡಿಂಗ್ ಆಯ್ದುಕೊಂಡಿತ್ತು.ರಾಕರ್ಸ್ ರಾಗಿಗುಡ್ಡ ಮೊದಲ ಇನ್ನಿಂಗ್ಸ್ ನಲ್ಲಿ  ಸುನಿಲ್ ಬಿರುಸಿನ 27 ರನ್ ಗಳ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿತ್ತು.
ಇದಕ್ಕುತ್ತರವಾಗಿ ಮಟ್ಕಲ್ ತುಮಕೂರು ಅವಿನಾಶ್ ಆಚಾರ್ಯ 10 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 20 ರನ್,ಫಹಾದ್ 13 ರನ್ ನೆರವಿನಿಂದ 6.3 ಓವರ್ ಗಳಲ್ಲಿ ಗುರಿ ಚೇಸ್ ಮಾಡಿ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ‌.
ಅವಿನಾಶ್ ಆಚಾರ್ಯ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನಾದರು.
Exit mobile version