SportsKannada | ಸ್ಪೋರ್ಟ್ಸ್ ಕನ್ನಡ

ಕುಂದಾಪುರ-ಗಣೇಶ್ ಬಿರುಸಿನ ಅರ್ಧಶತಕ- ಟೊರ್ಪೆಡೋಸ್ ಸೆಮಿಫೈನಲ್ ಎಂಟ್ರಿ

ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಉಡುಪಿ ಜಿಲ್ಲೆ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಕುಂದಾಪುರ ತಾಲೂಕು ಮಟ್ಟದ ಪಂದ್ಯಾಟದ ಕ್ವಾರ್ಟರ್ ಫೈನಲ್ ನಲ್ಲಿ ಟೊರ್ಪೆಡೋಸ್ ಭರ್ಜರಿ ಗೆಲುವು ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಟೊರ್ಪೆಡೋಸ್ ತಂಡ ಗಣೇಶ್ ಬಿರುಸಿನ ಅರ್ಧಶತಕ,(30 ಎಸೆತಗಳಲ್ಲಿ 7 ಬಿರುಸಿನ ಸಿಕ್ಸರ್ ಮತ್ತು 2 ಬೌಂಡರಿಗಳ ಸಹಿತ)
66 ರನ್  ನೆರವಿನಿಂದ 10 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 106 ರನ್ ದಾಖಲಿಸಿತ್ತು.ಚೇಸಿಂಗ್ ವೇಳೆ ತೀವ್ರ ಪ್ರತಿರೋಧದ ಹೋರಾಟದ ನಡುವೆ ಜಾನ್ಸನ್ ಹಂಗಳೂರು 10 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಲಷ್ಟೇ ಶಕ್ತವಾಯಿತು.
2 ನೇ ಕ್ವಾರ್ಟರ್ ಫೈನಲ್ ನಲ್ಲಿ ಮಹಾದೇವಿ ಮಲ್ಯಾಡಿ ಚಾಲೆಂಜ್ ಕುಂದಾಪುರ ತಂಡವನ್ನು,ಜೆ.ಸಿ.ಸಿ ಜಾಲಾಡಿ ಚಕ್ರವರ್ತಿ ಕುಂದಾಪುರ ತಂಡವನ್ನು,ಅಂಶು ಕೋಟೇಶ್ವರ ಮಯೂರ ಕುಂದಾಪುರ ತಂಡವನ್ನು ಸೋಲಿಸಿ ಉಪಾಂತ್ಯ ಹಂತವನ್ನು ಪ್ರವೇಶಿಸಿದರು.
ಸೆಮಿಫೈನಲ್ ನಲ್ಲಿ ಟೊರ್ಪೆಡೋಸ್ ಕುಂದಾಪುರ ಮಹಾದೇವಿ ಮಲ್ಯಾಡಿ ತಂಡವನ್ನು,ಅಂಶು ಕೋಟೇಶ್ವರ ಜೆ.ಸಿ.ಸಿ ಜಾಲಾಡಿ ತಂಡವನ್ನು ಎದುರಿಸಲಿದೆ.
ಬ್ರಹ್ಮಾವರ ತಾಲೂಕಿನ ಪಂದ್ಯಾಟದ ಫೈನಲ್ ಕಾಳಗ ಇಲೆವೆನ್ ಅಪ್ ಕೋಟ ಮತ್ತು ಪಾರಂಪಳ್ಳಿ ಕ್ರಿಕೆಟರ್ಸ್ ನಡುವೆ ನಡೆಯಲಿದೆ.ಸಮಾರೋಪ ಸಮಾರಂಭಕ್ಕೆ ಗಣ್ಯರು,ಹಿರಿಯ ಆಟಗಾರರು,ಟಿ.ಸಿ.ಎ ಪಧಾದಿಕಾರಿಗಳು ಆಗಮಿಸಲಿದ್ದಾರೆ ಎಂದು ಟಿ.ಸಿ.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ ತಿಳಿಸಿದ್ದಾರೆ.
Exit mobile version