
ಇಂಗ್ಲೆಂಡ್ ವಿರುದ್ಧ ಹಣಾಹಣಿ: ಸೂರ್ಯಕುಮಾರ್ ನೇತೃತ್ವದ ಭಾರತ ಟಿ20 ತಂಡದ ಓಟ ಮುಂದುವರಿಯಲಿ
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಿನ್ನೆ ರಾತ್ರಿ ಪ್ರಾರಂಭವಾದ ಐದು ಪಂದ್ಯಗಳ ಸರಣಿಯ ಮೊದಲ T20I ನಲ್ಲಿ ಇಂಗ್ಲೆಂಡ್ ತಂಡವನ್ನು ವಿಶ್ವ ಚಾಂಪಿಯನ್ ಭಾರತ ಸೋಲಿಸಿದೆ.
T20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ನಂತರ ಭಾರತ ತಂಡವು ಇನ್ನೂ ಒಂದು ಕೂಡಾ T20I ಸರಣಿಯನ್ನು ಕಳೆದುಕೊಂಡಿಲ್ಲ. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಯನ್ನು ಗೆದ್ದು ಗೆಲುವಿನ ನಾಗಾಲೋಟದಲ್ಲಿದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಹಾಗೂ ಬಾರ್ಡರ್ ಗವಾಸ್ಕರ್ ಕಪ್ ಸರಣಿಯಲ್ಲಿ ಸೋತು ತವರಿಗೆ ಮರಳಿರುವ ಹಿರಿಯರ ತಂಡಕ್ಕಿಂತ ಸಂಪೂರ್ಣ ಭಿನ್ನವಾದ ತಂಡವಾಗಿ ಯುವ ಆಟಗಾರರನ್ನು ಹೊಂದಿರುವ ತಂಡವಾಗಿ ಭಾರತ ತಂಡ ಆಡುತ್ತಿದೆ.
ಆಸ್ಟ್ರೇಲಿಯಾ ಸರಣಿಯಲ್ಲಿ ಭಾಗವಹಿಸಿದ್ದ ಆಟಗಾರರ ಪೈಕಿ ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಹೊರತುಪಡಿಸಿ ಎಲ್ಲರೂ ಟಿ20 ಸ್ಪೆಷಲಿಸ್ಟ್ ಆಟಗಾರರು ಎಂಬುದು ಗಮನಾರ್ಹ.
ಭಾರತ ತಂಡ ಕಳೆದ 6 ವರ್ಷಗಳಿಂದ ದೇಶೀಯ T20I ಸರಣಿಯಲ್ಲಿ ಅಜೇಯವಾಗಿದೆ, ಫೆಬ್ರವರಿ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯದಾಗಿ T20I ಸರಣಿಯನ್ನು ಕಳೆದುಕೊಂಡಿದೆ. ಅಂದಿನಿಂದ ಅವರು 18 T20I ಸರಣಿಗಳಲ್ಲಿ 14 ಸರಣಿಗಳನ್ನು ಗೆದ್ದಿದ್ದಾರೆ ಮತ್ತು 2 ಸರಣಿಗಳನ್ನು ಕಳೆದುಕೊಂಡಿದ್ದಾರೆ.
