Site icon SportsKannada ಸ್ಪೋರ್ಟ್ಸ್ ಕನ್ನಡ

ಕುಂದಾಪುರ ಗಾಂಧಿ ಮೈದಾನದಲ್ಲಿ ‘ಸೌಹಾರ್ದ ಲೆಜೆಂಡ್ಸ್ ಟ್ರೋಫಿ’ ಆರಂಭ

ಕುಂದಾಪುರ ಗಾಂಧಿ ಮೈದಾನದಲ್ಲಿ ‘ಸೌಹಾರ್ದ ಲೆಜೆಂಡ್ಸ್ ಟ್ರೋಫಿ’ ಆರಂಭ

ಕೆ. ಪಿ. ಸತೀಶ್ ನೇತೃತ್ವದಲ್ಲಿ ಭರ್ಜರಿ ಆಯೋಜನೆ

ಕುಂದಾಪುರ: ಗಾಂಧಿ ಮೈದಾನದಲ್ಲಿ ಇಂದು ಪ್ರತಿಷ್ಠಿತ ‘ಸೌಹಾರ್ದ ಲೆಜೆಂಡ್ಸ್ ಟ್ರೋಫಿ’ ಟೆನಿಸ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್ ಭರ್ಜರಿಯಾಗಿ ಚಾಲನೆ ಪಡೆದುಕೊಂಡಿದೆ. ಚಕ್ರವರ್ತಿ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ವಿಕೆಟ್‌ಕೀಪರ್ ಕೆ. ಪಿ. ಸತೀಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಉದ್ಘಾಟನಾ ಕಾರ್ಯಕ್ರಮಕ್ಕೆ ಹಿರಿಯ ಕ್ರಿಕೆಟಿಗರು ಮತ್ತು  ಕ್ರೀಡಾಭಿಮಾನಿಗಳು ಹಾಜರಿದ್ದು, ಆಯೋಜಕರಿಗೆ ಶುಭಹಾರೈಸಿದರು. ಟೂರ್ನಮೆಂಟ್ ಉತ್ತಮ ಮಟ್ಟದ ಕ್ರೀಡಾತ್ಮಕ ಸ್ಪರ್ಧೆಗೆ ವೇದಿಕೆಯಾಗಲಿ ಎಂಬ ಆಶಯವನ್ನು ಹಿರಿಯರು ವ್ಯಕ್ತಪಡಿಸಿದರು.

ಸ್ಪೋರ್ಟ್ಸ್ ಕನ್ನಡ ಟೂರ್ನಮೆಂಟ್‌ನ ಸಂಪೂರ್ಣ ಪಂದ್ಯಗಳನ್ನು ನೇರಪ್ರಸಾರ ಮಾಡುತ್ತಿದೆ. ಸ್ಥಳೀಯ ತಂಡಗಳ ಜೊತೆಗೆ, ನಾಳೆ ಬೆಂಗಳೂರುನಿಂದ ಹಲವು ಬಲಿಷ್ಠ ತಂಡಗಳು ಆಗಮಿಸಿ ಪಂದ್ಯಗಳಲ್ಲಿ ಭಾಗವಹಿಸಲಿವೆ.

ಸಮಗ್ರ ವ್ಯವಸ್ಥೆ, ಮೈದಾನದ ಸಿದ್ಧತೆ ಮತ್ತು ಆಯೋಜಕರ ಶಿಸ್ತಿನ ವ್ಯವಸ್ಥೆಗಳು ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಮುಂದಿನ ಪಂದ್ಯಗಳು ಇನ್ನಷ್ಟು ರೋಚಕವಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಮೊದಲ ಸೆಮಿಫೈನಲ್ ನಲ್ಲಿ ಫಿಶರ್ ಮೆನ್ ಮಲ್ಪೆ ತಂಡವು ಬಿ.ಜಿ ಸ್ಪಾರ್ಕ್ ಉಡುಪಿ ತಂಡವನ್ನು ಬಗ್ಗು ಬಡಿದು ಫೈನಲ್ ಪ್ರವೇಶಿಸಿತು.

Exit mobile version