SportsKannada | ಸ್ಪೋರ್ಟ್ಸ್ ಕನ್ನಡ

ವೆಂಕಟರಮಣ ಪಿತ್ರೋಡಿ-ಆಜಾದಿ ಕೀ ಅಮೃತ್ ಮಹೋತ್ಸವ- ಕ್ರೀಡಾಕೂಟ ಉದ್ಘಾಟನೆ

ಉದ್ಯಾವರ-75 ನೇ ಸ್ವಾತಂತ್ರ್ಯ ದಿನಾಚರಣೆ(ಆಜಾದಿ ಕೀ ಅಮೃತ್ ಮಹೋತ್ಸವ) ಪ್ರಯುಕ್ತ ,ಪಿತ್ರೋಡಿ ಶ್ರೀ ವೆಂಕಟರಮಣ ಭಜನಾ ಮಂದಿರ,ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ)ಪಿತ್ರೋಡಿ ಮತ್ತು ಮಹಿಳಾ ಮಂಡಳಿ ಇವರ ಜಂಟಿ ಆಶ್ರಯದಲ್ಲಿ ಮಂಗಳವಾರ ಕ್ರೀಡಾಕೂಟ ಜರುಗಿತು.
 
ಭಜನಾ ಮಂದಿರದ ಅಧ್ಯಕ್ಷ ಗಂಗಾಧರ ಕರ್ಕೇರ ಮತ್ತು ವೆಂಕಟರಮಣ ಸ್ಪೋರ್ಟ್ಸ್& ಕಲ್ಚರಲ್ ಕ್ಲಬ್ ನ ಅಧ್ಯಕ್ಷ ನವೀನ್ ಸಾಲ್ಯಾನ್ ಜಂಟಿಯಾಗಿ ಚಾಲನೆಯನ್ನು ನೀಡಿದರು.ಆಯ್ದ ವಿವಿಧ ವಿಭಾಗಗಳಲ್ಲಿ ನಡೆದ ಕ್ರೀಡಾಕೂಟದಲ್ಲಿ 100ಕ್ಕೂ ಹೆಚ್ಚಿನ ಮಕ್ಕಳು ಭಾಗವಹಿಸಿದರು.
 
ಈ ಸಂದರ್ಭ ಮಹಿಳಾ ವಿಭಾಗದ ಅಧ್ಯಕ್ಷೆ ಭಾರತೀ ಚಂದ್ರ ಬಂಗೇರ,ಮಾಜಿ ಅಧ್ಯಕ್ಷೆ ರಾಜೀವಿ ಉಮೇಶ್ ಕರ್ಕೇರ,ಭಜನಾ ಮಂದಿರದ ಕಾರ್ಯದರ್ಶಿ ವಸಂತ್ ಸಾಲ್ಯಾನ್,ವೆಂಕಟರಮಣ ಸಂಸ್ಥೆಯ
ಉಪಾಧ್ಯಕ್ಷ ವಿಜಯ್ ಕೋಟ್ಯಾನ್,
ಕಾರ್ಯದರ್ಶಿ ಪ್ರವೀಣ್ ಕುಮಾರ್ ಪಿತ್ರೋಡಿ,ಉಮೇಶ್ ಕರ್ಕೇರ,
ಉಮಾನಾಥ ಕರ್ಕೇರ,ಲೋಕೇಶ್ ಸುವರ್ಣ,ನಾಗೇಶ್ ತಿಂಗಳಾಯ,ಮೋಹಿನಿ,ಸಬಿತಾ,ಪೂರ್ಣಿಮಾ,ರೇಖಾ
ಕರ್ಕೇರ,ಸಂಗೀತ ಮತ್ತಿತರರು ಉಪಸ್ಥಿತರಿದ್ದರು
Exit mobile version