ಕ್ರಿಕೆಟ್ವೈದಿಕ್ ಪ್ರೀಮಿಯರ್ ಲೀಗ್ ಭಟ್ ಜೀಸ್ ಸೂಪರ್ ಕಿಂಗ್ಸ್ ಭರ್ಜರಿ...

ವೈದಿಕ್ ಪ್ರೀಮಿಯರ್ ಲೀಗ್ ಭಟ್ ಜೀಸ್ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು : ರಾಕಿಂಗ್ ವೈದಿಕ್ಸ್ ಮುಂಬೈ ರನ್ನರ್ ಅಪ್

-

- Advertisment -spot_img
ಮಂಗಳೂರು: ಜಿ ಎಸ್ ಬಿ ಯ ನೂರಾರು ವೈದಿಕ ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ಕುತೂಹಲ ಕೆರಳಿಸಿದ್ದ ವೈದಿಕ್ ಪ್ರೀಮಿಯರ್ ಲೀಗ್ (ವಿಪಿಎಲ್) ಪಂದ್ಯಾವಳಿಯಲ್ಲಿ ಸುದೇಶ್ ಭಟ್ ಮೂಡುಬಿದಿರೆ  ಹಾಗೂ ಐಕಾನ್ ಪ್ಲೇಯರ್ ಉದಯ್ ಭಟ್ ನೇತೃತ್ವದ ಭಟ್ಜೀಸ್ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದೆ.
ಭಟ್ಜೀಸ್ ಸೂಪರ್ ಕಿಂಗ್ಸ್ ಹಾಗೂ ಮುಂಬೈನ ರಾಕಿಂಗ್ ವೈದಿಕ್ಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು.  ಸಮಯೋಚಿತ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ನೆರವಿನೊಂದಿಗೆ ಭಟ್ಜೀಸ್ ಸೂಪರ್ ಕಿಂಗ್ಸ್ ತಂಡ ಮುಂಬೈ ರಾಕಿಂಗ್ ವೈದಿಕ್ಸ್ ತಂಡವನ್ನು 9 ವಿಕೆಟ್‌ ಅಂತರದಿಂದ ಪರಾಭವಗೊಳಿಸಿ ವೈದಿಕ್ ಪ್ರೀಮಿಯರ್‌ ಲೀಗ್‌ ಚಾಂಪಿಯನ್ನಾಗಿ ಹೊರಹೊಮ್ಮಿತು.
ಬರಿಮಾರು ಮಹಾಮಾಯ ಮೈದಾನದಲ್ಲಿ ನಡೆದ ವೈದಿಕ್ ಪ್ರೀಮಿಯರ್ ಲೀಗ್ (ವಿಪಿಎಲ್) ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಅಜಿತ್ ಭಟ್, ಅರ್ಜುನ್ ಭಟ್ , ಹರೀಶ್ ಭಟ್ ನೇತೃತ್ವದ ರಾಕಿಂಗ್ ವೈದಿಕ್ಸ್ ಮುಂಬೈ ತಂಡವನ್ನು ಮಣಿಸುವ ಮೂಲಕ ಭಟ್ಜೀಸ್ ಸೂಪರ್ ಕಿಂಗ್ಸ್ ತಂಡ ನಾಲ್ಕನೇ ಬಾರಿಗೆ ಪ್ರತಿಷ್ಠಿತ ವಿಪಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.
ವೈದಿಕ್  ಪ್ರೀಮಿಯರ್ ಲೀಗ್ ಪಂದ್ಯಾಕೂಟ ವೀಕ್ಷಿಸಲು ಬರಿಮಾರುವಿನ ಮಹಾಮಾಯ ಕ್ಷೇತ್ರದ ಮೈದಾನದಲ್ಲಿ ವೈದಿಕ ಸಮೂಹ ಕಿಕ್ಕಿರಿದು ತುಂಬಿತ್ತು. ವೈದಿಕ ಕ್ರೀಡೋತ್ಸವ ವತಿಯಿಂದ  ಎರಡು ದಿನಗಳ ಕಾಲ ನಡೆದ ವೈದಿಕ್ ಪ್ರೀಮಿಯರ್‌ ಲೀಗ್‌ನ ಒಟ್ಟು ಆರು  ತಂಡಗಳ ನಡುವೆ ನಡೆದ ವಿಪಿಎಲ್ ರೋಚಕ ಹಣಾಹಣಿಗೆ ತೆರೆ ಕಂಡಿದ್ದು ಈ ಕ್ರಿಕೆಟ್ ತಂಡದ ಸದಸ್ಯರಿಗೆ ಪಂಡಿತ್ ಕಾಶಿನಾಥ್ ಆಚಾರ್ಯ, ರಾಕೇಶ್ ಪ್ರಭು ಬರಿಮಾರು, ರವೀಶ್ ಪ್ರಭು ಬರಿಮಾರು, ಸೇರಿದಂತೆ ಹಲವಾರು ಹಿರಿಯ ವೈದಿಕರು, ಯುವ ನಾಯಕರು ಪ್ರೋತ್ಸಾಹಿಸಿದರು.
ಪ್ರಶಸ್ತಿ ವಿತರಣಾ ಸಂದರ್ಭದಲ್ಲಿ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ಆಯೋಜಕರು ಪ್ರಶಸ್ತಿ ವಿತರಿಸಿದರು. ಕ್ರೀಡೆಗಳಿಂದ ವೈದಿಕಸಮೂಹ ಒಗ್ಗೂಡುವುದರೊಂದಿಗೆ ಸ್ನೇಹ, ಸೌಹಾರ್ದತೆ ಹೆಚ್ಚಾಗುವಂತಾಗಬೇಕು ಎಂದು ಪಂಡಿತ್ ಕಾಶಿನಾಥ್ ಆಚಾರ್ಯ ಅಭಿಪ್ರಾಯಪಟ್ಟರು. ‘ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವೈದಿಕ ಯುವಕರ ಪ್ರತಿಭೆಯನ್ನು ಹೊರತರಲು ವಿಪಿಎಲ್ ವೇದಿಕೆ ಸೃಷ್ಟಿಯಾಗಿದೆ. ಕ್ರೀಡೆಗಳಿಂದ ಎಲ್ಲರ ಮನಸ್ಸು ಒಂದಾಗಬೇಕು’ ಎಂದರು.
ಮಹಾಮಾಯ ಕ್ಷೇತ್ರದ  ಅನುವಂಶಿಯ ಮೊಕ್ತೇಸರರಾದ ರಾಕೇಶ್ ಪ್ರಭು ಬರಿಮಾರು ಮಾತನಾಡಿ, ಪಂಡಿತ್ ಕಾಶಿನಾಥ್ ಆಚಾರ್ಯ ಅವರ ಭಗೀರಥ ಪ್ರಯತ್ನವನ್ನು ಮೆಚ್ಚಿ ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯನ್ನು ವ್ಯವಸ್ಥಿತವಾಗಿ,  ಅಚ್ಚುಕಟ್ಟಾಗಿ ಆಯೋಜಿಸಿರುವುದಕ್ಕೆ ಶ್ಲಾಘಿಸಿದರು. ನಂತರ ಮಾತನಾಡಿದ, ರವೀಶ್ ಪ್ರಭು ಬರಿಮಾರು ಕ್ರೀಡೆಗೆ ಮೊದಲಿನಿಂದಲು ನಮ್ಮ ಸಹೋದರ ಹಾಗೂ ನಮ್ಮ ಕುಟುಂಬ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮುಂದೆಯೂ ಸಹ ಅದೇ ರೀತಿ ನಮ್ಮ ಸಹಾಯ ಸಹಕಾರ ಇರುತ್ತದೆ. ಟೂರ್ನಿಯಲ್ಲಿ ಎಲ್ಲರೂ ಕ್ರೀಡಾ ಮನೋಭಾವದಿಂದ ಆಟವಾಡಿದ್ದೀರಿ ಹಾಗೂ ಎಲ್ಲ ತಂಡದ ಆಟಗಾರರಿಗೆ ಒಳ್ಳೆಯದಾಗಲಿ ಎಂದು ಶುಭಕೋರಿದರು.
ಪ್ರೇಕ್ಷಕರಿಗಾಗಿ  ಲಕ್ಕಿ ಡ್ರಾ ಹಾಗೂ ವಿವಿಧ ಸ್ಪರ್ಧೆಗಳನ್ನು ಮಾಡಲಾಯಿತು ಅದರಲ್ಲಿ ವಿಜೇತರಿಗೂ ವಿಶೇಷ ಬಹುಮಾನಗಳನ್ನು ವಿಪಿಎಲ್ ಆಯೋಜಕರು ನೀಡಿದರು. ಈ ಸಂದರ್ಭ ಶ್ರೀಮತಿ ಕವಿತಾ ಆಚಾರ್ಯ ಮತ್ತು ಶ್ರೀಮತಿ ರಂಜನಾ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆದ ವಿ ಪಿ ಎಲ್ ಟೂರ್ನಿಯಲ್ಲಿ ನಿರ್ಣಾಯಕರುಗಳಾಗಿ  ಗಿರೀಶ್ ಪೈ ಮಂಗಳೂರು, ವಿಘ್ನೇಶ್ ಹೆಗ್ಡೆ,  ಪ್ರತಾಪ್ ಮೂಡುಬಿದಿರೆ ಮತ್ತು ಲಕ್ಷ್ಮೀಶ್ ಬಾಳಿಗ ಸಹಕರಿಸಿದರೆ ಲಕ್ಷ್ಮೀಶ ಮಲ್ಯ ಸ್ಕೋರರ್ ಆಗಿ ಸಹಕರಿಸಿದರು. ಮಧುಸೂದನ್ ಭಟ್ ಇವರು ಸಂಸ್ಕೃತದಲ್ಲಿ ವೀಕ್ಷಕ ವಿವರಣೆಯನ್ನುನೀಡಿದರೆ ಉಳಿದಂತೆ ಸುರೇಶ್ ಭಟ್ ಮುಲ್ಕಿ, ಅರವಿಂದ್ ಭಟ್ ಚೆಂಪಿ,  ರಮೇಶ್ ಇನ್ನಿತರರು ವಿವಿಧ ಭಾಷೆಗಳಲ್ಲಿ ವೀಕ್ಷಕ ವಿವರಣೆಯನ್ನು ನೀಡಿದರು.
ಸುರೇಶ್ ಭಟ್ ಮುಲ್ಕಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ರಮೇಶ್ ಭಟ್ ಉಡುಪಿ ಸಹಕರಿಸಿದರು.

LEAVE A REPLY

Please enter your comment!
Please enter your name here

four × three =

Latest news

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...
- Advertisement -spot_imgspot_img

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

Must read

- Advertisement -spot_imgspot_img

You might also likeRELATED
Recommended to you