SportsKannada | ಸ್ಪೋರ್ಟ್ಸ್ ಕನ್ನಡ

ಬೈಂದೂರು-ಸೇನೇಶ್ವರ ಟ್ರೋಫಿ:2022-ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಆಟಗಾರರಿಗಾಗಿ

ಶ್ರೀ ಸೇನೇಶ್ವರ ಕಲಾ ಮತ್ತು ಕ್ರೀಡಾ ಸಂಘ(ರಿ)ಬೈಂದೂರು ಇವರ ಆಶ್ರಯದಲ್ಲಿ,ಫೆಬ್ರವರಿ 12 ಮತ್ತು 13 ರಂದು ಬೈಂದೂರಿನ ಗಾಂಧಿ ಮೈದಾನದಲ್ಲಿ ಸೇನೇಶ್ವರ ಟ್ರೋಫಿ-2022 ಪಂದ್ಯಾವಳಿ ಆಯೋಜಿಸಲಾಗಿದೆ.
60 ಗಜಗಳ ಮಾದರಿಯಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಟಗಾರರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
12 ಶನಿವಾರ ಬೆಳಿಗ್ಗೆ 8.30 ಗೆ ಸರಿಯಾಗಿ ಶೆಫ್ ಟಾಕ್ ಫುಡ್& ಹಾಸ್ಪಿಟಾಲಿಟಿ ಸರ್ವಿಸ್ ಪ್ರೈಲಿ ಇದರ ಆಡಳಿತ ನಿರ್ದೇಶಕರು,ಸಮಾಜರತ್ನ ಡಾ.ಶ್ರೀ.ಗೋವಿಂದ ಬಾಬು ಪೂಜಾರಿಯವರು ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.ಸಭಾಧ್ಯಕ್ಷರಾಗಿ ಬೈಂದೂರಿನ ಮಾಜಿ ಶಾಸಕರು ಶ್ರೀ.ಕೆ‌.ಗೋಪಾಲ ಪೂಜಾರಿ ಮತ್ತು ಇನ್ನಿತರ ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
13 ರವಿವಾರ ಸಂಜೆ 8 ಗಂಟೆಗೆ ಸರಿಯಾಗಿ ಸಮಾರೋಪ ಸಮಾರಂಭ ನಡೆಯಲಿದ್ದು ಸಭಾಧ್ಯಕ್ಷರಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ.ಬಿ.ಎಮ್.
ಸುಕುಮಾರ್ ಶೆಟ್ಟಿ,ಮುಖ್ಯ ಅತಿಥಿಗಳಾಗಿ ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ  ಶ್ರೀ.ಸುನಿಲ್ ನಾಯ್ಕ್ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
Exit mobile version