Site icon SportsKannada ಸ್ಪೋರ್ಟ್ಸ್ ಕನ್ನಡ

ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿಗೆ ಯೋಗರತ್ನ ತನುಶ್ರೀ ಪಿತ್ರೋಡಿ ಆಯ್ಕೆ

ಚಿತ್ರದುರ್ಗದ ಮುರುಘಾ ಮಠದಿಂದ ಎಳೆಯ ವಯಸ್ಸಿನಲ್ಲಿ ಸಾಹಸ ಮಾಡಿದ ಮಕ್ಕಳಿಗೆ ನೀಡುವ ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿಗೆ ಯೋಗರತ್ನ ತನುಶ್ರೀ ಪಿತ್ರೋಡಿ ಆಯ್ಕೆಯಾಗಿದ್ದಾರೆ.
ಯೋಗ ಸಾಧನೆಯಲ್ಲಿ ಈಗಾಗಲೇ 7 ವಿಶ್ವದಾಖಲೆಯನ್ನು ಮಾಡಿರುವ ತನುಶ್ರೀ 2009 ಮಾರ್ಚ್ 15 ರಂದು ಜನಿಸಿದ್ದು,ಉಡುಪಿಯ ಸಂಧ್ಯಾ ಮತ್ತು ಉದಯ್ ಕುಮಾರ್ ಪುತ್ರಿ.ಮೂರನೇ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಮಾಡಿ,ಜೊತೆಗೆ ಭರತನಾಟ್ಯ,ಯಕ್ಷಗಾನ ಮತ್ತು ಹುಲಿವೇಷ ಕುಣಿತದಲ್ಲೂ ಸೈ ಎನ್ನಿಸಿಕೊಂಡಿದ್ದಾಳೆ.
Exit mobile version