SportsKannada | ಸ್ಪೋರ್ಟ್ಸ್ ಕನ್ನಡ

ಕಂಚಿನಡ್ಕ ಬ್ಯಾಡ್ಮಿಂಟನ್ ಲೀಗ್: ಹೊನಲು ಬೆಳಕಿನ ಐಪಿಎಲ್ ಮಾದರಿಯ ಬ್ಯಾಡ್ಮಿಂಟನ್ ಪಂದ್ಯಾಕೂಟ

 

“ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ.ಸರಳವಾಗಿ ಸ್ವೀಕರಿಸಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.ಸ್ಪರ್ಧೆಗಳಲ್ಲಿ ಭಾಗವಹಿಸಿದವರೆಲ್ಲರೂ ಗೆಲ್ಲಲು ಸಾಧ್ಯವಿಲ್ಲ,ಭಾಗವಹಿಸುವಿಕೆ ಮುಖ್ಯ”ಎಂದು ಎಂ.ಆರ್.ಜಿ ಗ್ರೂಪ್ ನ ಸಿ.ಎಂ.ಡಿ ಪ್ರಕಾಶ್ ಶೆಟ್ಟಿ ಕಂಚಿನಡ್ಕ ಬ್ಯಾಡ್ಮಿಂಟನ್ ಲೀಗ್ ಉದ್ಘಾಟಿಸಿ ಮಾತನಾಡಿದ್ದರು.

ಕೃಷ್ಣ ಬಂಗೇರ ಸಾರಥ್ಯದಲ್ಲಿ


ಪಡುಬಿದ್ರಿ ಕಂಚಿನಡ್ಕದಲ್ಲಿ ನಡೆದ ಹೊನಲು ಬೆಳಕಿನ ಐಪಿಎಲ್ ಮಾದರಿಯ ಬ್ಯಾಡ್ಮಿಂಟನ್ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿದ್ದರು.
ಶಾಸಕ ಲಾಲಾಜಿ‌.ಆರ್.ಮೆಂಡನ್ ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲೇ ಒಳಾಂಗಣ ಕ್ರೀಡಾಂಗಣವಾಗಿ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ನಿರ್ಮಿಸುವ ಯೋಜನೆಯಿದೆ ಎಂದು ಹೇಳಿದರು.

ಈ ಸಂದರ್ಭ ಇತ್ತೀಚೆಗಷ್ಟೇ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದು,
60 ನೇ ವರ್ಷದ ಸಂಭ್ರಮದಲ್ಲಿರುವ
ಎಂ.ಆರ್.ಜಿ.ಗ್ರೂಪ್ ನ ಸಿ.ಎಂ.ಡಿ ಪ್ರಕಾಶ್ ಶೆಟ್ಟಿಯವರನ್ನು,
ಆಲ್ ಇಂಡಿಯಾ ರಾಷ್ಟ್ರೀಯ ಮಟ್ಟದ ಪಂದ್ಯಾಕೂಟದ ರನ್ನರ್ಸ್ ಹಾಗೂ ಪೋಲ್ಯಾಂಡ್ ನಲ್ಲಿ ನಡೆದ
BWE ವಿಶ್ವ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬ್ಯಾಡ್ಮಿಂಟನ್ ಪಟು ಸಂಜಯ್ ಪಡುಬಿದ್ರಿ ಹಾಗೂ ಹಳೆಯಂಗಡಿಯಲ್ಲಿ
ಟೊರ್ಪೆಡೋಸ್ ಸಂಸ್ಥೆಯನ್ನು ಕಟ್ಟಿ,ನಿರಂತರ ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸಿ,ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ,ಕ್ರೀಡೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಸಮಾಜರತ್ನ,ಬಂಟರತ್ನ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೌತಮ್ ಶೆಟ್ಟಿ ಕುಂದಾಪುರ ಇವರನ್ನು ಸನ್ಮಾನಿಸಲಾಯಿತು.

ಹೊನಲು ಬೆಳಕಿನಲ್ಲಿ ಸಾಗಿದ ಈ ಪಂದ್ಯಾವಳಿಯ ರೋಮಾಂಚಕಾರಿ ದೀರ್ಘಕಾಲದ ಹೋರಾಟದ ಬಳಿಕ ಪವನ್ ಪಾದೆಬೆಟ್ಟು ಮಾಲೀಕತ್ವದ ಎಸ್.ಪಿ.ಅಟ್ಯಾಕರ್ಸ್ ತಂಡ ,
ಪಾದೆಬೆಟ್ಟು ಪ್ರಕಾಶ್ ಮಾಲೀಕತ್ವದ ಸ್ಕಂದ ವಾರಿಯರ್ಸ್ ತಂಡವನ್ನು
12-15,9-15,15-12,12-15,15-9,15-6 ಹೀಗೆ 6 ಸೆಟ್ ಗಳ ಮುನ್ನಡೆಯೊಂದಿಗೆ ಪ್ರಥಮ ಪ್ರಶಸ್ತಿ ಪಡೆಯಿತು.


ವಿಜೇತ ತಂಡ 55,555 ನಗದು,
ರನ್ನರ್ಸ್ ತಂಡ 33,333 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರೆ,


ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ಎಸ್.ಅಟ್ಯಾಕರ್ಸ್ ನ ನಿನಾದ್,
ಬೆಸ್ಟ್ ರಿಸೀವರ್ ಸ್ಕಂದ ವಾರಿಯರ್ಸ್ ನ ಶಶನ್ ರಾಜ್,ಬೆಸ್ಟ್ ಸ್ಮ್ಯಾಶರ್ ಎಸ್.ಪಿ ಅಟ್ಯಾಕರ್ಸ್ ನ ಪ್ರವೀಣ್ ಬಜಗೋಳಿ,ಆಲ್ ರೌಡರ್ ಪ್ರಶಸ್ತಿಯನ್ನು ಸಂಜಯ್ ಪಡುಬಿದ್ರಿ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ


ಪಡುಬಿದ್ರಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ನವೀನ್ ಚಂದ್ರ.ಜೆ.ಶೆಟ್ಟಿ,ಕಾಪು ಬಿ.ಜೆ.ಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಶರತ್ ಶೆಟ್ಟಿ,ಸಂಘಟಕರಾದ ಕೃಷ್ಣ ಬಂಗೇರ,ಪದ್ಮನಾಭ ಕಂಚಿನಡ್ಕ,ಲೋಹಿತಾಕ್ಷ ಸುವರ್ಣ,ಸುನಿಲ್ ಶೆಟ್ಟಿ, ತಾರಾನಾಥ ಅಮೀನ್,ಅಣ್ಣು ಕಂಚಿನಡ್ಕ, ನಿಜಾಮುದ್ದೀನ್,ಸುರೇಶ್ ಪಡುಬಿದ್ರಿ, ಹರೀಶ್ ಕಂಚಿನಡ್ಕ, ಶಂಕರ್ ಕಂಚಿನಡ್ಕ, ದಿನೇಶ್ ಪಡುಬಿದ್ರಿ,ಯೋಗೀಶ್ ಪಡುಬಿದ್ರಿ


ಉಪಸ್ಥಿತರಿದ್ದರು.
ಆರ್.ಕೆ.ಆಚಾರ್ಯ ಕೋಟ…

Exit mobile version