Site icon SportsKannada ಸ್ಪೋರ್ಟ್ಸ್ ಕನ್ನಡ

ಜೈ ಕರ್ನಾಟಕ ಆಟಗಾರರು ಪವಾಡ ಸದೃಶ ಪಾರು

ಜೈ ಕರ್ನಾಟಕ ಆಟಗಾರರು ಪವಾಡ ಸದೃಶ ಪಾರು

ಮೂಲ್ಕಿಯಲ್ಲಿ ನಡೆಯುತ್ತಿರುವ ಮಿಥುನ್ ರೈ ಕಪ್-2025 ಕ್ರಿಕೆಟ್ ಪಂದ್ಯಾಟಕ್ಕೆ ಆಗಮಿಸುತ್ತಿದ್ದ ವೇಳೆ ಧರ್ಮಸ್ಥಳ ಸಮೀಪ ಜೈ ಕರ್ನಾಟಕ ಬೆಂಗಳೂರು ತಂಡದ ಆಟಗಾರರ ವಾಹನ ಕಂದಕಕ್ಕೆ ಉರುಳಿದ್ದು ತಂಡದ ನಾಲ್ವರು ಪ್ರಮುಖ ಆಟಗಾರರು ಪವಾಡ ಸದೃಶವಾಗಿ ಪಾರಾಗಿದ್ದಾರೆ.

ಅಪಘಾತವಾದ ಕಾರಿನಲ್ಲಿ ಸಚಿನ್ ಮಹಾದೇವ್,ಡೇವಿಡ್,ಉತ್ತಪ್ಪ ಮತ್ತು ಸುಬ್ಬ ಪ್ರಯಾಣ ಮಾಡುತ್ತಿದ್ದರು.ಡೇವಿಡ್ ಮತ್ತು ಉತ್ತಪ್ಪ ಅಲ್ಪಸ್ವಲ್ಪ ಗಾಯಗೊಂಡಿದ್ದು,ಸಚಿನ್ ಮಹಾದೇವ್ ಮತ್ತು ಸುಬ್ಬ ಈರ್ವರು ಅಪಾಯದಿಂದ ಪಾರಾಗಿದ್ದಾರೆ ಎಂದು ಸಚಿನ್ ಮಹಾದೇವ್ ಸ್ಪೋರ್ಟ್ಸ್ ಕನ್ನಡದೊಂದಿಗೆ ತಿಳಿಸಿದ್ದಾರೆ.

ಜೈ ಕರ್ನಾಟಕ ಪಾಲಿಗೆ ಅದೃಷ್ಟದ ಮೈದಾನವಾಗಿರುವ ಮೂಲ್ಕಿಯ ವಿಜಯಾ ಕಾಲೇಜು ಮೈದಾನದಲ್ಲಿ ಇದುವರೆಗೂ ಸತತ ಮೂರು ರಾಜ್ಯಮಟ್ಟದ ಪಂದ್ಯಾಟ ಜಯಿಸಿದ್ದು,ಇದೀಗ ನಾಲ್ಕನೇ ಟ್ರೋಫಿಯ ಕನಸು ಹೊತ್ತು ಬಂದ ತಂಡಕ್ಕೆ ಆಘಾತ ಕಾದಿತ್ತು.

ಡೇವಿಡ್ ಮತ್ತು ಉತ್ತಪ್ಪ ಅಲ್ಪಸ್ವಲ್ಪ ಗಾಯಗೊಂಡಿದ್ದು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಪೋರ್ಟ್ಸ್ ಕನ್ನಡದೊಂದಿಗೆ ಮಾತನಾಡಿದ ಸಚಿನ್ ಮಹಾದೇವ್ ಇಬ್ಬರು ಆಟಗಾರರನ್ನು ಹೊರಗಿಟ್ಟು,ನಾವು ಪಂದ್ಯಾಟವನ್ನು ಆಡಲಿದ್ದು,ಮೂಲ್ಕಿ,ಉಡುಪಿ,ಮಂಗಳೂರು ಪರಿಸರದ ಅಭಿಮಾನಿಗಳನ್ನು ನಿರಾಸೆ ಮಾಡುವುದಿಲ್ಲ ಎಂದರು.

ಜೈ ಕರ್ನಾಟಕ ಇಂದು ಸಂಜೆ ತನ್ನ ಮೊದಲ ಪಂದ್ಯವನ್ನಾಡಲಿದೆ.

Exit mobile version