
ಕನ್ನಡ ವೈಶ್ಯ ಸಮಾಜ ಬಾಂಧವರಿಗಾಗಿ ರಾಜ್ಯಮಟ್ಟದ ಸುವರ್ಣ ಭಾರತೀ ಕಪ್-2025
ಅಂಕೋಲಾ-ಸುವರ್ಣ ಭಾರತೀ ಕಪ್ ಸಮಿತಿ ಕೇಣಿ ಅಂಕೋಲಾ ಇವರ ವತಿಯಿಂದ,
ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಸುಸಂದರ್ಭದಲ್ಲಿ “ಕನ್ನಡ ವೈಶ್ಯ ಸಮಾಜ” ಬಾಂಧವರಿಗೆ ರಾಜ್ಯ ಮಟ್ಟದ ಹಾರ್ಡ್ ಟೆನಿಸ್ ಕ್ರಿಕೆಟ್ ಪಂದ್ಯಾಟ ಸುವರ್ಣ ಭಾರತೀ ಕಪ್-2025 ಆಯೋಜಿಸಲಾಗಿದೆ.
ಏಪ್ರಿಲ್ 12 ಮತ್ತು 13 ರಂದು ಅಂಕೋಲದ ಕೇಣಿ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾಟದಲ್ಲಿ ಕನ್ನಡ ವೈಶ್ಯ ಸಮಾಜದ ಒಟ್ಟು 10 ತಂಡಗಳು ಭಾಗವಹಿಸಲಿದೆ.
ಕರ್ನಾಟಕದ ಜನಪ್ರಿಯ ಕ್ರೀಡಾವಾಹಿನಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
