SportsKannada | ಸ್ಪೋರ್ಟ್ಸ್ ಕನ್ನಡ

ಟಿ.ಸಿ.ಎ ಉಡುಪಿ ವತಿಯಿಂದ ಫ್ರೆಂಡ್ಸ್ ಬೆಂಗಳೂರು ಕಪ್ ರೂವಾರಿ ರೇಣು ಗೌಡರಿಗೆ ಸನ್ಮಾನ

ಬೆಂಗಳೂರು-ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್(T.C.A) ವತಿಯಿಂದ ಫ್ರೆಂಡ್ಸ್ ಬೆಂಗಳೂರು ಕಪ್-2023 ಅಂತರಾಷ್ಟ್ರೀಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟದ ಪ್ರಮುಖ ರೂವಾರಿ,ಕಳೆದ 28 ವರ್ಷಗಳಿಂದ
ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ
ಫ್ರೆಂಡ್ಸ್ ಬೆಂಗಳೂರು ತಂಡದ ಮಾಲೀಕರಾದ ಶ್ರೀಯುತ ರೇಣು ಗೌಡ ಇವರನ್ನು ಗೌರವಿಸಲಾಯಿತು.
ಈ ಸಂದರ್ಭ ಟಿ‌.ಸಿ.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ, ಸವ್ಯಸಾಚಿ ಗ್ರೂಪ್ಸ್ ಪ್ರವರ್ತಕರಾದ ವಿಜಯ್ ಹೆಗ್ಡೆ,ಕೆ.ಪಿ.ಸತೀಶ್ ಚಕ್ರವರ್ತಿ ಕುಂದಾಪುರ,
ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,ರಾಜ್ಯ ಮಟ್ಟದ ವೀಕ್ಷಕ ವಿವರಣೆಕಾರರಾದ ಪ್ರಶಾಂತ್ ಅಂಬಲಪಾಡಿ ಮತ್ತು ಶಿವನಾರಾಯಣ ಐತಾಳ್ ಕೋಟ ಉಪಸ್ಥಿತರಿದ್ದರು..
Exit mobile version