SportsKannada | ಸ್ಪೋರ್ಟ್ಸ್ ಕನ್ನಡ

ದಿ. ಶ್ರೀಮತಿ ಲೂಸಿ ಸಲ್ದಾನ‌ ಮೆಮೋರಿಯಲ್ ಕಪ್ – 2023 ಅಂಡರ್ -14 ರಾಜ್ಯ ಮಟ್ಟದ ಲೆದರ್ ಬಾಲ್ ಟಿ20 ಕ್ರಿಕೆಟ್ ಪಂದ್ಯಾವಳಿ

ಕಾರ್ಕಳ ಸಮೀಪದ ರಂಗನಪಲ್ಕೆ ಕೌಡೂರು ಸ್ಟೇಡಿಯಂ ನಲ್ಲಿ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಅಂಡರ್ ೧೪ ಕ್ರಿಕೆಟ್ ಪಂದ್ಯಾಟಕ್ಕೆ ಸನ್ ರೈಸ್ ಕ್ರಿಕೆಟ್ ಅಕಾಡೆಮಿಯ ಪ್ರಧಾನ ಕೋಚ್, ಹಿರಿಯ  ಆಟಗಾರರಾದ ಸದಾನಂದ ಶಿರ್ವ ಚಾಲನೆ ನೀಡಿದರು.
ಸಾಗರ, ಭದ್ರಾವತಿ,ಮೈಸೂರು, ಬ್ರಹ್ಮಾವರ, ಮಂಗಳೂರು, ಮಣಿಪಾಲ, ಶಿರ್ವ, ಪುತ್ತೂರು ಭಾಗದ ಒಟ್ಟು ೧೨ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿವೆ. ಮುಂದಿನ ಐದು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ.
ಈ ಸಂದರ್ಭ ಕೌಡೂರು ಸ್ಟೇಡಿಯಂ ಸಂಸ್ಥಾಪಕ ಲಾರೆನ್ಸ್ ಸಲ್ದಾನ ಕೌಡೂರು, ಮೈದಾನದ ವ್ಯವಸ್ಥಾಪಕ ಮೆಲ್ವಿನ್ ನೊರೊನ್ಹಾ ,  ಪಂದ್ಯಾಟ ಸಂಯೋಜಕ ಸದಾನಂದ ಶಿರ್ವ ಮತ್ತಿತರರು ಇದ್ದರು.
ಸನ್ ರೈಸ್ ಕ್ರಿಕೆಟ್ ಅಕಾಡೆಮಿಯ ಆಶ್ರಯದಲ್ಲಿ ಏಪ್ರಿಲ್ 8 ರಿಂದ 12 ರ ವರೆಗೆ, ಲೀಗ್ ಕಮ್ ನಾಕ್ ಔಟ್ ರೂಪದಲ್ಲಿ ಪ್ರತೀ ದಿನ ಮೂರು ಪಂದ್ಯಗಳು ನಡೆಯಲಿವೆ.
ಭಾಗವಹಿಸುವ ತಂಡಗಳು:
ಬೆಳ್ಳಿಪಾಡಿ ಆಳ್ವಾಸ್ ಅಕಾಡೆಮಿ ಬ್ರಹ್ಮಾವರ,
22 ಯಾರ್ಡ್ಸ್ ಸ್ಕೂಲ್ ಆಫ್  ಅಕಾಡೆಮಿ ಮಂಗಳೂರು,
ಪುತ್ತೂರು ಕ್ರಿಕೆಟ್ ಅಕಾಡೆಮಿ ಪುತ್ತೂರು,
ಸೇಂಟ್ ಅಲೋಶಿಯಸ್ ಕ್ರಿಕೆಟ್ ಅಕಾಡೆಮಿ ಮಂಗಳೂರು,HJC ಕ್ರಿಕೆಟ್ ಅಕಾಡೆಮಿ ಶಿರ್ವ,
ಉಡುಪಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್  ಮಣಿಪಾಲ,ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರು,ಕರಾವಳಿ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರು,ಸಾಗರ್ ಬಾಯ್ಸ್ ಇಲೆವೆನ್ ಸಾಗರ,
ಹೆರಿಟೇಜ್ ಕ್ರಿಕೆಟ್ ಅಕಾಡೆಮಿ ಮೈಸೂರು,
ರಘುವೀರ್  ಕ್ರಿಕೆಟ್ ಅಕಾಡೆಮಿ ಭದ್ರಾವತಿ.
ಸನ್ ರೈಸ್ ಕ್ರಿಕೆಟ್ ಅಕಾಡೆಮಿ  ಆಯೋಜಿಸಿರುವ  ದಿ. ಶ್ರೀಮತಿ ಲೂಸಿ ಸಲ್ದಾನ  ಇವರ  ಸ್ಮರಣಾರ್ಥ ನಡೆಯುವ ರಾಜ್ಯಮಟ್ಟದ 14 ರ ವಯೋಮಿತಿಯ ಈ ಲೆದರ್ ಬಾಲ್ T-20 ಕ್ರಿಕೆಟ್ ಪಂದ್ಯಾವಳಿಗೆ ಸ್ಪೋರ್ಟ್ಸ್ ಕನ್ನಡ. ಕಾಮ್ ಶುಭಾಶಯ ಕೋರುತ್ತಿದೆ. ಕ್ರಿಕೆಟ್ ನಮ್ಮ ಪ್ರಮುಖ ಆಟ.  ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರರು ಕ್ರೀಡಾ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿ , ಕ್ರಿಕೆಟ್‌ನಲ್ಲಿ ಉತ್ಸಾಹವನ್ನು ಹೊಂದಿ ಮತ್ತು ಉತ್ತಮ ಪ್ರದರ್ಶನ  ತೋರ್ಪಡಿಸಿ  ಮುಂದಿನ ಕ್ರಿಕೆಟ್ ತಾರೆಯಾಗುವ ಅವಕಾಶವನ್ನು ಪಡೆದುಕೊಳ್ಳಿ ಎಂದು ಹಾರೈಸುತ್ತಿದೆ.
Exit mobile version