Site icon SportsKannada ಸ್ಪೋರ್ಟ್ಸ್ ಕನ್ನಡ

ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಖ್ಯಾತಿಯ ದಾವಣಗೆರೆ ಕ್ರಿಕೆಟ್ ಪಂದ್ಯಾಟ ಪ್ರಮುಖ ರೂವಾರಿ ಜಯಪ್ರಕಾಶ್ ಗೌಡರಿಗೆ ಪಿತೃ ವಿಯೋಗ.

ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಖ್ಯಾತಿಯ ದಾವಣಗೆರೆ ಕ್ರಿಕೆಟ್ ಪಂದ್ಯಾಟ ಪ್ರಮುಖ ರೂವಾರಿ ಜಯಪ್ರಕಾಶ್ ಗೌಡರಿಗೆ ಪಿತೃ ವಿಯೋಗ.

ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಖ್ಯಾತಿಯ ದಾವಣಗೆರೆ ಕ್ರಿಕೆಟ್ ಪಂದ್ಯಾಟ ಪ್ರಮುಖ ರೂವಾರಿ ಜಯಪ್ರಕಾಶ್ ಗೌಡ ಇವರ ತಂದೆ ದಾವಣಗೆರೆ ಕುವೆಂಪು ನಗರದ ವಾಸಿ, ಬಡಾವಣೆ ಪೊಲೀಸ್ ಠಾಣೆ ಎದುರಿನ ಮಹಾತ್ಮ ವಿದ್ಯಾ ಶಾಲೆಯ ನಿವೃತ್ತ ಶಿಕ್ಷಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಹಿರಿಯ ಶಿಕ್ಷಕರಾಗಿದ್ದ ಕೆ.ಜಿ.ಕುಬೇರಪ್ಪ ಗೌಡ್ರು ಸಾವಿರಾರು ವಿದ್ಯಾರ್ಥಿಗಳಿಗೆ
ಶಿಕ್ಷಣ ನೀಡಿದ್ದವರು.

ಮೃತರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನಾದ ಜಿಲ್ಲಾ ಕ್ರೀಡಾಪಟುಗಳ ಸಂಘದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ ಗೌಡ ಹಾಗೂ ಬಂಧು-ಬಳಗ ಹಾಗೂ ಅಪಾರ ಶಿಷ್ಯ, ಬಂಧು ಬಳಗದವರನ್ನು ಅಗಲಿದ್ದಾರೆ.

ಸಂತಾಪ:
ನಿವೃತ್ತ ಶಿಕ್ಷಕ ಕೆ.ಜಿ.ಕುಬೇರಪ್ಪ ಗೌಡ್ರು ನಿಧನಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಯುವ ಮುಖಂಡ ಶ್ರೀನಿವಾಸ ವಿ.ಶಿವಗಂಗಾ, ಕುರುಡಿ ಗಿರೀಶ, ರೊಳ್ಳಿ ಮಂಜುನಾಥ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.

Exit mobile version