Site icon SportsKannada ಸ್ಪೋರ್ಟ್ಸ್ ಕನ್ನಡ

ಸ್ಪೋರ್ಟ್ಸ್ ಕನ್ನಡ ಕಚೇರಿಯಲ್ಲಿ ಆಯುಧ ಪೂಜೆ ಆಚರಣೆ

ಸ್ಪೋರ್ಟ್ಸ್ ಕನ್ನಡ ಕಚೇರಿಯಲ್ಲಿ ಆಯುಧ ಪೂಜೆ ಆಚರಣೆ

ಉಡುಪಿ: ನವರಾತ್ರಿಯ ಪ್ರಯುಕ್ತ ಇಂದು (ಅ.1) ಸ್ಪೋರ್ಟ್ಸ್ ಕನ್ನಡ ಕಚೇರಿಯಲ್ಲಿ ಆಯುಧ ಪೂಜೆ Simple ಆಗಿ ಹಾಗೂ ಶ್ರದ್ಧೆಯಿಂದ ನೆರವೇರಿತು. ಪ್ರತಿ ವರ್ಷದಂತೆ ಈ ಬಾರಿ ಕೂಡ ಕಚೇರಿಯ ಎಲ್ಲಾ ಉಪಕರಣಗಳು, ಕಂಪ್ಯೂಟರ್‌ಗಳು, ಕ್ಯಾಮೆರಾಗಳು ಮತ್ತು ಕಾರ್ಯಕ್ಕೆ ಉಪಯೋಗವಾಗುವ ವಸ್ತುಗಳಿಗೆ ಪೂಜೆ ಸಲ್ಲಿಸಲಾಯಿತು.

ಈ ಪೂಜಾ ಕಾರ್ಯಕ್ರಮದಲ್ಲಿ ಸ್ಪೋರ್ಟ್ಸ್ ಕನ್ನಡದ ಸಂಸ್ಥಾಪಕರು, ಸಿಬ್ಬಂದಿ ಮತ್ತು ಹಲವು ಹಿರಿಯರು ಉಪಸ್ಥಿತರಿದ್ದರು. ಸಾಂಪ್ರದಾಯಿಕ ರೀತಿಯಲ್ಲಿ ಪೂಜೆ ನೆರವೇರಿದ ಬಳಿಕ, ಪ್ರಸಾದ ವಿತರಣೆ ಕೂಡ ಜರುಗಿತು.

ಸಂಸ್ಥೆಯ ಮುಖ್ಯಸ್ಥ ಕೋಟ ರಾಮಕೃಷ್ಣ ಆಚಾರ್ಯ ಈ ಸಂದರ್ಭದಲ್ಲಿ ಮಾತನಾಡಿ, “ಕೇವಲ ಕೆಲಸವಲ್ಲ, ನಾವು ಬಳಸುವ ಸಾಧನಗಳಿಗೂ ಗೌರವ ತೋರಿಸುವ ಸಂಭ್ರಮ ಇದು. ನಮ್ಮ ಕೆಲಸ ಸುಗಮವಾಗಿ ಸಾಗಲಿ ಎಂಬ ಆಶಯದೊಂದಿಗೆ ಈ ಆಚರಣೆ ನಡೆಸುತ್ತಿದ್ದೇವೆ,” ಎಂದರು.

ಹಿರಿಯ ಆಟಗಾರರಾದ ಯಾದವ್ ನಾಯ್ಕ್ ಕೆಮ್ಮಣ್ಣು, ವಿ.ಲಾತವ್ಯ ಆಚಾರ್ಯ ಉಡುಪಿ,ರಾಯೇಶ್ ಕಿಣಿ,ಯು.ಆರ್.ಸ್ಪೋರ್ಟ್ಸ್ ಪಾಲುದಾರರಾದ ಪ್ರವೀಣ್ ಪಿತ್ರೋಡಿ,ದೇವರಾಜ್ ಸಾಲ್ಯಾನ್,ಸಂದೀಪ್ ಕುಮಾರ್,ಉಡುಪಿಯ ಖ್ಯಾತ ರೂಪದರ್ಶಿ ವಿದ್ಯಾಸರಸ್ವತಿ,ಚಲನಚಿತ್ರ ನಟಿ ಆಶಾ ನಾಯಕ್ ಇನ್ನಂಜೆ,ಶಿವರಾಮ್ ಆಚಾರ್ಯ ಮತ್ತು ಭಾಸ್ಕರ್ ಆಚಾರ್ಯ ಉಪಸ್ಥಿತರಿದ್ದರು.

Exit mobile version