SportsKannada | ಸ್ಪೋರ್ಟ್ಸ್ ಕನ್ನಡ

ಕುಂದಾಪುರ-ಬೀಜಾಡಿಯಲ್ಲಿ ನಡೆಯಲಿರುವ ಅವಿಘ್ನ ಸೃಷ್ಟಿ ಟ್ರೋಫಿಯಲ್ಲಿ ನೊಂದ ಕುಟುಂಬಗಳಿಗೆ ನೆರವಿನ ಹಸ್ತ

ಗೆಳೆಯರ ಬಳಗ ಬೀಜಾಡಿ ಇವರ ಅಶ್ರಯದಲ್ಲಿ ಯಶಸ್ವಿ ತೃತೀಯ ಬಾರಿಗೆ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ “ಅವಿಘ್ನ ಸೃಷ್ಟಿ ಟ್ರೋಫಿ-2021” ಆಯೋಜಿಸಲಾಗಿದೆ.
ಡಿಸೆಂಬರ್ 11 ಮತ್ತು 12 ರಂದು ಬೀಜಾಡಿ ಪಡುಶಾಲೆಯ ಹತ್ತಿರ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ತಂಡಗಳನ್ನು 2 ವಿಭಾಗಗಳಾಗಿ ವಿಂಗಡಿಸಲಾಗಿದ್ದು,ಆಯ್ದ ಸ್ಥಳೀಯ 12 ತಂಡಗಳು ಮತ್ತು ಹರಾಜು ಪ್ರಕ್ರಿಯೆಗೆ ಒಳಪಟ್ಟ ಆಟಗಾರರ 15 ಫ್ರಾಂಚೈಸಿ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ.
ಪ್ರಥಮ ಪ್ರಶಸ್ತಿ 30,003 ರೂ ನಗದು,ದ್ವಿತೀಯ ಪ್ರಶಸ್ತಿ 20,002 ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ ಹಾಗೂ ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ಆಕರ್ಷಕ ಉಡುಗೊರೆಗಳನ್ನು ನೀಡಲಾಗುತ್ತಿದೆ.
ಪಂದ್ಯಾವಳಿಯ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಗಳಿಗೆ ಗಣ್ಯ ಅತಿಥಿಗಳು ಆಗಮಿಸಲಿದ್ದಾರೆ.
ಪ್ರತಿ ವರ್ಷದಂತೆಯೂ,ಈ ಬಾರಿಯೂ ಕೂಡ ನೊಂದ ಕುಟುಂಬಗಳಿಗೆ ನೆರವಿನ ಹಸ್ತ ನೀಡಲಿದ್ದಾರೆ.M ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ  ಪಂದ್ಯಾಕೂಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
Exit mobile version