Site icon SportsKannada ಸ್ಪೋರ್ಟ್ಸ್ ಕನ್ನಡ

777 ಟ್ರೋಫಿ ಗೆ ಸಾಕ್ಷಿಯಾಗಲಿರುವ ಉಡುಪಿ; ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್ ದಿಗ್ಗಜರಿಗೆ ಸನ್ಮಾನ!

 

777 ಟ್ರೋಫಿ ಗೆ ಸಾಕ್ಷಿಯಾಗಲಿರುವ ಉಡುಪಿ; ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್ ದಿಗ್ಗಜರಿಗೆ ಸನ್ಮಾನ!

ಉಡುಪಿ: ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್ ಲೋಕದ ದಿಗ್ಗಜರಿಗೆ ಸಮರ್ಪಿತವಾದ “777 ಟ್ರೋಫಿ 2025 – ಲೆಜೆಂಡರಿ ಕ್ರಿಕೆಟರ್ಸ್ ಟೂರ್ನಮೆಂಟ್” ಉಡುಪಿ ನಗರದಲ್ಲಿ ಈ ವಾರ ಅದ್ದೂರಿಯಾಗಿ ನಡೆಯಲಿದೆ.

ಈ ಟೂರ್ನಮೆಂಟ್ ನ ವಿಶೇಷತೆ ಎಂದರೆ – ಇದು ಒಂದು ಆಕ್ಷನ್‌ ಆಧಾರಿತ ಟೂರ್ನಮೆಂಟ್ ಆಗಿದ್ದು, ತಂಡಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಪ್ರತಿ ತಂಡವೂ ತಮ್ಮ ತಮ್ಮ ಆಕ್ಷನ್‌ನಲ್ಲಿ ಶ್ರೇಷ್ಠ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ಅಭಿಮಾನಿಗಳಲ್ಲಿ ಈಗಲೇ ಕುತೂಹಲ ಮೂಡಿಸಿದೆ – ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕು!

ಈ ಟೂರ್ನಿಯ ಆಯೋಜಕ ಸಂದೇಶ್ ಕುಂದರ್, ಅವರು ಹಿಂದಿನ ದಿನಗಳಲ್ಲಿ ಪ್ರಸಿದ್ಧ “ಸೀಶೆಲ್ಸ್ ಇಂಟರ್‌ನ್ಯಾಷನಲ್” ತಂಡವನ್ನು ಪ್ರತಿನಿಧಿಸಿದ್ದರೆ, ಅಂದಿನ ದಿನಗಳಲ್ಲಿ ಅವರು “777 ಕ್ರಿಕೆಟ್ ಕ್ಲಬ್” ಪರವೂ ಆಡಿದ್ದರು. ಆ ನೆನಪಿಗೆ ಗೌರವವಾಗಿ, ಅವರು ಈಗ ಇದೇ ಹೆಸರಿನಲ್ಲಿ ಈ ಅದ್ದೂರಿ ಟೂರ್ನಿಯನ್ನು ಆಯೋಜಿಸಿದ್ದಾರೆ. ಸಂದೇಶ್ ಕುಂದರ್ ಅವರು ಮುಂಚಿನ “ವಾಹಿನಿ ಪಡುಕರೆ” ತಂಡದ ಸ್ಟಾರ್ ಆಟಗಾರರಾಗಿದ್ದರು.

ಈ ಸಂದರ್ಭದಲ್ಲಿ, ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್‌ಗೆ ಮಹತ್ವದ ಕೊಡುಗೆ ನೀಡಿದ ಆರು ಹಿರಿಯ ಕ್ರಿಕೆಟಿಗರನ್ನು ಗೌರವಿಸುವ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.

ಗೌರವಕ್ಕೆ ಆಯ್ಕೆಯಾದ ಆಟಗಾರರು:
➡️ ಪ್ರದೀಪ್ ವಾಜ್ ( ಚಕ್ರವರ್ತಿ ಕುಂದಾಪುರ)
➡️ ಸುರೇಂದ್ರ ( ವೀರಕೇಸರಿ ಸುರತ್ಕಲ್)
➡️ ದಿನೇಶ್ ಪೈ (ಸ್ವಾಮಿ ಗಂಗೊಳ್ಳಿ)
➡️ ಸತೀಶ್ ಕುಂದರ್ (ವಾಹಿನಿ ಪಡುಕರೆ)
➡️ ಸತೀಶ್.ಜಿ (ಸೀ ಶೋರ್ ಮಲ್ಪೆ)
➡️ ಡಾ. ವಿನೋದ್ ನಾಯಕ್ (ಸ್ಪಾರ್ಕ್ ಉಡುಪಿ)

777 ಕ್ರಿಕೆಟರ್ಸ್ ತೆಂಕನಿಡಿಯೂರು ಆಯೋಜಿಸುತ್ತಿರುವ ಈ ಟೂರ್ನಮೆಂಟ್‌ ಅಕ್ಟೋಬರ್ 31, ನವೆಂಬರ್ 1 ಮತ್ತು 2ರಂದು ನೇಜಾರು ಗ್ರೌಂಡ್ ನಲ್ಲಿ ನಡೆಯಲಿದ್ದು, ಪಂದ್ಯಗಳು Sports ಕನ್ನಡ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ. Sports Mail ಕೂಡ ಈ ಟೂರ್ನಿಯ ಅಧಿಕೃತ ಪ್ರಸಾರಕರು.

ಉಡುಪಿ ಕ್ರಿಕೆಟ್ ಅಭಿಮಾನಿಗಳಿಗೆ ಇದು ನಿಜಕ್ಕೂ ವಿಶಿಷ್ಟ ಕ್ರಿಕೆಟ್ ಹಬ್ಬವಾಗಲಿದ್ದು, ಕರ್ನಾಟಕದ ಟೆನಿಸ್‌ಬಾಲ್ ಕ್ರಿಕೆಟ್‌ನ ಶ್ರೇಷ್ಠ ಪ್ರತಿಭೆಗಳ ಪ್ರದರ್ಶನ ಕಣ್ತುಂಬಿಕೊಳ್ಳಲು ಎಲ್ಲರೂ ಕಾಯುತ್ತಿದ್ದಾರೆ.

Exit mobile version