SportsKannada | ಸ್ಪೋರ್ಟ್ಸ್ ಕನ್ನಡ

ಬೆಂಗಳೂರು-ಜೈ ಭುವನೇಶ್ವರಿ ಕ್ರಿಕೆಟ್ ಕ್ಲಬ್(J.B.C.C)4 ನೇ ಪೀಳಿಗೆಗೆ ಪಾದಾರ್ಪಣೆ

ಮಾದವಾರ ಕ್ರಿಕೆಟ್ ತಂಡ ಇಂದು ಮಾದವಾರದ ಅಂಗಣದಲ್ಲಿ ಆಯೋಜಿಸಿದ್ದ ಅಂಡರ್-16 ಕ್ರಿಕೆಟ್ ಪಂದ್ಯಾವಳಿಯಲ್ಲಿ J.B.C.C ಅಂಡರ್-16 ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.
ವಿಜಯೀ ತಂಡಕ್ಕೆ ಶುಭಾಶಯ ತಿಳಿಸಿದ ಟಿ.ಶ್ರೀನಿವಾಸ್,ಚಿಕ್ಕಣ್ಣ,ನಾರಾಯಣಪ್ಪ ಬಾಬು,
ಆಕಾಶ್ ಗೌಡ,ವೆಂಕಟೇಶ್ ಇವರು “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಜೈ ಭುವನೇಶ್ವರಿ ಕ್ರಿಕೆಟ್ ಕ್ಲಬ್(J.B.C.C)4 ನೇ ಪೀಳಿಗೆಯ ಅಂಡರ್ 16 ತಂಡದ ಇಂದಿನ ಗೆಲುವು ಗತ ವೈಭವವನ್ನು ಮತ್ತೆ ಸಾರಿದೆ.ಮುಂದಿನ ದಿನಗಳಲ್ಲೂ ರಾಜ್ಯ ರಾಷ್ಟ್ರಮಟ್ಟದಲ್ಲೂ ನಿಮ್ಮೆಲ್ಲರ ಪ್ರತಿಭೆ ಬೆಳಗಲಿ,ನಿಮ್ಮ‌ ಉಜ್ವಲ ಭವಿಷ್ಯದ ಹಿಂದೆ ನಾವು ನೆರಳಾಗಿ ನಿಲ್ಲುವೆವು ಎಂದರು…
Exit mobile version