SportsKannada | ಸ್ಪೋರ್ಟ್ಸ್ ಕನ್ನಡ

ಹೆಬ್ರಿಯಲ್ಲಿ ಜಿಲ್ಲಾ ಮಟ್ಟದ ಶ್ರೀವಿಶ್ವಕರ್ಮ ಟ್ರೋಫಿ ಕ್ರಿಕೆಟ್ ಪಂದ್ಯಾಟ.ಕುಂದಾಪುರದ ವಿವಿಸಿ ತಂಡಕ್ಕೆ ಪ್ರಥಮ ಪ್ರಶಸ್ತಿ : ಅಂಬಾಗಿಲಿನ ವೀರಾಂಜನೇಯ ರನ್ನರ್

ಹೆಬ್ರಿ : ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ 2ದಿನಗಳ ವಿಶ್ವಕರ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣನಿಧಿ ಮತ್ತು ಅಶಕ್ತ ಕುಟುಂಬದ ಆರೋಗ್ಯ ನಿಧಿಯ ಸಲುವಾಗಿ  ಸಾರ್ವಜನಿಕರ ಮತ್ತು ವಿಶ್ವಕರ್ಮ ಸಮಾಜದ ಬಾಂಧವರ ಜಿಲ್ಲಾ ಮಟ್ಟದ 60 ಗಜಗಳ ನಾಕೌಟ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ವಿ.ವಿ.ಸಿ.ಕುಂದಾಪುರ ಪ್ರಥಮ ಸ್ಥಾನ ಮತ್ತು ಅಂಬಾಗಿಲಿನ ವೀರಾಂಜನೇಯ ತಂಡವು ರನ್ನರ್ ಪಡೆಯಿತು.
ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ನವೀನ ಕೆ.ಅಡ್ಯಂತಾಯ.ಹೆಬ್ರಿ ಚೈತನ್ಯ ಯುವ ವೃಂದದ ಅಧ್ಯಕ್ಷ ಪ್ರವೀಣ್ ಕುಮಾರ್, ಹೆಬ್ರಿ ವಿಶ್ವಕರ್ಮ ಯುವ ವೃಂದದ ಅಧ್ಯಕ್ಷ ಭುವನೇಂದ್ರ ಆಚಾರ್ಯ ಎಡಂಬಳ್ಳಿ , ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪುರ ರತ್ನಾಕರ ಆಚಾರ್ಯ, ಮಠದಬೆಟ್ಟು ರಾಜೇಶ ಆಚಾರ್ಯ, ಯುವ ವೃಂದದ ಪಧಾದಿಕಾರಿಗಳು ಉಪಸ್ಥಿತರಿದ್ದರು.ಶಿವಪುರ ಚಂದ್ರಶೇಖರ ಆಚಾರ್ಯ ನಿರೂಪಿಸಿ ಸ್ವಾಗತಿಸಿ ವಂದಿಸಿದರು.‌
Exit mobile version