
ಇಹಲೋಕ ತ್ಯಜಿಸಿದ ರಾಜ್ಯ ಕಂಡ ಶ್ರೇಷ್ಠ ಆಲ್ರೌಂಡರ್ ವಿನ್ಸೆಂಟ್ ಫೆರ್ನಾಂಡಿಸ್
ರಾಜ್ಯಮಟ್ಟದ ಪ್ರತಿಷ್ಠಿತ ತಂಡ ಶರತ್ ಶೆಟ್ಟಿಯವರ ನೇತೃತ್ವದ “ಪಡುಬಿದ್ರಿ ಫ್ರೆಂಡ್ಸ್” ತಂಡದ ನಂಬಿಗಸ್ತ ಸವ್ಯಸಾಚಿ, ತಂಡದ ಜಯಗಳಲ್ಲಿ ಪ್ರಮುಖ ಪಾತ್ರವಹಿಸಿದ ವಿನ್ಸೆಂಟ್ ಫೆರ್ನಾಂಡಿಸ್ (ವಿನ್ಸಿ) (48) ಅವರು ಕಿಡ್ನಿ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
ಆರಂಭಿಕ ಆಟಗಾರರಾಗಿ ಅನೇಕ ಗೆಲುವಿನ ಇನ್ನಿಂಗ್ಸ್ ಕಟ್ಟಿದ ಅವರು, ಎದುರಾಳಿಗಳ ಪ್ರಮುಖ ಹುದ್ದರಿಗಳನ್ನು ಎಗರಿಸುವ ನಿಸ್ಸೀಮ ಎಸೆತಗಾರರಾಗಿ ಪಡುಬಿದ್ರಿ ತಂಡದ ಬಹುತೇಕ ಜಯಗಳಲ್ಲಿ ಸಿಂಹಪಾಲು ಪಾತ್ರವಹಿಸಿದ್ದರು. ಸರಣಿಶ್ರೇಷ್ಟ ಪ್ರಶಸ್ತಿ ಹಾಗೂ ವೈಯಕ್ತಿಕ ಪ್ರಶಸ್ತಿಗಳ ಸರಮಾಲೆಯೊಂದಿಗೆ ಅಭಿಮಾನಿ ಬಳಗವನ್ನೂ ಸಂಪಾದಿಸಿದ್ದರು.
ಪಡುಬಿದ್ರಿ ಸ್ಪೋರ್ಟ್ಸ್ ಹೌಸ್” ಸಂಸ್ಥೆಯ ಮಾಲೀಕರಾಗಿದ್ದ ವಿನ್ಸಿ ಅವರ ನಿಧನವು ಪಡುಬಿದ್ರಿ ಹಾಗೂ ರಾಜ್ಯದ ಕ್ರೀಡಾ ಕ್ಷೇತ್ರಕ್ಕೆ ಭಾರೀ ನಷ್ಟವಾಗಿದೆ. ಅವರ ಕ್ರೀಡಾ ಸಾಧನೆಗಳು ಹಾಗೂ ಕೊಡುಗೆಗಳು ಸದಾ ಕ್ರೀಡಾಭಿಮಾನಿಗಳ ನೆನಪಿನಲ್ಲಿ ಉಳಿಯಲಿವೆ.
ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಆಳವಾದ ಸಂತಾಪ. ಅಗಲಿದ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ,ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸ್ಪೋರ್ಟ್ಸ್ ಕನ್ನಡ ರಾಜ್ಯ ಟೆನಿಸ್ ಕ್ರಿಕೆಟ್ ನ ಪರವಾಗಿ ಪ್ರಾರ್ಥಿಸುತ್ತೇವೆ.
