Site icon SportsKannada ಸ್ಪೋರ್ಟ್ಸ್ ಕನ್ನಡ

ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ

 

ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ

ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ ವತಿಯಿಂದ, ಉಡುಪಿ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಹಾಗೂ ಸನ್‌ರೈಸ್ ಕ್ರಿಕೆಟ್ ಅಕಾಡೆಮಿ ರಂಗನಪಲ್ಕೆ ಇವರ ಸಹಭಾಗಿತ್ವದಲ್ಲಿ, ಗಣೇಶ್ ಮಟ್ಟು (ಮಟ್ಟು ಅಸೋಸಿಯೇಟ್ಸ್) ಅವರ ಸಹಕಾರದೊಂದಿಗೆ, ಕೌಡೂರು ಸ್ಟೇಡಿಯಂ, ಗ್ಲಾರಿಡ ಎಸ್ಟೇಟ್ ರಂಗನಪಲ್ಕೆ ಇದರ ಸುಂದರ ಮೈದಾನದಲ್ಲಿ 15 ವರ್ಷ ವಯೋಮಿತಿಯ “ಅಕ್ಷಯ ಟಿ-20 ಕಪ್ – 2026” ಪಂದ್ಯಾವಳಿಗೆ ಭವ್ಯ ಚಾಲನೆ ದೊರೆಯಿತು.

ಉಡುಪಿ ಜಿಲ್ಲೆಯ ಪ್ರಮುಖ 6 ತಂಡಗಳು ಭಾಗವಹಿಸುತ್ತಿರುವ ಈ ಕೂಟದಲ್ಲಿ, ಇಂದು ನಡೆದ ‘A’ ಗುಂಪಿನ ಅರ್ಹತಾ ಸುತ್ತಿನಲ್ಲಿ ಅಕ್ಷಯ ಕ್ರಿಕೆಟ್ ಅಕಾಡೆಮಿ ಹಾಗೂ ಕೆ.ಆರ್.ಎಸ್ ಕಟಪಾಡಿ ತಂಡಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದು ಸೆಮಿ ಫೈನಲ್‌ಗೆ ಅರ್ಹತೆ ಪಡೆದಿವೆ.

ನಾಳೆ (02/05/2026) ‘B’ ಗುಂಪಿನ ಪಂದ್ಯಗಳಲ್ಲಿ ಎಚ್‌ಜೆಸಿ ಕ್ರಿಕೆಟ್ ಅಕಾಡೆಮಿ ಶಿರ್ವ, ಬಾ.ಕಾ. ಬ್ರಹ್ಮಾವರ ಹಾಗೂ ಅಕ್ಷಯ ‘B’ ತಂಡಗಳು ಸೆಣಸಲಿವೆ.

ಬಾನುವಾರ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.

ಇಂದಿನ ಉದ್ಘಾಟನಾ ಸಮಾರಂಭದಲ್ಲಿ ಸಂಯೋಜಕರೂ ಹಿರಿಯ ತರಬೇತುದಾರರಾದ ಸದಾನಂದ ಶಿರ್ವ, ದಯಾನಂದ ಬಂಗೇರ, ಉದಯ ಕಟಪಾಡಿ, ಉಡುಪಿಯ ಖ್ಯಾತ ವಕೀಲರಾದ ಗಣೇಶ್ ಮಟ್ಟು, ಯುಡಿಸಿಎ ಕಾರ್ಯದರ್ಶಿ ರೆನ್ ಟ್ರೇವೊರ್ ಡಯಾಸ್ ಹಾಗೂ ಇನ್ನಿತರ ಸ್ಥಳೀಯ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿದರು.

Exit mobile version