SportsKannada | ಸ್ಪೋರ್ಟ್ಸ್ ಕನ್ನಡ

ವೈದಿಕ್ ಪ್ರೀಮಿಯರ್ ಲೀಗ್ ವೇದಿಕೆಯ ವಿ ಪಿ ಎಲ್ ಕ್ರಿಕೆಟ್ ಪಂದ್ಯಾವಳಿಗೆ ತೆರೆ

ಮಂಗಳೂರು-ವೈದಿಕ್ ಪ್ರೀಮಿಯರ್ ಲೀಗ್ ವೇದಿಕೆಯ ವತಿಯಿಂದ 4ನೇ  ವರ್ಷದ ಕ್ರಿಕೆಟ್ ಪಂದ್ಯಾವಳಿ  (cricket tournament) ಬಂಟ್ವಾಳ ತಾಲೂಕಿನ ಬರಿಮಾರು ಮಹಮ್ಮಾಯಿ ದೇವಸ್ಥಾನದ  ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಅಂತಿಮ ಪಂದ್ಯಾವಳಿಯ ನಾಣ್ಯ  ಚಿಮ್ಮುವಿಕೆಯನ್ನು ಶ್ರೀ   ಗೋಪಾಲಕೃಷ್ಣ ಭಟ್ ಮಂಗಳೂರು  ( ಗೋಪಿ ಭಟ್ ) ನೇರವೇರಿಸಿದರು. ಫೈನಲ್ ಪಂದ್ಯಾವಳಿಯ ಎರಡೂ ತಂಡದ ಆಟಗಾರರಿಗೆ ಶುಭಾಶಯ ತಿಳಿಸಿದರು.
ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ಭಟ್ ‘ಜಿಸ್  ಸೂಪರ್ ಕಿಂಗ್ಸ್ ತಂಡ, ರನ್ನರ್ ಅಪ್ ಆಗಿ ಮುಂಬಯಿಯ ರಾಕಿಂಗ್ ವೈದಿಕ್ಸ್ ತಂಡ ಪಡೆದುಕೊಂಡಿದೆ. ರಾಜ್ಯದೆಲ್ಲೆಡೆಯ  ಹಾಗೂ ಹೊರರಾಜ್ಯದ ಒಟ್ಟು  8 ತಂಡಗಳು ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ರಂಜಿತ್  ಭಟ್ರ  ಭಟ್ ಬ್ರದರ್ಸ್ ತಂಡವು ಭರತ್ ಭಟ್ ನಾಯಕತ್ವದ ಕೇರಳದ ಅನಂತ್ ವೈದಿಕ್ಸ್ ಮಂಜೇಶ್ವರ ವನ್ನು ಪರಾಭವಗೊಳಿಸಿ ಮೂರನೆಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಸಮಾರೋಪ ಸಮಾರಂಭ ಉದ್ದೇಶಿಸಿ  ಶ್ರೀ ಕ್ಷೇತ್ರ ಬರಿಮಾರುವಿನ ಅನುವಂಶಿಕ ಮೊಕ್ತೇಸರರು, ಧರ್ಮದರ್ಶಿಗಳು ಶ್ರೀ ರಾಕೇಶ್ ಪ್ರಭು,  ಮಾತನಾಡಿ, 4 ವರ್ಷಗಳಿಂದ ಅನೇಕ ಕ್ರೀಡಾಪಟುಗಳನ್ನು ಈ ವೇದಿಕೆ ಪರಿಚಯಿಸಿ ಪ್ರೋತ್ಸಾಹಿಸಿದೆ ಎಂದು ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
 ಮಹಮ್ಮಾಯಿ ದೇವಸ್ಥಾನದ  ರವೀಶ್ ಪ್ರಭು ಮಾತನಾಡಿ, ಪ್ರತಿ ವರ್ಷವೂ ಹಲವು ಪಂದ್ಯಾವಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಮುಂದಿನ ಪೀಳಿಗೆಗೆ ಹಲವು ಕ್ರೀಡಾಪಟುಗಳನ್ನು ಪರಿಚಯಿಸಲಿದೆ ಎಂದರು.
ವೇದಿಕೆಯ ಅಧ್ಯಕ್ಷ  ಪಂಡಿತ್ ಎಂ. ಕಾಶಿನಾಥ ಆಚಾರ್ಯ ಮಾತನಾಡಿ, ಬೇರೆ ಬೇರೆ ಭಾಗದಲ್ಲಿದ್ದ ಸಮಾಜದ  ವೈದಿಕರು  ಒಂದೆಡೆ ಸೇರಲು ಈ ಕ್ರೀಡಾಕೂಟ ಹಮ್ಮಿಕೊಳ್ಳುತ್ತಿದ್ದು ಯಶ್ವಸಿಯಾಗಿ 4 ವರ್ಷ ಪೂರೈಸಲಾಗಿದೆ. ಸ್ನೇಹಕ್ಕಾಗಿ ಕ್ರೀಡೆ ಆಯೋಜಿಸುತ್ತಾ ಬಂದಿದ್ದು ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶ್ವಸಿಯಾಗಿದೆ ಎಂದರು.
ವಿಜೇತ ತಂಡಗಳಿಗೆ , ಪ್ರತಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅರ್ಚಕರು ಮೂಲ್ಕಿ ರಮಾನಾಥ್ ಭಟ್, ಚಾಂಪಿಯನ್ ತಂಡದ ನಾಯಕ  ಸುದೇಶ್ ಭಟ್ ಮೂಡಬಿದ್ರೆ , ರನ್ನರ್ ಅಪ್ ತಂಡದ ನಾಯಕ  ಹರೀಶ್ ಭಟ್ ಮುಂಬಯಿ  ಮತ್ತಿತರರು ಇದ್ದರು.
ವೈದಿಕರ ಈ ಪಂದ್ಯಾಕೂಟದಲ್ಲಿ ಕೊಂಕಣಿ, ಕನ್ನಡ, ಇಂಗ್ಲಿಷ್, ಹಿಂದಿ, ಮಲಯಾಳಂ, ತುಳು ಹಾಗೂ ಜೊತೆ ಜೊತೆಗೆ ಸಂಸ್ಕೃತದಲ್ಲಿ ವೀಕ್ಷಕ ವಿವರಣೆಯನ್ನು ನೀಡಿದ್ದು ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಗೋಪಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
ಶುಭವಾಗಲಿ,
ಅವಕಾಶಕ್ಕಾಗಿ ಧನ್ಯವಾದಗಳು
ಸುರೇಶ್ ಭಟ್ ಮೂಲ್ಕಿ
ದೂ: 98454 83433
Exit mobile version