SportsKannada | ಸ್ಪೋರ್ಟ್ಸ್ ಕನ್ನಡ

ಬೆಂಗಳೂರು-ಅಗಲಿದ ಹಿರಿಯ ಆಟಗಾರರು ದಿ.ಕೆ.ಸಿ.ಉಮೇಶ್ ಸ್ಮರಣಾರ್ಥ ಕೆ‌.ಸಿ.ಟ್ರೋಫಿ-2021

ಕೆ‌.ಆರ್.ಪುರಂ ನ ಹಿರಿಯ ಸಂಸ್ಥೆ ಕಾಕ್ಟೇಲ್ ಹಾಗೂ ಅಶ್ವಿನಿ ಕ್ರಿಕೆಟರ್ಸ್ ನ ನ ಪರವಾಗಿ ಬಹಳಷ್ಟು ವರ್ಷಗಳ ಸೇವೆ ಸಲ್ಲಿಸಿದ್ದ ಮಾಜಿ ಆಟಗಾರರು, ದಿ‌.ಕೆ.ಸಿ‌.ಉಮೇಶ್ ಇವರ ಸ್ಮರಣಾರ್ಥವಾಗಿ ರಾಜ್ಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಕೆ‌.ಸಿ‌.ಟ್ರೋಫಿ-2021 ಆಯೋಜಿಸಲಾಗಿದೆ.
ಡಿಸೆಂಬರ್ 4 ಮತ್ತು 5 ರಂದು ಕೆ‌.ಆರ್.ಪುರಂ ನ ಐ.ಟಿ.ಐ ಪೆವಿಲಿಯನ್ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ರಾಜ್ಯದ ಪ್ರತಿಷ್ಠಿತ 16 ತಂಡಗಳು ಭಾಗವಹಿಸಲಿದೆ.
ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಾರ್ತಿಕ್ ಪಾಪು-9738526555,ಭರತ್-9880688319,ಮಂಜು-9620878450,
ಗಿರಿಧರ್-9900136136 ಇವರ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.
M.Sports ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಲಿದೆ.
Exit mobile version