SportsKannada | ಸ್ಪೋರ್ಟ್ಸ್ ಕನ್ನಡ

ಕೋವಿಡ್ ನಡುವೆ ದಾವಣಗೆರೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ಎಸ್.ಎಸ್.ಕಪ್-2020

ದಾವಣಗೆರೆ  ಇಲೆವೆನ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ವತಿಯಿಂದ   ಡಾ. ಶಾಮನೂರು ಶಿವಶಂಕರಪ್ಪ ನವರ ಹುಟ್ಟು ಹಬ್ಬದ ಅಂಗವಾಗಿ ಆಚರಿಸುತ್ತಿರುವ  ಎಸ್.ಎಸ್. ಕಪ್ -2020 ಟೆನ್ನಿಸ್ ಬಾಲ್ ಟೂರ್ನಮೆಂಟ್ ಗೆ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ರವರು ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು,
ನಂತರ ಮಾತನಾಡಿದ ಅವರು ಉತ್ತಮ ಆರೋಗ್ಯಕ್ಕೆ ಕ್ರೀಡೆ ಅತಿ ಮುಖ್ಯವಾಗಿದ್ದು, ಈಗಿನ ಯುವಕರು ಮೊಬೈಲ್ ಗೆ ಹೆಚ್ಚು ಗಮನ ನೀಡದೆ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು ಹಾಗೂ ಟೂರ್ನಮೆಂಟ್ ನಲ್ಲಿ ಭಾಗವಹಿಸುತ್ತಿರುವ ಎಲ್ಲಾ ಆಟಗಾರರಿಗೂ ಶುಭ ಕೋರಿದರು, ಈ ಸಂದರ್ಭದಲ್ಲಿ ಬಡಾವಣೆ ಠಾಣೆ ಪಿ.ಎಸ್.ಐ ಅಶ್ವಿನ್ ಕುಮಾರ್, ದಾವಣಗೆರೆ ದಕ್ಷಿಣ ಸಂಚಾರಿ ಪಿ.ಎಸ್.ಐ ಕಿರಣ್ ಕುಮಾರ್, ಕ್ರೀಡಾ ಪ್ರೋತ್ಸಾಹಕರಾದ ಶ್ರೀನಿವಾಸ್ ಶಿವಗಂಗಾ, ಮಹದೇವ್, ರಾಜು ರೆಡ್ಡಿ, ರಮೇಶ್,ಸುರೇಶ್, ಶೌಕತ್, ರವಿ, ಸುರಭಿ ವಿನಯ್, ಸಾಮಾಜಿಕ ಜಾಲತಾಣದ ಕೆ. ಎಲ್. ಹರೀಶ್ ಬಸಾಪುರ, ಸಂಘಟಕರಾದ  ಕುರುಡಿ ಗಿರೀಶ್, ಜಯಪ್ರಕಾಶ್ ಗೌಡ ( ಕುಬೇರ) ಉಪಸ್ಥಿತರಿದ್ದರು.
ಜೂನ್ 16 ರ ವರೆಗೆ ನಡೆಯಲಿರುವ ಈ ಪಂದ್ಯಾಕೂಟದಲ್ಲಿ ದಾವಣಗೆರೆ ಸುತ್ತ ಮುತ್ತಲಿನ 20 ಕಿ.ಮೀ ವ್ಯಾಪ್ತಿಯ 20 ತಂಡಗಳು ಭಾಗವಹಿಸಿದ್ದು,ಒಟ್ಟು 47 ಪಂದ್ಯಗಳು ಸತತ 6 ದಿನಗಳ ಕಾಲ ಸಾಗಲಿದೆ.ಅಲ್ಲದೇ ಪೋಲಿಸ್,ಪತ್ರಕರ್ತರು,ವಕೀಲರು,ವೈದ್ಯರು, ಉದ್ಯಮಿಗಳು ಸೇರಿ 6 ತಂಡಗಳ ವಿಶೇಷ ಪಂದ್ಯಗಳು ನಡೆಯಲಿದ್ದು,ವಿಜೇತ ತಂಡಗಳು ಕ್ರಮವಾಗಿ 33 ಹಾಗೂ 22 ಸಾವಿರ ನಗದು ಸಹಿತ ಎಸ್.ಎಸ್.ಕಪ್-2020 ಪಡೆಯಲಿದ್ದಾರೆ.
ದಾವಣಗೆರೆ ಜಯಪ್ರಕಾಶ್ ಗೌಡ(ಜೆ.ಪಿ)ಸಾರಥ್ಯದಲ್ಲಿ ಈವರೆಗೆ 12 ರಾಷ್ಟ್ರೀಯ ಮಟ್ಟದ  ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆದಿದ್ದು,ರಾಜ್ಯದಲ್ಲಿಯೇ ಅತ್ಯಂತ ವೈಭವೋಪೇತ ಪಂದ್ಯಾಕೂಟ ಎನಿಸಿಕೊಂಡಿದೆ.
Exit mobile version