ಕ್ರಿಕೆಟ್ಕೋವಿಡ್ ನಡುವೆ ದಾವಣಗೆರೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ಎಸ್.ಎಸ್.ಕಪ್-2020

ಕೋವಿಡ್ ನಡುವೆ ದಾವಣಗೆರೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ಎಸ್.ಎಸ್.ಕಪ್-2020

-

- Advertisment -spot_img
ದಾವಣಗೆರೆ  ಇಲೆವೆನ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ವತಿಯಿಂದ   ಡಾ. ಶಾಮನೂರು ಶಿವಶಂಕರಪ್ಪ ನವರ ಹುಟ್ಟು ಹಬ್ಬದ ಅಂಗವಾಗಿ ಆಚರಿಸುತ್ತಿರುವ  ಎಸ್.ಎಸ್. ಕಪ್ -2020 ಟೆನ್ನಿಸ್ ಬಾಲ್ ಟೂರ್ನಮೆಂಟ್ ಗೆ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ರವರು ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು,
ನಂತರ ಮಾತನಾಡಿದ ಅವರು ಉತ್ತಮ ಆರೋಗ್ಯಕ್ಕೆ ಕ್ರೀಡೆ ಅತಿ ಮುಖ್ಯವಾಗಿದ್ದು, ಈಗಿನ ಯುವಕರು ಮೊಬೈಲ್ ಗೆ ಹೆಚ್ಚು ಗಮನ ನೀಡದೆ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು ಹಾಗೂ ಟೂರ್ನಮೆಂಟ್ ನಲ್ಲಿ ಭಾಗವಹಿಸುತ್ತಿರುವ ಎಲ್ಲಾ ಆಟಗಾರರಿಗೂ ಶುಭ ಕೋರಿದರು, ಈ ಸಂದರ್ಭದಲ್ಲಿ ಬಡಾವಣೆ ಠಾಣೆ ಪಿ.ಎಸ್.ಐ ಅಶ್ವಿನ್ ಕುಮಾರ್, ದಾವಣಗೆರೆ ದಕ್ಷಿಣ ಸಂಚಾರಿ ಪಿ.ಎಸ್.ಐ ಕಿರಣ್ ಕುಮಾರ್, ಕ್ರೀಡಾ ಪ್ರೋತ್ಸಾಹಕರಾದ ಶ್ರೀನಿವಾಸ್ ಶಿವಗಂಗಾ, ಮಹದೇವ್, ರಾಜು ರೆಡ್ಡಿ, ರಮೇಶ್,ಸುರೇಶ್, ಶೌಕತ್, ರವಿ, ಸುರಭಿ ವಿನಯ್, ಸಾಮಾಜಿಕ ಜಾಲತಾಣದ ಕೆ. ಎಲ್. ಹರೀಶ್ ಬಸಾಪುರ, ಸಂಘಟಕರಾದ  ಕುರುಡಿ ಗಿರೀಶ್, ಜಯಪ್ರಕಾಶ್ ಗೌಡ ( ಕುಬೇರ) ಉಪಸ್ಥಿತರಿದ್ದರು.
ಜೂನ್ 16 ರ ವರೆಗೆ ನಡೆಯಲಿರುವ ಈ ಪಂದ್ಯಾಕೂಟದಲ್ಲಿ ದಾವಣಗೆರೆ ಸುತ್ತ ಮುತ್ತಲಿನ 20 ಕಿ.ಮೀ ವ್ಯಾಪ್ತಿಯ 20 ತಂಡಗಳು ಭಾಗವಹಿಸಿದ್ದು,ಒಟ್ಟು 47 ಪಂದ್ಯಗಳು ಸತತ 6 ದಿನಗಳ ಕಾಲ ಸಾಗಲಿದೆ.ಅಲ್ಲದೇ ಪೋಲಿಸ್,ಪತ್ರಕರ್ತರು,ವಕೀಲರು,ವೈದ್ಯರು, ಉದ್ಯಮಿಗಳು ಸೇರಿ 6 ತಂಡಗಳ ವಿಶೇಷ ಪಂದ್ಯಗಳು ನಡೆಯಲಿದ್ದು,ವಿಜೇತ ತಂಡಗಳು ಕ್ರಮವಾಗಿ 33 ಹಾಗೂ 22 ಸಾವಿರ ನಗದು ಸಹಿತ ಎಸ್.ಎಸ್.ಕಪ್-2020 ಪಡೆಯಲಿದ್ದಾರೆ.
ದಾವಣಗೆರೆ ಜಯಪ್ರಕಾಶ್ ಗೌಡ(ಜೆ.ಪಿ)ಸಾರಥ್ಯದಲ್ಲಿ ಈವರೆಗೆ 12 ರಾಷ್ಟ್ರೀಯ ಮಟ್ಟದ  ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆದಿದ್ದು,ರಾಜ್ಯದಲ್ಲಿಯೇ ಅತ್ಯಂತ ವೈಭವೋಪೇತ ಪಂದ್ಯಾಕೂಟ ಎನಿಸಿಕೊಂಡಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

14 + two =

Latest news

ಭಾರತದ ‘ಬಿಗ್ ಗೇಮ್ ಪ್ಲೇಯರ್’ ಯುವರಾಜ್ ಸಿಂಗ್

ಭಾರತದ ‘ಬಿಗ್ ಗೇಮ್ ಪ್ಲೇಯರ್’ ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್, ದೊಡ್ಡ ವೇದಿಕೆಗಳಲ್ಲಿ ತಂಡಕ್ಕೆ ಜಯ ತಂದುಕೊಡುವ ಶಕ್ತಿಶಾಲಿ ಪ್ರದರ್ಶನಗಳಿಂದ...

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು ಯಲಹಂಕ ತಾಲ್ಲೂಕಿನ ಕುದುರೆಗೆರೆ ಪ್ರದೇಶದಲ್ಲಿ ಕೆ.ಎಂ.ಶ್ರೀನಿವಾಸ್ ರವರ ಸ್ಮರಣಾರ್ಥ ಹಾಗೂ ಕೆ.ಎಂ. ಸುಬ್ರಮಣಿ ರವರ...

ಶಿವ ಬಿಗ್ ಬ್ಯಾಷ್ 2025: ಕೋಟ ಸಾಲಿಗ್ರಾಮದಲ್ಲಿ ಡಿಸೆಂಬರ್ 13-14ರಂದು

ಶಿವ ಬಿಗ್ ಬ್ಯಾಷ್ 2025: ಕೋಟ ಸಾಲಿಗ್ರಾಮದಲ್ಲಿ ಡಿಸೆಂಬರ್ 13-14ರಂದು ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ, ಕೋಟ ಸಾಲಿಗ್ರಾಮದ ಆಯೋಜನೆಯಲ್ಲಿ ನಡೆಯುವ ಪ್ರತಿಷ್ಠಿತ ಶಿವ ಬಿಗ್...

ಕೆಚ್ಚಿನ.. ಕಿಚ್ಚಿನ ಯುವರಾಜನ ಕಥೆ..!

ಕೆಚ್ಚಿನ.. ಕಿಚ್ಚಿನ ಯುವರಾಜನ ಕಥೆ..! ಪಂಜಾಬ್’ನ ಲೂಧಿಯಾನದ ಕೆನೆಚ್ ಎಂಬ ಹಳ್ಳಿ. ಅಲ್ಲೊಬ್ಬರು ಒಂದೊಮ್ಮೆ ಭಾರತ ಪರ ಆಡಿದ್ದ ಮಾಜಿ ಕ್ರಿಕೆಟಿಗ.. ಅವರಿಗೊಬ್ಬ ಮಗ.. ತನ್ನ ಕ್ರಿಕೆಟ್...
- Advertisement -spot_imgspot_img

ಅರಬ್ಬರ ನಾಡಿನಲ್ಲಿ ಕುಂದಗನ್ನಡಿಗರ ಸಮಾಗಮ

ಅರಬ್ಬರ ನಾಡಿನಲ್ಲಿ ಕುಂದಗನ್ನಡಿಗರ ಸಮಾಗಮ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಯುಎಇ ನಲ್ಲಿ ನೆಲೆಸಿರುವ ಕುಂದಗನ್ನಡಿಗರಿಗಾಗಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ದೆಗಳು...

ಕಂದಾಯೋತ್ಸವ 2025 : ಕಂದಾಯ ಇಲಾಖೆಯ ಸಾಂಸ್ಕೃತಿಕ – ಕ್ರೀಡಾ ಸಂಭ್ರಮ

ಕಂದಾಯೋತ್ಸವ 2025 : ಕಂದಾಯ ಇಲಾಖೆಯ ಸಾಂಸ್ಕೃತಿಕ – ಕ್ರೀಡಾ ಸಂಭ್ರಮ ಶಿವಮೊಗ್ಗ ಜಿಲ್ಲೆಯ ಕಂದಾಯ ಇಲಾಖೆಯ ವತಿಯಿಂದ **ಕಂದಾಯೋತ್ಸವ – 2025** ನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ....

Must read

- Advertisement -spot_imgspot_img

You might also likeRELATED
Recommended to you