SportsKannada | ಸ್ಪೋರ್ಟ್ಸ್ ಕನ್ನಡ

ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ “B.T.K ಟ್ರೋಫಿ-2019”

ಪಡುಬಿದ್ರಿ ನ್ಯೂಸ್:

ಬ್ಯಾಡ್ಮಿಂಟನ್ ಟೀಮ್ ಕಂಚಿನಡ್ಕ ವತಿಯಿಂದ

ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರರನ್ನು ಒಳಗೊಂಡ ಮೂರನೆಯ ಆವೃತ್ತಿಯ ಹೊನಲು ಬೆಳಕಿನ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ 2019 ಪಂದ್ಯಾಟವು ಇದೇ ಬರುವ ದಿನಾಂಕ 07.12.2019 ಶನಿವಾರ ಸಂಜೆ 4:00 ಗಂಟೆಗೆ ಸರಿಯಾಗಿ ಕಂಚಿನಡ್ಕದ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ.

ಪ್ರಮುಖವಾಗಿ ಉಡುಪಿ ಜಿಲ್ಲಾಧಿಕಾರಿ ಶ್ರೀ ಜಗದೀಶ್,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಪ್ರಕಾಶ್ ಶೆಟ್ಟಿ (ಎಮ್ ಆರ್ ಜಿ ಗ್ರೂಪ್), ಶಾಸಕರಾದ ಶ್ರೀ ರಘುಪತಿ ಭಟ್,ಶ್ರೀ ಲಾಲಾಜಿ ಆರ್ ಮೆಂಡನ್,ವೇದವ್ಯಾಸ್ ಕಾಮತ್ ಉದ್ಯಮಿಗಳಾದ ಶ್ರೀ ಮುನಿಯಾಲು ಉದಯಕುಮಾರ್ ಶೆಟ್ಟಿ,ಸುರೇಶ್ ಶೆಟ್ಟಿ ಗುರ್ಮೆ,ಮಟ್ಟಾರು ರತ್ನಾಕರ ಹೆಗ್ಡೆ, ಶರತ್ ಶೆಟ್ಟಿ ಪಡುಬಿದ್ರಿ,ವಿನಯ್ ಕುಮಾರ್ ಸೊರಕೆ,ಯಶಪಾಲ್ ಸುವರ್ಣ ,ರಾಜಕೀಯ ಧುರೀಣರು ಈ ಉದ್ಘಾಟನ ಸಮಾರಂಭದಲ್ಲಿ ಗೌರವದ ಉಪಸ್ಥಿತರಿಲಿದ್ದಾರೆ.
ಈ ಸಮಾರಂಭದಲ್ಲಿ ಪ್ರಮುಖವಾಗಿ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರರಾದ ಶ್ರೀ ಸಂಜಯ್ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಯುವ ಪ್ರತಿಭಗಳಿಗೆ ಸದಾ ಪ್ರೋತ್ಸಾಹಿಗಳಾದ ಶ್ರೀ ಗೌತಮ್ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು.

ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ – 2019

ಸತತ 2 ವರ್ಷಗಳಿಂದ ಯಶಸ್ವಿಯಾಗಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಂದ್ಯಾಟವನ್ನು ನಡೆಸಿದೆ. ಮೊದಲನೆಯ ಆವೃತ್ತಿಯಲ್ಲಿ ಪಡುಬಿದ್ರಿಯ ಆಟಗಾರರಿಗೆ ಸೀಮಿತವಾಗಿದ್ದ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿತ್ತು.
ಎರಡನೇ ಆವೃತ್ತಿಯಲ್ಲಿ ಕಾಪು,ಹಳೆಯಂಗಡಿ, ಪಡುಬಿದ್ರಿ ಭಾಗದ ಆಟಗಾರರ ಸೀಮಿತವಾದ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ನಿರೀಕ್ಷೆಗೂ ಮೀರಿದ ಯಶಸ್ಸುಗಳಿತ್ತು.

ಈ ಭಾರಿ ಮೂರನೇ ಆವೃತ್ತಿಗೆ ದಾಪುಗಾಲು ಇಡುವ ಹೊಸ್ತಿಲಲ್ಲಿ ಒಂದು ಹೆಜ್ಜೆ ಮುಂದುವರಿಸುತ್ತ ಬಹುಬೇಡಿಕೆಯಂತೆ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಆಟಗಾರರಿಗಾಗಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ 2019 ಆಯೋಜಿಸಲಾಗಿದೆ..


ನಿರಂತರವಾಗಿ 1 ವರ್ಷದ ಅವಧಿಯಲ್ಲಿ ಈ ಪಂದ್ಯಾಟದ ರೂಪುರೇಷೆಗಳು ಸಿದ್ಧಗೊಂಡಿರುತ್ತದೆ. ಸುಮಾರು 198 ಆಟಗಾರರು ನೋಂದಾಯಿಸಿದ್ದು ಮತ್ತು ಸುಮಾರು 20 ಕ್ಕೂ ಅಧಿಕ ಮಾಲಕರು ತಮ್ಮ ಆಸಕ್ತಿತೊರ್ಪಡಿಸಿರುತ್ತರೆ, ಆದರಲ್ಲಿ ಅಳೆದುತೂಗಿ 10 ತಂಡಗಳಿಗೆ 10 ಮಾಲಕರನ್ನು ಅದಿಕೃತಗೊಳಿಸಿರುತ್ತೇವೆ ಮತ್ತು ಹಿರಿಯ ಆಟಗಾರರ ಸಲಹೆ – ಸೂಚನೆಯಂತೆ ಪ್ರತಿಭಾನ್ವಿತ 70 ಆಟಗಾರಿಗೆ ಅವಕಾಶ ಕಲ್ಪಿಸಿ,ಅವರವರ ಪ್ರತಿಭೆ ಅನುಸಾರವಾಗಿ ಗ್ರೇಡ್ ರೀತಿಯಲ್ಲಿ ಆಟಗಾರರ ಹಂಚಿಕೆ ನಡೆಸಲಾಗಿದೆ. ಆಟಗಾರ ಹಂಚಿಕೆ ಪ್ರಕ್ರಿಯೆ ಮತ್ತು ಟ್ರೋಫಿ ಅನಾವರಣ ಸಮಾರಂಭವು 2019 ನವೆಂಬರ್ 3 ರಂದು ಅದ್ದೂರಿಯಾಗಿ ಸಮಾಪನಗೊಂಡಿದೆ.

ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳ ಮಾಲಕರು ಮತ್ತು ತಂಡಗಳ ವಿವರ

ಪಡುಬಿದ್ರಿ ಸಿ.ಎ ಬ್ಯಾಂಕ್ ನ ಅದ್ಯಕ್ಷರಾದ ಶ್ರೀ ವೈ.ಸುಧೀರ್ ಕುಮಾರ್ ಮಾಲಕತ್ವದ ನವರಂಗ್ ವಾರಿಯರ್ಸ್


ಯುವ ಉದ್ಯಮಿ ಶ್ರೀ ಪವನ್ ಪಾದೆಬೆಟ್ಟು ಮಾಲಿಕತ್ವದ ಎಸ್.ಪಿ ಆಟೇಕರ್ಸ್


ಕಾಪು ಭಾ.ಜ.ಪ ಅದ್ಯಕ್ಷರಾದ ಶ್ರೀ ಪ್ರಕಾಶ್ ಶೆಟ್ಟಿ ಮಾಲಕತ್ವದ ಸ್ಕಂದ ವಾರಿಯರ್ಸ್.
ಯುವ ಉದ್ಯಮಿ ಶ್ರೀ ಕೃಷ್ಣ ಬಂಗೇರ ಮಾಲಿಕತ್ವದ ನಮೋ ವಾರಿಯರ್ಸ್


ಯುವ ಉದ್ಯಮಿ ಶ್ರೀ ಪ್ರತೀಕ್ ಕೋಟ್ಯಾನ್ ನೇತೃತ್ವದ ನಂದಿಕೂರು ಜವನೆರ್
ಯುವ ಉದ್ಯಮಿ ಶ್ರೀ ಪದ್ಮನಾಭ ನೇತೃತ್ವದ ಬನ್ವಿತ ಸ್ಮಾಶರ್ಸ್
ಕ.ರ.ವೇ ಜಿಲ್ಲಾಧ್ಯಕ್ಷರಾದ ಶ್ರೀ ಅನ್ಸರ್ ಅಹಮದ್ ಮಾಲಿಕತ್ವದ ತಾನಿಯ ರೆಡ್ ರಾಕರ್ಸ್.
ಯುವನಾಯಕ ಶ್ರೀ ಶಂಕರ್ ಪಡುಬಿದ್ರಿ ಮಾಲಿಕತ್ವದ ಯಶ್ ವಾರಿಯರ್ಸ್
ಅಶೋಕ್ ಶೆಟ್ಟಿ ಬೆಂಗಳೂರು ಮಾಲಿಕತ್ವದ ಶೆಟ್ಟಿ ಪೈಟರ್ಸ್
ಪ್ರಶಾಂತ್ ಎರ್ಮಾಳ್ ಮಾಲಿಕತ್ವದ ಎಸ್.ಎನ್.ಜಿ ರಾಯಲ್ಸ್

ಪಂದ್ಯಾಟದಲ್ಲಿ ಭಾಗವಹಿಸುವ ಪ್ರಮುಖ ಆಟಗಾರರು
ಪ್ರಮುಖವಾಗಿ ಈ ಭಾರಿ ರಾಷ್ಟ ಮಟ್ಟದ ಬ್ಯಾಡ್ಮಿಂಟನ್ ಆಟಗಾರರಾದ ಶ್ರೀ ಸಂಜಯ್,ಏಷ್ಯಾನ್ ಗೇಮ್ಸ್ ಆಯ್ಕೆಗೊಂಡಿರುವ ಉಜಿರೆ ಎಸ್.ಡಿ.ಎಮ್ ವಿದ್ಯಾರ್ಥಿ ಶ್ರೀ ವಿನಯ್ ಡಿ,ಆರ್, ಪ್ರತಿಭಾನ್ವಿತ ಆಟಗಾರರಾದ ಶ್ರೀ ಮನೀಶ್ ಶ್ರೀ ಮಿನ್ನ ಪಡುಬಿದ್ರಿ,ಮನೋಜ್ ಹೆಜಮಾಡಿ, ಶಿವ ಬೆಳ್ತಂಗಡಿ, ಅಜಯ್ ಶೆಟ್ಟಿ,ಪ್ರಣಮ್ ಬೆಂಗಳೂರು, ಅಶ್ರಪ್ ಪಡುಬಿದ್ರಿ, ಪ್ರದೀಪ್ ಭಟ್ ಭಾಗವಹಿಸಲಿದ್ದಾರೆ..

Exit mobile version