Site icon SportsKannada ಸ್ಪೋರ್ಟ್ಸ್ ಕನ್ನಡ

ಮಥಾಯಸ್ ಕೋಸ್ಟಲ್ ಐಟಿ ಕ್ರಿಕೆಟ್ ಚಾಂಪಿಯನ್ ಶಿಪ್ ಟ್ರೋಫಿ ” ಕ್ರಿಕೆಟ್ ಪಂದ್ಯಾವಳಿ

“ಮಥಾಯಸ್ ಕೋಸ್ಟಲ್ ಐಸಿಸಿ” ಕ್ರಿಕೆಟ್ ಪಂದ್ಯಾವಳಿಯನ್ನು 2024 ರ ಫೆಬ್ರವರಿ 10 ಮತ್ತು 11 ರಂದು ಸಹ್ಯಾದ್ರಿ ಕಾಲೇಜಿನ ಸುಂದರವಾದ ಹಸಿರು ಹುಲ್ಲು ಪಿಚ್‌ನಲ್ಲಿ ನೆರೆಹೊರೆಯ ಐಟಿ ಕಂಪನಿಯ  ಕ್ರೀಡಾ ಉತ್ಸಾಹಿಗಳಿಗಾಗಿ ನೋವಿಗೋ ಸೊಲ್ಯೂಷನ್ಸ್ , ಮಂಗಳೂರಿನಿಂದ ಆಯೋಜಿಸಲಾಯಿತು.
ಪಂದ್ಯಾಟದ ಉದ್ಘಾಟನೆಯನ್ನು ಭಂಡಾರಿ ಪ್ರತಿಷ್ಠಾನದ ಟ್ರಸ್ಟಿಗಳಾದ  ಶ್ರೀ ದೇವದಾಸ ಹೆಗಡೆ ,ಸಂಸ್ಥೆಯ ಸಹ-ಸಂಸ್ಥಾಪಕ ,ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಪ್ರವೀಣ್ ಕುಮಾರ್ ಕಲ್ ಭಾವಿ, ಸಹ-ಸ್ಥಾಪಕ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಮೊಹಮ್ಮದ್ ಹನೀಫ್ ಇವರುಗಳು ನೆರವೇರಿಸಿದರು.  ಸುರೇಶ್ ಭಟ್ ಮೂಲ್ಕಿ, ರೂಬೆನ್ ಡಿಸೋಜಾ  ಬಜ್ಪೆ, CA ಅಮಿತ್ ಪೈ ಮತ್ತು  ರವಿ ಎಸ್ ಮುಂಬೈ ಅವರು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಆಕರ್ಷಕ ವ್ಯಾಖ್ಯಾನವನ್ನು ಮಾಡಿದರು. ಐಟಿ ಕಂಪನಿಯ ಕ್ರಿಕೆಟ್ ಪ್ರೇಮಿಗಳು ಮತ್ತು ಮೈದಾನದಲ್ಲಿದ್ದ ಅಭಿಮಾನಿಗಳು ಎರಡು ದಿನಗಳ ಆಟವನ್ನು ಆನಂದಿಸಿದರು. ವಿ4 ನ್ಯೂಸ್ ನಲ್ಲಿ  ಟೂರ್ನಿಯ ನೇರ ಪ್ರಸಾರ ಬಿತ್ತರಿಸಲಾಯಿತು.
ಮಂಗಳೂರು ಸುತ್ತಮುತ್ತಲಿನ  ಬೇರೆ ಬೇರೆ ಐಟಿ ಕಂಪನಿಯ 15 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು ಮತ್ತು ಭಾಗವಹಿಸಿದ ಎಲ್ಲಾ ತಂಡದ ಆಟಗಾರರನ್ನು ಪಂದ್ಯಾವಳಿಯು  ಪುಳಕಗೊಳಿಸಿತು. ಎರಡು ದಿನಗಳ ಪಂದ್ಯಾವಳಿಯ ಅಂಪೈರಿಂಗ್ ಜವಾಬ್ದಾರಿಯನ್ನು ನಿರ್ಣಾಯಕರಾದ ರಾಜರತ್ನ, ರಾಜೇಶ್ವರ್, ಆತ್ಮಾರಾಮ್, ವಿರಾಜ್ ,ಧನುಷ್ ಇವರುಗಳ ಹೊತ್ತುಕೊಂಡಿದ್ದರು. ವಿಜೇತ ತಂಡವು ಗ್ರ್ಯಾಂಡ್ ಟ್ರೋಫಿ ಮತ್ತು ರೂ.1,00,000 ನಗದು ಬಹುಮಾನವನ್ನು ಪಡೆದುಕೊಂಡಿತು ಮತ್ತು ರನ್ನರ್ ಅಪ್ ತಂಡವು ಟ್ರೋಫಿ ಮತ್ತು ರೂ.50,000 ನಗದು ಬಹುಮಾನವನ್ನು ಗಳಿಸಿತು . ಉಡುಪಿ ನಗರದ ನೀವಿಯಸ್ ಸೊಲ್ಯೂಷನ್ಸ್  ತಂಡ ಪ್ರಥಮ ಬಹುಮಾನ ಪಡೆದರೆ, ಮಂಗಳೂರು ಇನ್ಫೋಸಿಸ್ ತಂಡ ದ್ವಿತೀಯ ಬಹುಮಾನ ಪಡೆಯಿತು.
ಮುಖ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಥಾಯಿಸ್ ಗ್ರೂಪ್ ಅಧ್ಯಕ್ಷ  ಶ್ರೀ ಗ್ರೆಗೊರಿ ಮಥಾಯಿಸ್ , ಕದಿಕೆ  ಏರ್ ಲಾಜಿಸ್ಟಿಕ್ಸ್  ಮಾಲೀಕ ಶ್ರೀ ದಿನೇಶ್ , ಕ್ರೆಡೈ ಮಂಗಳೂರು ಘಟಕದ ಅಧ್ಯಕ್ಷರು ಶ್ರೀ ವಿನೋದ್ ಎ.ಆರ್.  ಸಂಸ್ಥೆಯ ಸಹ-ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಮತ್ತ CEO ಶ್ರೀ ಪ್ರವೀಣ್ ಕುಮಾರ್ ಕಲ್ ಭಾವಿ , ಸಹ-ಸ್ಥಾಪಕ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿಯಾದ ಮೊಹಮ್ಮದ್ ಹನೀಫ,  ಉಪಸ್ಥಿತರಿದ್ದು ಅಸಾಧಾರಣ ಪ್ರದರ್ಶನ ನೀಡಿದ ಆಟಗಾರರಿಗೆ ಉತ್ತಮ ಆಟಗಾರ, ಉತ್ತಮ ಬೌಲರ್ ಮತ್ತು ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಗಳನ್ನು ನೀಡಲಾಯಿತು.
ಎರಡು ದಿನಗಳ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಸಂಸ್ಥೆಯ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪಂದ್ಯಾವಳಿಯ ಕೊನೆಯಲ್ಲಿ ಸಂಸ್ಥೆಯ ಮಾನವ ಸಂಪನ್ಮೂಲ ವ್ಯಾಪಾರ ಪಾಲುದಾರ ವಿಭಾಗದ  ಮಿಸ್ ಡಯಾನಾ  ಅವರು ಭಾಗವಹಿಸಿದ ಎಲ್ಲಾ ತಂಡಗಳಿಗೆ, ಸಹಕರಿಸಿದ ಎಲ್ಲಾ ಕ್ರೀಡಾ ಪ್ರೇಮಿಗಳಿಗೆ ಮತ್ತು ಕ್ರೀಡಾಕೂಟವನ್ನು ಆಯೋಜಿಸುವಲ್ಲಿ ಶ್ರಮಿಸಿದ ಕ್ರೀಡಾ ಸಮಿತಿ ಮತ್ತು ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮಾನವ ಸಂಪನ್ಮೂಲ ವಿಭಾಗದ  ಮುಖ್ಯಸ್ಥರಾದ ಶ್ರೀ ಪವನ್ ರೈ , ಗೋಪಾಲಕೃಷ್ಣ ಪೈ  ಹಾಗೂ  ಸಂಸ್ಥೆಯ ಇನ್ನಿತರ ಸಹೋದ್ಯೋಗಿಗಳ ಸಹಕಾರದೊಂದಿಗೆ ಟೂರ್ನಿಯು ಅಚ್ಚುಕಟ್ಟಾಗಿ ನಡೆದು ” ಕೋಸ್ಟಲ್ ಐಟಿ  ಕ್ರಿಕೆಟ್ ಚಾಂಪಿಯನ್ ಶಿಪ್  ಸೀಸನ್ 2″ ಕ್ರಿಕೆಟ್ ಪಂದ್ಯಾವಳಿಯು ಅದ್ಭುತ ಯಶಸ್ಸಿನೊಂದಿಗೆ ಕೊನೆಗೊಂಡಿತು.
Exit mobile version