
ಉಡುಪಿ ಜಿಲ್ಲಾ ಬಾಲಕಿಯರ ತಂಡಕ್ಕೆ ಮೈಸೂರು ವಿಭಾಗ ಪ್ರಶಸ್ತಿ
ದಿನಾಂಕ 26/09/2026 ಶುಕ್ರವಾರ ಸರಕಾರಿ ಪ್ರೌಢಶಾಲೆ ಹೆಸ್ಕತ್ತೂರು, ಕುಂದಾಪುರ. ಇಲ್ಲಿ ನಡೆದ ಮೈಸೂರು ವಿಭಾಗದ ಮಟ್ಟದ 17 ವರ್ಷ ವಯೋಮಾನದ ಬಾಲಕಿಯರ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ತಂಡವು ಕೊಡಗು ತಂಡವನ್ನು ಸೋಲಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುತ್ತದೆ. ಉಡುಪಿ ಜಿಲ್ಲಾ ತಂಡವನ್ನು ಎಸ್. ಎಮ್. ಎಸ್. ಆಂಗ್ಲ ಮಾಧ್ಯಮ ಪ್ರೌಢಶಾಲೆ (ರಾಜ್ಯ ಪಠ್ಯಕ್ರಮ) ದ ಸಿಯಾನ ಡಿ’ ಅಲ್ಮೇಡಾ ಳ ನಾಯಕತ್ವದಲ್ಲಿ ಈ ಸಾಧನೆಯನ್ನು ಮಾಡಿದೆ. ಎದುರಾಳಿ ನೀಡಿದ ಅಲ್ಪ ಮೊತ್ತವನ್ನು ವಿಕೆಟ್ ನಷ್ಟವಿಲ್ಲದೆ ಬೆನ್ನಟ್ಟಿ ಪ್ರಶಸ್ತಿ ಜಯಿಸಿದೆ. ಎಸ್. ಎಂ. ಎಸ್. ಪ್ರೌಢಶಾಲೆ (ರಾಜ್ಯ ಪಠ್ಯಕ್ರಮ)ದ ಶಮಿತಾ ಶೆಟ್ಟಿ, ರವಿನಾ. ಅಹಾನ, ಭೂಮಿಕಾ ಮತ್ತು ಸಿಯಾನ ಡಿ’ ಅಲ್ಮೇಡಾ ಹಾಗೂ ಬ್ರಹ್ಮಾವರ ಸರಕಾರಿ ಪ್ರೌಢಶಾಲೆಯ ನೇಹಾ ಮತ್ತು ಜನ್ಮಿತಾ ಇವರು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ, ಎಂದು ತರಬೇತುದಾರರಾದ ಶ್ರೀ ಲಿಂಗಪ್ಪ ಬ್ರಹ್ಮಾವರ ಮಾಹಿತಿ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಎಸ್ ಎಂ ಎಸ್ ಆಂ. ಮಾ. ಶಾಲೆ (ರಾಜ್ಯ ಪಠ್ಯಕ್ರಮ)ದ ದೈಹಿಕ ಶಿಕ್ಷಣ ಶಿಕ್ಷಕಿ ಕು. ಜೋಮೋಲ್ ಮತ್ತು ತಂಡ ವ್ಯವಸ್ಥಾಪಕಿ ಕು. ರಜನಿ (ಸ.ಶಿ) ಅವರು ಉಪಸ್ಥಿತರಿದ್ದರು.
