SportsKannada | ಸ್ಪೋರ್ಟ್ಸ್ ಕನ್ನಡ

ಉದ್ಯಾವರ-ವೆಂಕಟರಮಣ ಪಿತ್ರೋಡಿ ಮಡಿಲಿಗೆ “ಸಮಾಗಮ ಟ್ರೋಫಿ-2021”

90 ರ ದಶಕದಲ್ಲಿ ಟೆನ್ನಿಸ್ಬಾಲ್ ಕ್ರಿಕೆಟ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಉದ್ಯಾವರ ಪರಿಸರದ ಹಿರಿಯ ಆಟಗಾರರನ್ನೆಲ್ಲಾ ಒಗ್ಗೂಡಿಸುವ ಸಲುವಾಗಿ,ಉದ್ಯಾವರದ ಕ್ರೀಡಾ ಪ್ರೋತ್ಸಾಹಕರು,ಕುತ್ಪಾಡಿ ಫ್ರೆಂಡ್ಸ್ ನ ಹಿರಿಯ ಆಟಗಾರರಾದ ಶ್ರೀ.ವಸಂತ್ ಕುತ್ಪಾಡಿ ಇವರ ಸಾರಥ್ಯದಲ್ಲಿ,90 ರ ದಶಕದಲ್ಲಿ ಗತವೈಭವ ಮೆರೆದ ಉದ್ಯಾವರ ಪರಿಸರದ ಆಹ್ವಾನಿತ 10 ತಂಡಗಳ ನಡುವೆ ಆಯೋಜಿಸಲಾಗಿದ್ದ “ಸಮಾಗಮ ಟ್ರೋಫಿ-2021″ಯನ್ನು ವೆಂಕಟರಮಣ ಪಿತ್ರೋಡಿ ತಂಡ ಜಯಿಸಿದೆ.
ಮಾರ್ಚ್ 7 ರವಿವಾರದಂದು ಉದ್ಯಾವರ ಗ್ರಾಮ ಪಂಚಾಯತ್ ಕ್ರೀಡಾಂಗಣದಲ್ಲಿ ಈ ಪ‌ಂದ್ಯಾಟ ನಡೆದಿತ್ತು.ಲೀಗ್ ಹಂತದ ರೋಚಕ‌ ಸೆಣಸಾಟಗಳ ಬಳಿಕ ಫೈನಲ್ ನಲ್ಲಿ ವೆಂಕಟರಮಣ ಪಿತ್ರೋಡಿ ತಂಡ ಜನಪ್ರಿಯ ಉದ್ಯಾವರ ತಂಡವನ್ನು ಸೋಲಿಸಿ ಸಮಾಗಮ ಟ್ರೋಫಿ-2021 ಜಯಿಸಿತ್ತು‌.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಸಂದೀಪ್ ಕುಮಾರ್ ಪಿತ್ರೋಡಿ, ಬೆಸ್ಟ್ ಬೌಲರ್ ರಕ್ಷಿತ್ ವಿ‌.ಸಿ‌.ಸಿ ,ಬೆಸ್ಟ್ ಬ್ಯಾಟ್ಸ್‌ಮನ್‌ ಪ್ರಶಸ್ತಿ ಪ್ರಸಾದ್ ಜನಪ್ರಿಯ ಹಾಗೂ ಸರಣಿಶ್ರೇಷ್ಟ  ಪ್ರಶಸ್ತಿಯನ್ನು ಜಯರಾಮ್ ವಿ‌.ಸಿ‌.ಸಿ ಪಡೆದರೆ,ಕರಾವಳಿ ಪಿತ್ರೋಡಿ ಶಿಸ್ತುಬದ್ಧ ತಂಡ ಗೌರವಕ್ಕೆ ಪಾತ್ರವಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗಣ್ಯರಾದ
ಶರತ್ ಶೆಟ್ಟಿ ಪಡುಬಿದ್ರಿ,ರಾಧಾಕೃಷ್ಣ ಶ್ರೀಯಾನ್,ಜಿತೇಂದ್ರ ಶೆಟ್ಟಿ ಉದ್ಯಾವರ,ರಿಯಾಜ್ ಪಳ್ಳಿ,ಲೋಹಿತ್ ಕುಮಾರ್ ಪಿತ್ರೋಡಿ,ಶ್ರೀಮತಿ ಮಾಲತಿ.ಎಸ್.ಸಾಲ್ಯಾನ್,ಕೋಟ ರಾಮಕೃಷ್ಣ ಆಚಾರ್,ಸತೀಶ್ ಕುಂದರ್,ಶ್ರೀಮತಿ ಫ್ರೀಡಾ ಡಿಸೋಜ,ಸದಾಶಿವ ಅಮೀನ್,ಮಿಥೇಶ್ ಸುವರ್ಣ,ಆಬಿದ್ ಆಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು,ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಶರತ್ ಶೆಟ್ಟಿ ಪಡುಬಿದ್ರಿ,ನಿವೃತ್ತ ಯೋಧರು ಬಾಲಚಂದ್ರ ಪಿತ್ರೋಡಿ,ರಾಜ್ಯಮಟ್ಟದ ಆಟಗಾರರಾದ ಪ್ರವೀಣ್ ಪಿತ್ರೋಡಿ, ಅಪ್ಪು ಉದ್ಯಾವರ,ಹಿರಿಯ ವೀಕ್ಷಕ ವಿವರಣೆಕಾರರು ವಿನಯ್ ಉದ್ಯಾವರ ಹಾಗೂ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಪ್ರವರ್ತಕ ಕೋಟ ರಾಮಕೃಷ್ಣ ಆಚಾರ್ ಈ 6 ಮಂದಿ ಸಾಧಕರನ್ನು ಸಂಸ್ಥೆ ಪರವಾಗಿ ಸನ್ಮಾನಿಸಲಾಯಿತು.
ಹಾಗೂ ಉದ್ಯಾವರ ಪರಿಸರದ ಹಿರಿಯ ತಂಡಗಳಾದ ಸಭಾ ಕ್ರಿಕೆಟರ್ಸ್,ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್,ಕುತ್ಪಾಡಿ ಕ್ರಿಕೆಟರ್ಸ್,11 ಸ್ಟಾರ್ ಕ್ರಿಕೆಟರ್ಸ್, ಕರಾವಳಿ ಪಿತ್ರೋಡಿ, ಬೊಳ್ಜೆ ಉದ್ಯಾವರ,ಜನಪ್ರಿಯ ಕ್ರಿಕೆಟರ್ಸ್, ಆಜಾದ್ ಕ್ರಿಕೆಟರ್ಸ್,ಸಂಪಿಗೆ ನಗರ(ಮಿತ್ರ ವೃಂದ),ಕೇದಾರ್ ಫ್ರೆಂಡ್ಸ್ ತಂಡಗಳನ್ನು ಅಭಿನಂದಿಸಲಾಯಿತು.
ವೀಕ್ಷಕ ವಿವರಣೆಯಲ್ಲಿ ಹಿರಿಯ ವೀಕ್ಷಕ ವಿವರಣೆಕಾರರಾದ ಉಮೇಶ್ ಪೂಜಾರಿ ಬ್ರಹ್ಮಾವರ ಹಾಗೂ ವಿನಯ್ ಉದ್ಯಾವರ ಸಹಕರಿಸಿದರು…
Exit mobile version