SportsKannada | ಸ್ಪೋರ್ಟ್ಸ್ ಕನ್ನಡ

ಕಲ್ಲಮುಂಡ್ಕೂರು ವಾರಿಯರ್ಸ್ ತಂಡಕ್ಕೆ ಕಿನ್ನಿಗೋಳಿ ಪ್ರೀಮಿಯರ್‌ ಲೀಗ್-2020 ಪ್ರಶಸ್ತಿ

 

ಗ್ರಾಮೀಣ ಮಟ್ಟದ ಪ್ರತಿಭೆಗಳ ಅನಾವರಣ ಹಾಗೂ ಸ್ಥಳೀಯ ತಂಡಗಳ ಬಲವರ್ಧನೆ ಯ ಸದುದ್ದೇಶದಿಂದ
ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡ ದಿನಾಂಕ 7,8.15 ರಂದು ಕಟೀಲು ಸಿತ್ಲ ಮೈದಾನದಲ್ಲಿ ಆಯೋಜಿಸಿದ್ದ ಕಿನ್ನಿಗೋಳಿ ಪ್ರೀಮಿಯರ್ ಲೀಗ್ (KPL) ಪಂದ್ಯಾವಳಿಯ ಪ್ರಶಸ್ತಿಯನ್ನು ಕಲ್ಲಮುಂಡ್ಕೂರು ತಂಡ ಜಯಿಸಿದೆ.

ಪಂದ್ಯಾಕೂಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ದಿನಾಂಕ 15/03/2020 ಮಧ್ಯಾಹ್ನ ಸಿತ್ಲ ಮೈಧಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುಗಪುರುಷ ಸಂಪಾದಕರಾದ ಶ್ರೀಭುವನಾಭಿರಾಮ ಉಡುಪ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀ ಶರತ್ ಶೆಟ್ಟಿ, ಅಧ್ಯಕ್ಷರು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್, ಶ್ರೀ ಗೌತಮ್ ಶೆಟ್ಟಿ, ಅಧ್ಯಕ್ಷರು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್, ಶ್ರೀ ಗಿರೀಶ್ ಶೆಟ್ಟಿ ಶ್ರೀ ಡೆವೆಲಪರ್ ಕಟೀಲು, ಕಟೀಲು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೀತಾ ಪೂಜಾರಿ, ಉಪಾಧ್ಯಕ್ಷರಾದ ಶ್ರೀ ಕಿರಣ್ ಕುಮಾರ್ ಶೆಟ್ಟಿ ಕಟೀಲು, ಎ.ಪಿ.ಎಮ್.ಸಿ.ಸದಸ್ಯರಾದ ಶ್ರೀ ಪ್ರಮೋದ್ ಕುಮಾರ್ ಕಿನ್ನಿಗೋಳಿ ಹಾಗೂ ಕೆ ಎಫ್ ಸಿ ಸಂಘಟನೆಯ ಸಧಸ್ಯರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದ ಪ್ರತಿಷ್ಟಿತ ಪಡುಬಿದ್ರಿ ತಂಡದ ಆದರ್ಶ ಕಪ್ತಾನರು ಹಾಗೂ ರಾಜ್ಯ ಟೆನ್ನಿಸ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ವಲಯಾಧ್ಯಕ್ಷರಾದ ಶ್ರೀ ಶರತ್ ಶೆಟ್ಟಿ ಪಡುಬಿದ್ರಿ ಹಾಗೂ ಕ್ರೀಡಾಲೋಕದಲ್ಲಿ ತೂಫಾನಿ ಮೈಲಿಗಲ್ಲನ್ನು ಸ್ಥಾಪಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿಯ ಸಂಸ್ಥಾಪಕಾಧ್ಯಕ್ಷರಾದ ಶ್ರೀ ಗೌತಮ್ ಶೆಟ್ಟಿ ಕುಂದಾಪುರ ಹಾಗೂ ಪಡುಬಿದ್ರಿ ಫ್ರೆಂಡ್ಸ್ ನ ಪರವಾಗಿ ಸಾಕಷ್ಟು ಪಂದ್ಯಗಳನ್ನಾಡಿ ಯು.ಎ.ಇ ಪರವಾಗಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವಾಡಿದ, ಕೆ‌.ಪಿ.ಎಲ್,ಎಮ್.ಪಿ.ಎಲ್ ನಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿ ಇದೀಗ ಲೆದರ್ ಬಾಲ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಿಸ್ತಿನ ಕ್ರಿಕೆಟಿಗರಾದ ನಿತಿನ್ ಮೂಲ್ಕಿ ಯವರನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ ವಿಜೇತರ ವಿವರ.

ಪ್ರಥಮ ಪ್ರಶಸ್ತಿ : ಕಲ್ಲಮುಂಡ್ಕುರು ವಾರಿಯರ್ಸ್ ( ಸುಕುಮಾರ್ ಅಮೀನ್ ಮಾಲಕತ್ವದ ತಂಡ )
ದ್ವಿತೀಯ ಪ್ರಶಸ್ತಿ : ಐಕಳ ಇಂಡಿಯನ್ಸ್ ( ಪ್ರದೀಪ್ ಅವರ ಮಾಲಕತ್ವದ ತಂಡ )
ಫೇರ್ ಪ್ಲೇ ಪ್ರಶಸ್ತಿ : ಕಿಂಗ್ಸ್ ಇಲೆವೆನ್, ಕಿನ್ನಿಗೋಳಿ ( ದಿವಾಕರ್ ಚೌಟ ಮಾಲಕತ್ವದ ತಂಡ )
ಸರಣಿ ಶ್ರೇಷ್ಠ : ಸುದರ್ಶನ್ ( ಕಟೀಲ್ ಕಮೊಂಡೋಸ್ )
ಪಂದ್ಯ ಶ್ರೇಷ್ಠ :ಜೊಯೆಲ್ (ಕಲ್ಲಮುಂಡ್ಕುರು ವಾರಿಯರ್ಸ್ )
ಬೆಸ್ಟ್ ಬ್ಯಾಟ್ಸಮನ್ : ಸಂದೀಪ್ ಕೃಷ್ಣ (ಕಲ್ಲಮುಂಡ್ಕುರು ವಾರಿಯರ್ಸ್ )
ಬೆಸ್ಟ್ ಬೌಲರ್ : ಪ್ರಕಾಶ್ (ಐಕಳ ಇಂಡಿಯನ್ಸ್ ).

ಶರತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version