SportsKannada | ಸ್ಪೋರ್ಟ್ಸ್ ಕನ್ನಡ

ಸಾಗರ-ಕರಾವಳಿ ಟ್ರೋಫಿ-2021 ಕರಾವಳಿ ಪ್ರೀಮಿಯರ್ ಲೀಗ್

ಸಾಗರ ಪರಿಸರದ ಯುವ ಕ್ರಿಕೆಟಿಗರಾದ ಉದಯ್ ಮೊಗವೀರ,ಅಕ್ಷಯ್,ಮಹೇಶ್ ಆಚಾರ್ಯ,ರಾಘು ಮೊಗವೀರ ಇವರೆಲ್ಲರ ಸಾರಥ್ಯದಲ್ಲಿ ಗೋಪಾಲಗೌಡ ಕ್ರೀಡಾಂಗಣದಲ್ಲಿ
ಜನವರಿ 29,30 ಮತ್ತು 31 ರಂದು ಕರಾವಳಿ ಪ್ರೀಮಿಯರ್ ಲೀಗ್-2021(ಕರಾವಳಿ ಟ್ರೋಫಿ)ಪಂದ್ಯಾವಳಿ ಆಯೋಜಿಸಲಾಗಿದೆ.
ಸಾಗರದಲ್ಲೇ ಪ್ರಪ್ರಥಮ ಬಾರಿಗೆ ವಿಶಿಷ್ಟ ಮಾದರಿಯ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಲಾಗಿದ್ದು
ವಿಶೇಷವಾಗಿ ಕರಾವಳಿ ಪರಿಸರದ ಆಟಗಾರರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.ಈ ಪಂದ್ಯಾಕೂಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 1,00,001 ನಗದು,ದ್ವಿತೀಯ ಸ್ಥಾನಿ 50,001  ಸಹಿತ ಆಕರ್ಷಕ ಪಾರಿತೋಷಕಗಳನ್ನು ನೀಡಲಾಗುತ್ತಿದೆ.
Exit mobile version