SportsKannada | ಸ್ಪೋರ್ಟ್ಸ್ ಕನ್ನಡ

ವಿಶ್ವಕರ್ಮ ಸಮಾಜ(ರಿ) ತಲ್ಲೂರು ಇವರ ಆಶ್ರಯದಲ್ಲಿ ವಿಶ್ವಕರ್ಮ ಟ್ರೋಫಿ-2022

ಕುಂದಾಪುರ-ವಿಶ್ವಕರ್ಮ ಸಮಾಜ(ರಿ)ತಲ್ಲೂರು ಇವರ ಆಶ್ರಯದಲ್ಲಿ, ಸಂಘದ ನಿವೇಶನ ಮತ್ತು ಕಟ್ಟಡ ನಿರ್ಮಾಣದ ಸಹಾಯಾರ್ಥವಾಗಿ, ಡಿಸೆಂಬರ್ 17 ಮತ್ತು 18 ರಂದು ತಲ್ಲೂರು ಮೈದಾನದಲ್ಲಿ ಕುಂದಾಪುರ ಮತ್ತು ಬೈಂದೂರು ವಲಯ ಮಟ್ಟದ ಕ್ರಿಕೆಟ್ ಪಂದ್ಯಾಟ  ಆಯೋಜಿಸಲಾಗಿದೆ.
ಡಿಸೆಂಬರ್ 17 ಶನಿವಾರದಂದು ವಿಶ್ವಕರ್ಮ
 ಸಮಾಜದ ತಂಡಗಳು ಮತ್ತು ಡಿಸೆಂಬರ್ 18 ಆದಿತ್ಯವಾರ ಸಾರ್ವಜನಿಕ ತಂಡಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಥಮ ಬಹುಮಾನ 30 ಸಾವಿರ,ದ್ವಿತೀಯ 20 ಸಾವಿರ ನಗದು ಸಹಿತ ಆಕರ್ಷಕ ವಿಶ್ವಕರ್ಮ ಟ್ರೋಫಿಯನ್ನು ನೀಡಲಾಗುತ್ತಿದೆ ಹಾಗೂ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಆಟಗಾರರು ವಿಶೇಷ ಬಹುಮಾನಗಳನ್ನು ಪಡೆಯಲಿದ್ದಾರೆ.
ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರಪ್ರಸಾರ ಬಿತ್ತರಗೊಳ್ಳಲಿದ್ದು,ತೃತೀಯ ಅಂಪೈರ್ ಮತ್ತು ಡಿ.ಜೆ ಸೌಂಡ್ಸ್ ಅಳವಡಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ 9900665419,
9731082926,9740734107 ಮತ್ತು 9972224025 ಈ ನಂಬರ್ ಗಳನ್ನು ಸಂಪರ್ಕಿಸಬಹುದು.
Exit mobile version