SportsKannada | ಸ್ಪೋರ್ಟ್ಸ್ ಕನ್ನಡ

ರಿಕ್ಷಾ ಚಾಲಕನ ಕನಸು ನನಸು ಮಾಡಿದ ಡಾ ಗೋವಿಂದ ಬಾಬು ಪೂಜಾರಿ

ಕುಂದಾಪುರ : ತಾಲೂಕಿನ ಕಾಳಾವರ ಗ್ರಾಮದ ನರಿಕೊಡ್ಲು ಗ್ರಾಮೀಣ ಪ್ರದೇಶದ ರಿಕ್ಷಾ ಚಾಲಕರಾಗಿದ್ದ ಸತೀಶ್ ಪೂಜಾರಿ ಅವರು ನೂತನ ಮನೆ ನಿರ್ಮಾಣದ ಕನಸು ಕಂಡಿದ್ದರು.
ಆದರೆ ವಿಧಿಯಾಟದಿಂದ ಅವರು ಅಕಾಲಿಕವಾಗಿ ಮೃತಪಟ್ಟಿದ್ದರು. ಈ ಮನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಅವರ ಕುಟುಂಬ ತ್ರೀವ ಸಂಕಷ್ಟದಲ್ಲಿರುವ ವಿಚಾರವನ್ನು ಸ್ಥಳೀಯರು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ ಗೋವಿಂದ ಬಾಬು ಪೂಜಾರಿ ಅವರ ಗಮನಕ್ಕೆ ತಂದು, ಒಂದು ಡಾ ಗೋವಿಂದ ಬಾಬು ಪೂಜಾರಿ ಅವರ ಖುದ್ದಾಗಿ ಕಾಳಾವಾರದ ನರಿಕೊಡ್ಲು ಮನೆ ದಿವಗಂತ ಸತೀಶ್ ಪೂಜಾರಿಯವರ ಮನೆಗೆ ಭೇಟಿ ನೀಡಿದರು.
ದಿವಗಂತ ಸತೀಶ್ ಪೂಜಾರಿ ಅವರ ಮನೆಯವರಿಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ ಗೋವಿಂದ ಬಾಬು ಪೂಜಾರಿ ಅವರ ಕನಸು ಕಂಡ ಸತೀಶ್ ಪೂಜಾರಿ ಅವರು ಆತ್ಮಕ್ಕೆ ನನಸು ಮಾಡಬೇಕೆಂದು ಹೇಳಿ, ಅರ್ಧಕ್ಕೆ ನಿಂತಿದ್ದ ಈ ಮನೆಯನ್ನು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂಪೂರ್ಣಗೊಳಿಸಿ, ಅವರ ಆತ್ಮಕ್ಕೆ ನನಸು ಮಾಡುತ್ತೇನೆ ಎಂದರು.
ದಿವಗಂತ ಸತೀಶ್ ಪೂಜಾರಿ ಅವರ ಕನಸು ನನಸು ಮಾಡಿ, ಇದೇ ಅಕ್ಟೋಬರ್ 8ಕ್ಕೆ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿವಗಂತ ಸತೀಶ್ ಪೂಜಾರಿ ಅವರ ಮನೆ ಉದ್ಘಾಟನೆ ಹಾಗೂ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟಿ ಅಧ್ಯಕ್ಷ ಡಾ ಗೋವಿಂದ ಬಾಬು ಪೂಜಾರಿ ಅವರು ತಿಳಿಸಿದ್ದಾರೆ.
Exit mobile version