SportsKannada | ಸ್ಪೋರ್ಟ್ಸ್ ಕನ್ನಡ

ಶಾಸಕರು ಎಸ್.ಆರ್.ವಿಶ್ವನಾಥ್ ರವರ ಜನ್ಮ‌ದಿನದ ಪ್ರಯುಕ್ತ ರಾಷ್ಟ್ರೀಯ ಮಟ್ಟದ ಎಸ್.ಆರ್.ವಿ ಕಪ್-2022

ಬೆಂಗಳೂರು-ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು,
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿ.ಡಿ.ಎ)ಅಧ್ಯಕ್ಷರು ಹಾಗೂ ತಿರುಪತಿ-ತಿರುಮಲ(T.T.D) ಆಡಳಿತ ಮಂಡಳಿ ಸದಸ್ಯರಾದ ಸನ್ಮಾನ್ಯ ಶ್ರೀ ಎಸ್.ಆರ್.
ವಿಶ್ವನಾಥ್ ರವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಅದ್ಧೂರಿಯ ಎಸ್.ಆರ್.ವಿ ಕಪ್-2022 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಬಾಬು ರಾಜೇಂದ್ರ ಪ್ರಸಾದ್ ಇವರ ಸಾರಥ್ಯದಲ್ಲಿ ಯಲಹಂಕ ಉಪ‌ನಗರ  ಬಸ್ ನಿಲ್ದಾದ ಹಿಂಭಾಗದ ಹೊಯ್ಸಳ ಕ್ರೀಡಾಂಗಣದಲ್ಲಿ ಜುಲೈ ದಿನಾಂಕ 22,23 ಮತ್ತು 24 ರಂದು ಈ ಪಂದ್ಯಾವಳಿ ನಡೆಯಲಿದ್ದು ಕರ್ನಾಟಕ ಸೇರಿದಂತೆ ಮುಂಬಯಿ,
ಮಧ್ಯಪ್ರದೇಶ,ರಾಯಘಡ್,ಚೆನ್ನೈ ನ ಒಟ್ಟು 16 ತಂಡಗಳು ಭಾಗವಹಿಸಲಿದೆ.
ಪ್ರಥಮ ಬಹುಮಾನ 5 ಲಕ್ಷ ನಗದು,ದ್ವಿತೀಯ ಬಹುಮಾನ 3 ಲಕ್ಷ ನಗದು ಸಹಿತ ರಜತ ಖಚಿತ ಮಿರುಗುವ ಟ್ರೊಫಿಗಳನ್ನು ನೀಡಲಾಗುತ್ತದೆ. ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಸ್ಮಾರ್ಟ್ ಫೋನ್,ಸರಣಿ ಶ್ರೇಷ್ಠ  ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉಡುಗೊರೆ ರೂಪದಲ್ಲಿ ಪಡೆಯಲಿದ್ದಾರೆ.
ಎಸ್.ಆರ್.ಬಿ ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
Exit mobile version