
ಮ್ಯಾಂಚೆಸ್ಟರ್ ಟೆಸ್ಟ್: ಇದು ಗೆಲುವಿಗೆ ಸಮಾನವಾದ ಡ್ರಾ
ಮ್ಯಾಂಚೆಸ್ಟರ್ ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ, ಭಾರತದ ಅಭಿಮಾನಿಗಳು ಪಂದ್ಯದ ಫಲಿತಾಂಶವನ್ನು ಗೆಲುವಿನಂತೆ ಆಚರಿಸುತ್ತಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ 311 ರನ್ಗಳ ಹಿನ್ನಡೆಯಲ್ಲಿದ್ದರೂ, ನಾಯಕ ಶುಭಮನ್ ಗಿಲ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಅತ್ಯುತ್ತಮ ಬ್ಯಾಟಿಂಗ್ನಿಂದ ಭಾರತ ಟೆಸ್ಟ್ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
4ನೇ ದಿನ ಯಾವುದೇ ರನ್ ಗಳಿಸದೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡವನ್ನು ನಾಯಕ ಶುಭ್ಮನ್ ಗಿಲ್ ಮತ್ತು ಶತಕದ ಸಮೀಪದಲ್ಲಿದ್ದ ಕೆಎಲ್ ರಾಹುಲ್ ಉಳಿಸಿದರೆ, 5ನೇ ದಿನ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಭರ್ಜರಿ ಆಟವಾಡಿ ಇಂಗ್ಲೆಂಡ್ನಿಂದ ಗೆಲುವು ಕಸಿದುಕೊಂಡರು.
ರವೀಂದ್ರ ಜಡೇಜಾ ತಮ್ಮ ಐದನೇ ಟೆಸ್ಟ್ ಶತಕವನ್ನು ಪೂರೈಸಿದರು. ವಾಷಿಂಗ್ಟನ್ ಸುಂದರ್ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿದರು.
ಭಾರತೀಯ ಆಟಗಾರರ ಹೋರಾಟವನ್ನು ಶ್ಲಾಘಿಸಲೇಬೇಕು.

