Site icon SportsKannada ಸ್ಪೋರ್ಟ್ಸ್ ಕನ್ನಡ

ಆಟೋ ಚಾಲಕನ ಮಗನಿಂದ ತೆಲಂಗಾಣ DSP.. ಸಿರಾಜ್ ಬರೆದ ಭಾವನಾತ್ಮಕ ಪತ್ರ!

ಆಟೋ ಚಾಲಕನ ಮಗನಿಂದ ತೆಲಂಗಾಣ DSP.. ಸಿರಾಜ್ ಬರೆದ ಭಾವನಾತ್ಮಕ ಪತ್ರ!

‘’ಬಾಲ್ಯದಿಂದಲೂ ನನ್ನ ಪ್ರಯಾಣ ಕಡು ಕಷ್ಟಗಳಿಂದಲೇ ತುಂಬಿತ್ತು. ನನ್ನ ತಂದೆ ಒಬ್ಬ ಆಟೋ ಡ್ರೈವರ್. ನಾವು ಒಂದು ಹೊತ್ತಿನ ಊಟಕ್ಕೂ ಪರದಾಡಿದ ದಿನಗಳೂ ಇವೆ. ಈ ಎಲ್ಲಾ ಸವಾಲುಗಳ ಮಧ್ಯೆ ಕ್ರಿಕೆಟ್ ಬಗ್ಗೆ ಇದ್ದ ನನ್ನ ಉತ್ಸಾಹ ಅಚಲವಾಗಿತ್ತು ಮತ್ತು ನಾನು ಕ್ರಿಕೆಟ್’ನಲ್ಲೇ ನನ್ನ ಭವಿಷ್ಯವನ್ನು ನೋಡುತ್ತಿದ್ದೆ. ಸದಾ ಭಾರತ ಕ್ರಿಕೆಟ್ ತಂಡದ ಪರ ಆಡುವ ಕನಸು ಕಾಣುತ್ತಿದ್ದೆ.

ನಾನು ಕ್ರಿಕೆಟ್ ಪಂದ್ಯವಾಡುತ್ತಿದ್ದಾಗಲೇ ತಂದೆ ಇಲ್ಲವಾಗಿದ್ದು ನನ್ನ ಜೀವನದ ಅತ್ಯಂತ ಭಾವನಾತ್ಮಕ ಕ್ಷಣ. ತಂದೆ ಸಾವಿಗೀಡಾದಾಗ ನಾನು ವಿದೇಶದಲ್ಲಿದ್ದೆ. ಆದರೂ ಭಾರತಕ್ಕೆ ವಾಪಸ್ ಬರಲಿಲ್ಲ. ಕಾರಣ, ನಾನು ಭಾರತ ಪರ ಆಡಬೇಕೆಂಬುದು ತಂದೆಯ ಕನಸಾಗಿತ್ತು.

2023ರ ಏಷ್ಯಾ ಕಪ್ ಫೈನಲ್’ನಲ್ಲಿ ಶ್ರೀಲಂಕಾ ವಿರುದ್ಧ ಭಾರತವನ್ನು ಗೆಲ್ಲಿಸಿದ  ಆಟ ಭಾರತ ಪರ ನನ್ನ ಶ್ರೇಷ್ಠ ಪ್ರದರ್ಶನ.

ಅಲ್ಲಿಂದ ನನ್ನ ಆಟ ಉತ್ತಮವಾಗುತ್ತಲೇ ಸಾಗಿದೆ. ಅದು ನನ್ನ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ಆಗ ತೆಲಂಗಾಣ ಸರ್ಕಾರ ನನಗೆ ಡಿ.ಎಸ್.ಪಿ ಹುದ್ದೆ ನೀಡಿ ಗೌರವಿಸಿದೆ. ಈ ನನ್ನ ಇಡೀ ಪ್ರಯಾಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿ’’                                                – ಮೊಹಮ್ಮದ್ ಸಿರಾಜ್…..

Exit mobile version