SportsKannada | ಸ್ಪೋರ್ಟ್ಸ್ ಕನ್ನಡ

ಕೊಡುಗೈ ದಾನಿ ಗೋವಿಂದ ಬಾಬು ಪೂಜಾರಿ ಇವರಿಗೆ ಭಾರತ ಗೌರವ ಪ್ರಶಸ್ತಿ

ಬೆಂಗಳೂರು : ಇಲ್ಲಿನ ಜನ್ಮಭೂಮಿ ಫೌಂಡೇಶನ್ ರಿ ಇವರ ವತಿಯಿಂದ ಕೊರೋನಾ ವಾರಿಯರ್ಸ್ ಹಾಗೂ ನಾಡಿನ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಚೆಫ್ ಟಾಕ್  ಫುಡ್ ಅಂಡ್ ಹಾಸ್ಪಿಟಾಲಿಟಿ ಪ್ರೈ ಲಿ ಇದರ ವ್ಯವಸ್ಥಾಪಕ ನಿರ್ದೇಶಕರಾದ ಹಾಗೂ ನಮ್ಮ ಕೊಡುಗೈ ದಾನಿ ಗೋವಿಂದ ಬಾಬು ಪೂಜಾರಿ ಅವರಿಗೆ ಭಾರತ ಗೌರವ ಪ್ರಶಸ್ತಿ ನೀಡಲಾಯಿತು.
ಪ್ರಶಸ್ತಿ ಸಮಾರಂಭದಲ್ಲಿ ನಾಡಿನ ಖ್ಯಾತ  ಸಾಹಿತಿ ಡಾ. ಕುಂ  ವೀರಭದ್ರಪ್ಪ , ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್, ಎಸ್ ಹೊಸಮನಿ, ಬೆಂಗಳೂರು ಎಸಿಪಿ,ಸಿಸಿಬಿ ಹೆಚ್ ಎಸ್ ಪರಮೇಶ್ವರ್, ಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡ ಚಲನಚಿತ್ರದ  ಯುವ ನಟ  ಭುವನ್ ಪೊನ್ನಪ್ಪ,  ಚಿತ್ರನಟಿ ಹಾಗೂ ರೂಪದರ್ಶಿ ಪೂಜಾ ರಮೇಶ್, ಬೆಂಗಳೂರು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಇದರ ರಾಜ್ಯಾಧ್ಯಕ್ಷ  ಡಾ ಶಿವಕುಮಾರ ನಾಗರ ನವಿಲೆ, ವಕೀಲರು ಹಾಗೂ  ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮ ರಾಜ್ಯಾಧ್ಯಕ್ಷರು ಬಾಬು ಪತ್ತಾರ್,  ಜನ್ಮಭೂಮಿ ಫೌಂಡೇಶನ್ ರಿ ಬೆಂಗಳೂರು ಇದರ ಅಧ್ಯಕ್ಷ ರಘು ಗಂಗೂರು, ಜನ್ಮಭೂಮಿ ಫೌಂಡೇಶನ್ ರಿ ಬೆಂಗಳೂರು ಸಂಘಟಕ ಮಾರುತಿ ಬಡಿಗೇರ ಸಮಾರಂಭದಲ್ಲಿ ಭಾಗವಹಿಸಿದ್ದರು.
Exit mobile version