
ಶ್ರೀ ವಿಷ್ಣು ಕ್ರಿಕೆಟರ್ಸ್ ಕರ್ವಾಲು ಆಶ್ರಯದಲ್ಲಿ ಆರ್.ಎಸ್.ಬಿ ಪ್ರೀಮಿಯರ್ ಲೀಗ್-3
ಉಡುಪಿ-ಶ್ರೀ ವಿಷ್ಣು ಕ್ರಿಕೆಟರ್ಸ್ ಕರ್ವಾಲು ಇವರ ಆಶ್ರಯದಲ್ಲಿ ಆರ್.ಎಸ್.ಬಿ ಸಮಾಜ ಬಾಂಧವರಿಗಾಗಿ ಸಮಾಜದ 10 ಫ್ರಾಂಚೈಸಿಗಳ ನಡುವೆ ಸೀಮಿತ ಓವರ್ ಗಳ ಲೀಗ್ ಮಾದರಿಯ ಪಂದ್ಯಾವಳಿ ಆರ್.ಎಸ್.ಬಿ ಪ್ರೀಮಿಯರ್ ಲೀಗ್-3 ಆಯೋಜಿಸಲಾಗಿದೆ.
ಏಪ್ರಿಲ್ 19 ಮತ್ತು 20 ರಂದು ಬೀಡಿನಗುಡ್ಡೆ ಮಹಾತ್ಮಗಾಂಧಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾಟದ ಪ್ರಥಮ ಬಹುಮಾನ 55,555 ರೂ ನಗದು,ದ್ವಿತೀಯ ಬಹುಮಾನ 33,333 ರೂ ನಗದು ಸಹಿತ ಆಕರ್ಷಕ ಟ್ರೋಫಿ ಒಳಗೊಂಡಿದೆ.ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ವಿಶೇಷ ಪ್ರಶಸ್ತಿ ಜೊತೆಗೆ ಸರಣಿಶ್ರೇಷ್ಟ ಬಹುಮಾನ ರೂಪದಲ್ಲಿ ಆಕರ್ಷಕ ಸೈಕಲ್ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿದೆ.
ಭಾಗವಹಿಸುವ 10 ತಂಡಗಳ ಮಾಲೀಕರು ಮತ್ತು ಐಕಾನ್ ಆಟಗಾರರ ವಿವರ
1-ಮಹಾಲಕ್ಷ್ಮೀ ಲಕ್ಷ್ಮೀಪುರ
2-ವಿಷ್ಣು ಯುನೈಟೆಡ್ ಕೋಡಿಬೆಟ್ಟು
3-ಆರ್.ಎಸ್.ಬಿ ಯೂತ್ ಕ್ರಿಕೆಟರ್ಸ್
4-GOAT ಕ್ರಿಕೆಟರ್ಸ್ ಬೆಂಗಳೂರು
5-ಉದ್ಭವ್ ಪೆರ್ಣಂಕಿಲ
6-ಪ್ರಗತಿ ಮಣಿಪಾಲ
7-ಶಾಸ್ತಾವು ಪುನಾರ್
8-ಜಯದೇವ್ ಗ್ರೂಪ್ ಹಿರಿಯಡ್ಕ
9-ವೈ.ಎಸ್.ಎ ಅಲೆವೂರು
10-ಶ್ರೀದೇವಿ ಕ್ರಿಕೆಟರ್ಸ್ ಪುತ್ತೂರು
ಕರ್ನಾಟಕದ ಜನಪ್ರಿಯ ಕ್ರೀಡಾವಾಹಿನಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
