SportsKannada | ಸ್ಪೋರ್ಟ್ಸ್ ಕನ್ನಡ

ಫ್ರೆಂಡ್ಸ್ ಬೆಂಗಳೂರು ತಂಡದ ಆಶ್ರಯದಲ್ಲಿ ಶ್ರೇಷ್ಠ ಮಟ್ಟದ ಅಂತರರಾಷ್ಟ್ರೀಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಸಂಘಟಿಸಿದ ರೇಣುಗೌಡರು & ಟೀಮ್..

ಫ್ರೆಂಡ್ಸ್ ಬೆಂಗಳೂರು ತಂಡದ ಆಶ್ರಯದಲ್ಲಿ ರೇಣುಗೌಡರ ಸಾರಥ್ಯದಲ್ಲಿ ಬೆಂಗಳೂರಿನ ಪಿಣ್ಯಾದ ಎರಡನೇ ಹಂತದಲ್ಲಿ ಕೇಲವೆ ದಿನಗಳಲ್ಲಿ ನಿರ್ಮಿಸಿದ ಸುಂದರ ಕ್ರೀಡಾಂಗಣದಲ್ಲಿ ನಡೆದಂತಹ  *”ಫ್ರೆಂಡ್ಸ್ ಟ್ರೋಫಿ 2023″*
ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಕ್ರಿಕೆಟ್ ಕಲರವ ಮುಗಿಲು ಮುಟ್ಟಿದೆ ಇತ್ತೀಚೆಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗಳಲ್ಲಿ ಹೆಚ್ಚು ತಂಡಗಳು ಭಾಗವಹಿಸುವುದೆ ವಿರಳ ಇಂತಹ ಸ್ಥಿತಿಯಲ್ಲಿ *”ರೇಣುಗೌಡರ ಸಾರಥ್ಯದ”* ಫ್ರೆಂಡ್ಸ್ ಟ್ರೋಫಿಯ ಪಂದ್ಯಾವಳಿಗೆ  49 ತಂಡಗಳು ಭಾಗವಹಿಸಿದ್ದು ಹೆಮ್ಮೆಯ ವಿಷಯ ಪ್ರಮುಖವಾಗಿ ಅಂತರರಾಷ್ಟ್ರೀಯ ತಂಡಗಳಲ್ಲಿ ಒಂದಾದ ದೂರದ ಶ್ರೀಲಂಕಾ ಮತ್ತು ಹೊರ ರಾಜ್ಯದ ಎಂಟು ತಂಡಗಳು ಭಾಗವಹಿಸಿ ಕರುನಾಡಿನ ಮಣ್ಣಿನಲ್ಲಿ ರೇಣುಗೌಡರ ಕನಸಿನ ಕ್ರಿಕೆಟ್ ಪಂದ್ಯಾವಳಿಗೆ ಇನ್ನಷ್ಟು ಮೆರಗು ನೀಡುವುದರ ಜೋತೆಗೆ ಕರ್ನಾಟಕದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಶ್ರೇಷ್ಠ ಮಟ್ಟದ  ಕ್ರಿಕೆಟ್ ಪಂದ್ಯಾವಳಿನೆಡೆದು ಇತಿಹಾಸವನ್ನೇ ದಾಖಲಿಸಿದೆ.
      ಇಲ್ಲಿ ಪ್ರಮುಖ ವಾಗಿ ಗಮನಿಸಬೇಕಾಗಿರುವುದು ಪಂದ್ಯಾವಳಿಯಲ್ಲಿ ಭಾಗವಹಿಸಿದ ಯಾವುದೇ ತಂಡಕ್ಕೆ ಪ್ರವೇಶ ಶುಲ್ಕವಿಲ್ಲ ಬೆಂಗಳೂರು ನಗರ ಹೊರತು ಪಡಿಸಿ ಪ್ರತಿ ತಂಡಕ್ಕೂ ಉತ್ತಮವಾದ ಊಟ ವಸತಿಯ ವ್ಯವಸ್ಥೆಯ ಜೋತೆಗೆ ಪ್ರತಿ ತಂಡವನ್ನು ವಿಷೇಶವಾಗಿ ಉಪಚರಿಸಿ ಆದರಿಸಿದ ಗೌರವ ರೇಣುಗೌಡ ಮತ್ತು ಇವರ ತಂಡದ ಪ್ರತಿಯೊಬ್ಬ ಸದಸ್ಯರಿಗೆ ಸಲ್ಲುತ್ತದೆ.
     ಈ ಪಂದ್ಯಾವಳಿಯ ಕೊನೆಯ ಕ್ಷಣದ ವರೆಗೂ  ಪ್ರತಿ ಪಂದ್ಯಾವಳಿಗಳ ವೀಕ್ಷಕ ವಿವರಣೆ ಹಾಗೂ ತೀರ್ಪುಗಾರಿಕೆ ಶ್ರೇಷ್ಠ ಮಟ್ಟದಾಗಿತ್ತು ಯಾವುದೇ ಹಂತದಲ್ಲೂ  ಪಂದ್ಯಾವಳಿಯಲ್ಲಿ ಗೊಂದಲ ಉಂಟಾಗಲಿಲ್ಲ. ಅದರಲ್ಲೂ ಪ್ರತಿಪಂದ್ಯವನ್ನು ನೇರ ಪ್ರಸಾರದೊಂದಿಗೆ ವಿಶ್ವವ್ಯಾಪ್ತಿ ಕ್ರಿಕೆಟ್ ಪ್ರೇಮಿಗಳಿಗೆ ಕುಳಿತಲ್ಲೆ ವಿಕ್ಷಿಸುವಂತೆ ಮಾಡಿದ ಎಸ್ ಆರ್ ಬಿ ಗ್ರೂಪ್‌ ನ ಛಾಯಗ್ರಾಹಕು ಮತ್ತು ವ್ಯವಸ್ಥಾಪಕರ ಕಾರ್ಯವೈಖರಿಯು ಈ ಟೂರ್ನಿಯ ಯಶಸ್ಸಿನ ಒಂದು ಭಾಗವಾಗಿದೆ.
    ಸಾಕಷ್ಟು ರಾಜ್ಯಮಟ್ಟದ ಟೂರ್ನಿಗಳಲ್ಲಿ ಎಂಟು ಓವರ್ ಗೆ ಸೀಮಿತವಾದ ಪಂದ್ಯಾವಳಿಗಳು ಆರಂಭದಲ್ಲಿ ಪಂದ್ಯಗಳು ಎಂಟು ಓವರ್ ಕಂಡರು ಪ್ರಮುಖವಾದ ಅಂತಿಮ ಹಂತದ ಪಂದ್ಯಗಳು ಎರಡು ಮೂರು ಓವರ್ ಪಂದ್ಯಗಳು ನೆಡೆದು ಕ್ರಿಕೆಟ್ ಆಟದ ಘನತೆಗೆ ಚ್ಯುತಿತರತ್ತದೆ. ಒಂದೇರಡು ಓವರ್ ಪಂದ್ಯದಲ್ಲಿ  ಗೆಲ್ಲುವಂತಹ ತಂಡಗಳು ಸೋಲಿಗೆ ಶರಣಾದರೆ ಸೋಲುವಂತಹ ತಂಡಗಳು ಗೆದ್ದು ಬಿಗುವುದು ಸಹಜ.
   *”ರೇಣುಗೌಡರ ಸಾರಥ್ಯದಲ್ಲಿ”* ನಡೆದ *”ಫ್ರೆಂಡ್ಸ್ ಬೆಂಗಳೂರು ಕಪ್”* ನ ಪ್ರತಿ ಪಂದ್ಯಗಳು ಎಂಟು ಓವರ್ ಎಸತಗಾರಿಕೆ ಕಂಡಿದೆ. ಎಲ್ಲಾ ಪಂದ್ಯಗಳು ಶ್ರೇಷ್ಠ ಮಟ್ಟದಾಗಿದ್ದು ಕ್ರೀಡಾಂಗಣದ ಸುತ್ತ ಬೆಳಿಗಿನಿಂದ ತಡರಾತ್ರಿವರೆಗೂ ಸಾವಿರಾರು ಮಂದಿ ಪ್ರೇಕ್ಷರ ಕರತಾಡನ ಮುಗಿಲು ಮುಟ್ಟಿತ್ತು. ಈ ಟೂರ್ನಿಯ ಅಂತಿಮ ಘಟ್ಟಕ್ಕೆ ತಲುಪಿದ ಬೆಂಗಳೂರಿನ *”ಮೈಟಿ ಬೆಂಗಳೂರು”* ತಂಡ ಮತ್ತು ದೂರದ ಲಕ್ನೋದ *”ಕಾಮಾಕ್ಷಿ ರಾಹುಲ್ ಇಲವೇನ್”* ತಂಡಗಳ ನಡುವಿನ ಪಂದ್ಯದಲ್ಲಿ ಲಕ್ನೋ ತಂಡ ನಿರಾಯಾಸವಾಗಿ ಮೈಟಿ ಬೆಂಗಳೂರು ತಂಡವನ್ನು ಮಣಿಸಿ ಫ್ರೆಂಡ್ಸ್ ಬೆಂಗಳೂರು ಕಪ್ ಮತ್ತು ನಗದು ಬಹುಮಾನವಾದ *ಐದುಲಕ್ಷದ ಐದುಸಾವಿರ* ರೂಪಾಯಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು ತಾನು ಆಡಿದ ಎಲ್ಲಾ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಮೈಟಿ ಬೆಂಗಳೂರು ತಂಡ ಫೈನಲ್‌ ಪಂದ್ಯದಲ್ಲಿ ಎಡವಿ *ಎರಡುವರೆ ಲಕ್ಷ* ರೂಪಾಯಿಯೊಂದಿಗೆ ದ್ವೀತಿಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಬೆಂಗಳೂರಿನ ಪಿಣ್ಯಾ ಎರಡನೇ ಹಂತದಲ್ಲಿ ರೇಣುಗೌಡರ ಸಾರಥ್ಯದಲ್ಲಿ  ಐದು ದಿನಗಳ ಕಾಲ ನೆಡೆದಂತಹ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಆರಂಭದಿಂದ ಅಂತಿಮ ಹಂತದವರೆಗೂ ಯಶಸ್ವಿಯಾಗಿ ನೆಡೆದು ಕರ್ನಾಟಕದಲ್ಲಿ ಇದು ವರೆಗೂ ನೆಡೆದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಇದು ಅಂತ್ಯಂತ ಯಶಸ್ವಿ ಪಂದ್ಯಾವಳಿಯಾಗಿ ಇತಿಹಾಸದ ಪುಟ ಸೇರಿದೆ ಅದರಲ್ಲೂ ಪ್ರವೇಶ ಶುಲ್ಕವಿಲ್ಲದ ಪಂದ್ಯಾವಳಿ ಎನ್ನುವ ಹಿರಿಮೆಯ ಜೋತೆಗೆ ಅಂತರರಾಷ್ಟ್ರೀಯ ತಂಡವಾದ ಶ್ರೀಲಂಕಾ ಮತ್ತು ಹೊರ ರಾಜ್ಯದ ಎಂಟು ಶ್ರೇಷ್ಠ ತಂಡಗಳು ಭಾಗವಹಿಸಿದ ಹಿರಿಮೆ ಈ ಟೂರ್ನಿಗಿದೆ…
  ಕನ್ನಡದ ಮಣ್ಣಿನಲ್ಲಿ ಶ್ರೇಷ್ಠ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಸಂಘಟಿಸಿದ ಗೌರವ ಫ್ರೆಂಡ್ಸ್ ಬೆಂಗಳೂರು ತಂಡದ ರೇಣುಗೌಡರು ಮತ್ತು ಇವರ ತಂಡಕ್ಕೆ ಸಲ್ಲುತ್ತದೆ..ಶ್ರೇಷ್ಠ ಮಟ್ಟದ ಅಂತರರಾಷ್ಟ್ರೀಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಸಂಘಟಿಸಿದ ಸಹೋದರ ಮಿತ್ರರಾದ ರೇಣುಗೌಡರು ಮತ್ತು ತಂಡಕ್ಕೆ ಹೃದಯ ಪೂರ್ವಕ ವಂದನೆಗಳು
Exit mobile version