SportsKannada | ಸ್ಪೋರ್ಟ್ಸ್ ಕನ್ನಡ

ಪ್ರೊ ಕಬಡ್ಡಿ ಪಂದ್ಯಾಟ 2020

 

ಅಕಾಲಿಕವಾಗಿ ಅಗಲಿದ ಚೇತನಗಳಾದ ಭರತ್ ಮತ್ತು ಯತೀಶ್ ಸ್ಮರಣಾರ್ಥ.

“ಸಂಗಮ್ ಫ್ರೆಂಡ್ಸ್ ಸಂಗಮ್” ವತಿಯಿಂದ ಸ್ಪಂದನ ಸೇವಾ ಸಮಿತಿ ಕೋಟ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಉಡುಪಿ ಜಿಲ್ಲೆ ಮತ್ತು ಬ್ರಹ್ಮಾವರ ತಾಲೂಕು ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ದಿ. ಭರತ್ ಮತ್ತು ದಿ. ಯತೀಶ್ ಸ್ಮರಣಾರ್ಥ ಹೊನಲು ಬೆಳಕಿನ 70 ಕೆ. ಜಿ. ವಿಭಾಗದ ಮ್ಯಾಟ್ ಮಾದರಿಯ ಮುಕ್ತ “ಪ್ರೊ ಕಬಡ್ಡಿ ಪಂದ್ಯಾಟ 2020 ” ಇದೇ ಮಾರ್ಚ್ ತಿಂಗಳ 28 ರಂದು ಶಾಂಭವಿ ಶಾಲೆ ಮೈದಾನ ಕೋಟ ಇಲ್ಲಿ ಸಾಯಂಕಾಲ 6 ಗಂಟೆಯಿಂದ ನಡೆಯಲಿದೆ.

ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಸಂಜೆ 6 ಗಂಟೆಯ ಒಳಗೆ ಕಡ್ಡಾಯವಾಗಿ ಹಾಜರಾಗುವಂತೆ ಕೋರಲಾಗಿದೆ. ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನಿಯಮಗಳನ್ನು ಆಟಗಾರರು ಪಾಲಿಸಬೇಕು. ಯಾವುದೇ ಚರ್ಚೆಗೆ ಅವಕಾಶ ಇಲ್ಲದೆ ತೀರ್ಪುಗಾರರ ತೀರ್ಪು ಅಂತಿಮವಾಗಿದೆ ಎಂದು ತಿಳಿಸಲಾಗಿದೆ . ಅಶಿಸ್ತು ತೋರಿದ ತಂಡವನ್ನು ಪಂದ್ಯದಿಂದ ಕೈ ಬಿಡಲಾಗುವುದು ಎಂದು ತಿಳಿಸಿದ್ದಾರೆ.

ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ. 33333
ದ್ವಿತೀಯ ಬಹುಮಾನ ರೂ. 22222
ತೃತೀಯ ಬಹುಮಾನ ರೂ 8888 ಮತ್ತು
ಚತುರ್ಥ ಬಹುಮಾನ ರೂ 8888, ಅಲ್ಲದೆ ಅತ್ಯುತ್ತಮ ದಾಳಿಗಾರ, ಅತ್ಯುತ್ತಮ ಹಿಡಿತಗಾರ, ಮತ್ತು ಅತ್ಯುತ್ತಮ ಸವ್ಯಸಾಚಿ ವಿಶೇಷ ಬಹುಮಾನ ಇದೆ.
“ಬದುಕು ಕತ್ತಲೆಗೆ ಮಿಣುಗು ದೀಪ ಆಗೋಣ ”
ಅನ್ನುವ ಆಶಯದೊಂದಿಗೆ ನಿಮ್ಮ ನೆರವನ್ನು ನೀಡಿ ಸಹಕರಿಸಬೇಕು ಎಂದು ಕೋರಿ ಕೊಳ್ಳುವ,

ಸ್ಪಂದನ ಸೇವಾ ಸಮಿತಿ
ಕರ್ನಾಟಕ ಬ್ಯಾಂಕ್ ಲಿಮಿಟೆಡ್
Ac no :412250010446601
IFSC :KAR0000412

ಕೆ ರಾಮಕೃಷ್ಣ ಆಚಾರ್ಯ
ಸ್ಪೋರ್ಟ್ಸ್ ಕನ್ನಡ ಜಾಲತಾಣ, ಉಡುಪಿ

Exit mobile version