SportsKannada | ಸ್ಪೋರ್ಟ್ಸ್ ಕನ್ನಡ

ವೆಂಕಟರಮಣ ಟ್ರೋಫಿ-2024

ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟದ ವೇಳಾಪಟ್ಟಿ ಹಾಗೂ ನಿಯಮಗಳು ಹೀಗಿವೆ…..!!!!!!
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಫೋರ್ಟ್ಸ್& ಕಲ್ಚರಲ್ಸ್ ( ರಿ) ಪಿತ್ರೋಡಿ ತನ್ನ 36ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು ಈ ಪ್ರಯುಕ್ತ ಮೂರು ದಿನಗಳ ರಾಷ್ಟ್ರ ಮಟ್ಟದ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಯನ್ನು ಉಡುಪಿ ಜಿಲ್ಲೆಯ  ಕಟಪಾಡಿಯ  ಎಸ್ ವಿ ಎಸ್ ಪಳ್ಳಿಗುಡ್ಡೆ ಮೈದಾನದಲ್ಲಿ ಆಯೋಜಿಸಿದೆ.
ಫೆಬ್ರವರಿ 9 ರಿಂದ 11ರ ವರೆಗೆ ಈ  “ವೆಂಕಟರಮಣ ಟ್ರೋಫಿ 2024′” ಕ್ರಿಕೆಟ್‌ ಟೂರ್ನಿಯು  ನಡೆಯಲಿದ್ದು, ಪಂದ್ಯಗಳು ಹಗಲಿನಲ್ಲಿ  ನಡೆಯಲಿವೆ.
ರಾಷ್ಟ್ರೀಯ ಮಟ್ಟದ 15 ಪ್ರಸಿದ್ಧ ತಂಡಗಳು ಭಾಗವಹಿಸಲಿದ್ದು, ತಂಡಗಳನ್ನು 4 ಪೂಲ್ ಗಳನ್ನಾಗಿ ವಿಭಾಗಿಸಲಾಗಿದೆ.
A)ಪೂಲ್ ನಲ್ಲಿ ಮಾರುತಿ ಮಟ್ಟು,ಹಿರೇ ಬೆಟ್ಟು ಫ್ರೆಂಡ್ಸ್,ಗುರುಗಣೇಶ್ ನೇಜಾರ್, ಕರಾವಳಿ ರಿಯಲ್ ಫೈಟರ್ಸ್
B) ಪೂಲ್ ನಲ್ಲಿ ಇಜಾನ್ ಸ್ಪೋರ್ಟ್ಸ್,ಸ್ಮ್ಯಾಶರ್ಸ್ ಶ್ರೀರಂಗಪಟ್ಟಣ ,ಮಹಾಲಿಂಗೇಶ್ವರ ಪಡುಬೆಳ್ಳೆ,ಜಾನ್ಸನ್ ಕುಂದಾಪುರ
C) ಪೂಲ್ ನಲ್ಲಿ ಹಿಂದುಸ್ತಾನ್ ಬೆಂಗಳೂರು, ಜನಪ್ರಿಯ ದಾವಣಗೆರೆ,ಯುನೈಟೆಡ್ ಜಾಗ್ವರ್,ಫ್ರೆಂಡ್ಸ್ ಬೆಂಗಳೂರು
D) ಪೂಲ್ ನಲ್ಲಿ ಚಾಲೆಂಜ್ ಕುಂದಾಪುರ, ಅಯೋಧ್ಯ ಮೈಟಿ ಮಲ್ಪೆ,ಪ್ರಕೃತಿ ನ್ಯಾಶ್
   “ವೆಂಕಟರಮಣ ಟ್ರೋಫಿ-2024” ಪ್ರಶಸ್ತಿಗಾಗಿ ಸೆಣಸಾಡಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರವೀಣ್ ಪಿತ್ರೋಡಿ www.sportkannada.com ಗೆ ತಿಳಿಸಿದ್ದಾರೆ.
ಚಾಂಪಿಯನ್‌ ತಂಡವು 3 ಲಕ್ಷ ರೂ ನಗದು,ರನ್ನರ್‌ಅಪ್‌ ತಂಡಕ್ಕೆ 1.5 ಲಕ್ಷ ರೂ ನಗದು ಸಹಿತ ಮಿನುಗುವ ವೆಂಕಟರಮಣ ಟ್ರೋಫಿ ಪಡೆಯಲಿದ್ದು,ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗುವ ಆಟಗಾರ ಚಿನ್ನದ ನಾಣ್ಯ ತಮ್ಮದಾಗಿಸಿಕೊಳ್ಳಲಿದ್ದಾರೆ. ಅಲ್ಲದೆ ಉತ್ತಮ ಬ್ಯಾಟ್ಸ್‌ಮನ್‌ ಮತ್ತು ಉತ್ತಮ ಬೌಲರ್‌ ಹಾಗೂ ಉತ್ತಮ ಫೀಲ್ಡರ್‌ ಪ್ರಶಸ್ತಿಗಳಿಗೆ ಆಕರ್ಷಕ ಬಹುಮಾನವಿರುತ್ತದೆ. ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರು ವಿಶೇಷ ಬಹುಮಾನಗಳನ್ನು ಪಡೆಯಲಿದ್ದಾರೆ.
ವಿಶೇಷ ಎಂಬಂತೆ ಇಲ್ಲಿ ಯಾವುದೇ ಆಟಗಾರರು ಮದ್ಯಪಾನ ಹಾಗೂ ತಂಬಾಕು ಸೇವಿಸಿ  ಆಡುವ ಆಗಿಲ್ಲ. ಇದಕ್ಕಾಗಿ ಮದ್ಯಪಾನ ಟೆಸ್ಟಿಂಗ್ ಯಂತ್ರವನ್ನು ಇಲ್ಲಿ ಆಯೋಜಕರು ಅಳವಡಿಸಲಿದ್ದಾರೆ. ‘ಶಿಸ್ತಿಗಾಗಿ ಕ್ರಿಕೆಟ್’  ಎನ್ನುವ ಅಡಿಬರಹವನ್ನು ಇಟ್ಟುಕೊಂಡು ನಡೆಯುವ  ಈ ಪಂದ್ಯಾವಳಿಯಲ್ಲಿ ಅತ್ಯಂತ ಶಿಸ್ತುಬದ್ಧ ತಂಡಕ್ಕೆ ‘ಶಿಸ್ತಿನ ತಂಡ’  ಎಂಬ ವಿಶೇಷ ಪ್ರಶಸ್ತಿ ನೀಡಿ ಗೌರವಪೂರ್ಣವಾಗಿ ಸನ್ಮಾನಿಸಲಾಗುವುದು.
 ವೆಂಕಟರಮಣ ಸ್ಫೋರ್ಟ್ಸ್& ಕಲ್ಚರಲ್ಸ್(ರಿ) ಪಿತ್ರೋಡಿಯ  ಮಾನವೀಯ ಹೆಜ್ಜೆಗಳು:
ಉಡುಪಿಯ ವೆಂಕಟರಮಣ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ( ರಿ) ಪಿತ್ರೋಡಿ ಸಂಸ್ಥೆಯು ಕಳೆದ 36 ವರ್ಷಗಳಿಂದ ಕ್ರಿಕೆಟ್‌ ಮಾತ್ರವಲ್ಲದೆ ಸಮಾಜದ ಒಳಿತಿಗಾಗಿ ವಿವಿಧ ರೀತಿಯ ಸೇವೆಯನ್ನು ಮಾಡುತ್ತ ಬಂದಿದೆ.  ಈ ಸಂಸ್ಥೆ ಕೇವಲ ಕ್ರೀಡಾ ಚಟುವಟಿಕೆಗಳಲ್ಲಿ ಮಾತ್ರವಲ್ಲ, ಸಾಮಾಜಿಕ ಕಾಳಜಿಯಲ್ಲಿಯೂ ತನ್ನನ್ನು ಹೆಚ್ಚಾಗಿ ತೊಡಗಿಸಿಕೊಂಡಿದೆ. ಆಟದ ಜೊತೆಯಲ್ಲಿ ಸಮಾಜದಲ್ಲಿರುವ ಅಶಕ್ತರಿಗೆ ನೆರವಿನ ಹಸ್ತವನ್ನು ಸದಾ ಚಾಚುತ್ತ ಬಂದಿದೆ. ದೈಹಿಕವಾಗಿ ಆಶಕ್ತರಾದವರಿಗೆ, ಮಾರಕ ರೋಗಗಳಿಂದ ಬಳಲುತ್ತಿರುವವರಿಗೆ, ಬಡವರಿಗೆ ಈ ಸಂಸ್ಥೆ ಜಾತಿ ಮತ ಭೇದವಿಲ್ಲದೆ ಆರ್ಥಿಕ ನೆರವನ್ನು ನೀಡಿರುವುದು ಗಮನಾರ್ಹ. ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಪ್ರೋತ್ಸಾಹ, ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಂಸ್ಥೆ ನೀಡುತ್ತಾ ಬಂದಿದೆ. ಅಲ್ಲದೆ ಪ್ರತಿವರ್ಷ ಜಿಲ್ಲಾ ಮಟ್ಟದ ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸುತ್ತಿದೆ. ಇದರ ಜೊತೆಯಲ್ಲಿ ಸಾಮಾಜಿಕ ಸೇವಾ ಕಾರ್ಯಗಳನ್ನು ಸಂಸ್ಥೆಯು ಲಕ್ಷಾಂತರ ರೂ. ವ್ಯಯ ಮಾಡುತ್ತ ಮುಂದುವರೆಸಿಕೊಂಡು ಬಂದಿದೆ. ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ,  ಪ್ರಶಸ್ತಿಯನ್ನು ನೀಡಿ ಗೌರವಿಸುತ್ತ ಬಂದಿದೆ.
ಕ್ರೀಡೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಈ ಸಂಸ್ಥೆಯ ಸಾಧನೆಯನ್ನು ಮೆಚ್ಚಿ ಉಡುಪಿ ಜಿಲ್ಲಾಡಳಿತ 2020ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಬಾರಿಯೂ ಕೂಡ ಪಂದ್ಯಾಟದಲ್ಲಿ ಸಂಗ್ರಹಿತವಾಗಿ ಉಳಿದ ಹಣವನ್ನು ಪಿತ್ರೋಡಿ ಗ್ರಾಮದ ಅಭಿವೃದ್ಧಿಗಾಗಿ ಹಾಗೂ ಬಡ ಕುಟುಂಬಗಳ ಸಹಾಯಕ್ಕಾಗಿ ಬಳಕೆ ಮಾಡಲಾಗುವುದು ಮತ್ತು ಈ ರೀತಿ  ಸಮಾಜಕ್ಕೆ ಪುನರ್ ವಿನಿಯೋಗ ಮಾಡುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸ್ಟಾರ್ ವರ್ಟೆಕ್ಸ್ Sportskannadatv ಲೈವ್ ಮೀಡಿಯಾ ದಲ್ಲಿ ಪಂದ್ಯಾವಳಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
Exit mobile version